Monday, May 20, 2024

ಕಾಂಗ್ರೆಸ್ ಗೆದ್ದರೆ ಇಂಡಿಯನ್ ಕ್ರಿಕೆಟ್ ಟೀಂ ನಲ್ಲಿ ಮುಸ್ಲಿಮರೇ ಇರುತ್ತಾರೆ: ಪ್ರಧಾನಿ ಮೋದಿಯಿಂದ ಮತ್ತೊಮ್ಮೆ ಕೀಳುಮಟ್ಟದ ಹೇಳಿಕೆ

Most read

ಹೊಸದಿಲ್ಲಿ: ಕಾಂಗ್ರೆಸ್ ನೇತೃತ್ವದ INDIA ಒಕ್ಕೂಟ ಅಧಿಕಾರಕ್ಕೆ ಬಂದರೆ, ದೇಶದ ಹೆಣ್ಣುಮಕ್ಕಳ ಮಾಂಗಲ್ಯವನ್ನೂ ಬಿಡದೇ ಕಿತ್ತುಕೊಳ್ಳುತ್ತಾರೆ ಎಂದು ಇತ್ತೀಚಿಗಷ್ಟೇ ಭಾಷಣವೊಂದರಲ್ಲಿ ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ ಈಗ ಮತ್ತೊಂದು ಹಂತ ಕೆಳಗೆ ಇಳಿದು, ಕಾಂಗ್ರೆಸ್ ಗೆದ್ದರೆ ಭಾರತ ಕ್ರಿಕೆಟ್ ತಂಡದಲ್ಲಿ ಮುಸ್ಲಿಮರನ್ನು ತುಂಬಿಸುತ್ತದೆ ಎಂದು ವಿಚಿತ್ರ ಹೇಳಿಕೆ ನೀಡಿದ್ದಾರೆ.

ಈ ಬಾರಿಯ ಚುನಾವಣಾ ಭಾಷಣಗಳಲ್ಲಿ ಸುಳ್ಳಿನ ಮೇಲೆ ಸುಳ್ಳು ಹೇಳುತ್ತಿರುವ ಪ್ರಧಾನಿ ಮೋದಿ, ಕಾಂಗ್ರೆಸ್ ಪಕ್ಷ ದಲಿತರ, ಹಿಂದುಳಿದವರ ಮೀಸಲಾತಿಯನ್ನು ಕಿತ್ತು ಮುಸಲ್ಮಾನರಿಗೆ ನೀಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದೆ ಎಂದು ಸುಳ್ಳು ಹೇಳಿದ್ದರು.

ಈಗ ಅವರು ಮುಸ್ಲಿಮರ ವಿರುದ್ಧ ದ್ವೇಷಭಾಷಣ ಮುಂದುವರೆಸಿದ್ದು,  ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮುಸ್ಲಿಂರಿಗೆ ಕ್ರೀಡೆಯಲ್ಲೂ ಮೀಸಲಾತಿ ಕೊಡುತ್ತದೆ, ಇಂಡಿಯನ್ ಕ್ರಿಕೆಟ್ ಟೀಮ್ ನಲ್ಲೂ ಮುಸ್ಲಿಂರೇ ತುಂಬಿಕೊಳ್ತಾರೆ ಎಂದು ಮಧ್ಯಪ್ರದೇಶದ ಚುನಾವಣಾ ಪ್ರಚಾರಸಭೆಯ ಭಾಷಣದಲ್ಲಿ ಹೇಳಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಶ್ರೀರಾಮಮಂದಿರಕ್ಕೆ ಬಾಬ್ರಿ ಬೀಗ ಹಾಕಿ ಬಿಡುತ್ತಾರೆ ಎಂದು ಹೇಳಿದ ಅವರು, ತಮ್ಮ ಮುಸ್ಲಿಂ ದ್ವೇಷ ಮತ್ತು‌ ಧರ್ಮದ ಹೆಸರಲ್ಲಿ ಮತಯಾಚಿಸುವ ಪ್ರಯತ್ನವನ್ನು ಮುಂದುವರೆಸಿದ್ದಾರೆ.

ಈ ಬಾರಿಯ ಚುನಾವಣಾ ಪ್ರಚಾರ ಸಭೆಗಳಲ್ಲಿ ಮೋದಿ ಹಲವು ಬಾರಿ ನೀತಿಸಂಹಿತೆ ಉಲ್ಲಂಘಿಸಿದರೂ ದೇಶದ ಚುನಾವಣಾ‌ ಆಯೋಗ ತುಟಿ ಎರಡು ಮಾಡುತ್ತಿಲ್ಲ.

More articles

Latest article