ಮನುಷ್ಯ ಜಾತಿ ತಾನೊಂದೇ ವಲಂ ಎನ್ನುವ ಮಾದರಿ ಸಂಹಿತೆಯಲ್ಲಿ ಅರಳಿಕೊಂಡ ಚಲನ ಚಿತ್ರ “ಉತ್ತರ”. ಅಮೃತವರ್ಷಿಣಿ ಖ್ಯಾತಿಯ ದಿನೇಶ್ ಬಾಬು ಬರೆದು ನಿರ್ದೇಶಿಸಿರುವ ಸ್ಟಾರ್ ಕಲಾವಿದರಿಗೆ ಕೇಶ ವಿನ್ಯಾಸ ಮಾಡಿದ ನಾಗೇಶ್ವರ ರಾವ್ ...
ಬೆಂಗಳೂರು : ಸಿನಿಮಾ ಅಂದ್ರೆನೆ ಮನರಂಜನೆ. ಆ ಮನರಂಜನೆಗಾಗಿಯೇ ಜನ ಕಾಯ್ತಾ ಇರುತ್ತಾರೆ. ನಕ್ಕು ಮನಸ್ಸನ್ನ ಕೂಲ್ ಆಗಿಸಿಕೊಳ್ಳುವಂತ ಸಿನಿಮಾವೊಂದು ಸಿದ್ಧವಾಗುತ್ತಿದೆ. ಅದರ ಹೆಸರೇ ಗೊಲ್ಮಾಲ್ ಗ್ಯಾಂಗ್. ಇದೀಗ ಒಂದೊಳ್ಳೆ ಟೀಸರ್...
ಬೆಂಗಳೂರು : ಅಭಿನಯ ಸರಸ್ವತಿ ಶೃತಿ ಅವರ 175ನೇ ಸಿನಿಮಾಗೆ ಇಂದು ಮುಹೂರ್ತ ನೆರವೇರಿದೆ. ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಮದರ್ ನೆರವೇರಿದೆ. ವಿನೋದ್ ಪ್ರಭಾಕರ್ ಅವರು ಮುಹೂರ್ತಕ್ಕೆ ಬಂದು ಶುಭ ಹಾರೈಸಿದ್ದಾರೆ. ನಾಗತಿಹಳ್ಳಿ...
‘ಡೇರ್ ಡೆವಿಲ್ ಮುಸ್ತಫಾ’ ಸಿನಿಮಾ ತನ್ನ ಕಥಾನಾಯಕನನ್ನು ಒಬ್ಬ ಸಹಜ ಮನುಷ್ಯನನ್ನಾಗಿ ಕಟ್ಟಿಕೊಡುವ ಬದಲು ಆದರ್ಶದ ಪ್ರತಿಮೆಯನ್ನಾಗಿ ಮಾಡಿದ್ದು, ಅಲ್ಪಸಂಖ್ಯಾತರು ಸಮಾಜದಲ್ಲಿ ಒಪ್ಪಿಗೆ ಪಡೆಯಲು ಸದಾ ಅಗ್ನಿಪರೀಕ್ಷೆ ಎದುರಿಸಬೇಕೆಂಬ ಒಳಧ್ವನಿಯನ್ನು ಹೊಂದಿರುವುದು ವಿಮರ್ಶಾತ್ಮಕವಾಗಿ...
ನವದೆಹಲಿ : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸುಪ್ರೀಂಕೋರ್ಟ್ನಲ್ಲಿ ಕೋರಿದ್ದ ಜಾಮೀನು ಅರ್ಜಿ ವಿಚಾರಣೆ ಅಂತ್ಯವಾಗಿದೆ. ಸದ್ಯಕ್ಕೆ ದರ್ಶನ್ಗೆ ಬಿಡುಗಡೆ ಭಾಗ್ಯ ಇಲ್ಲ. ಕೊಲೆ ಆರೋಪಿ ದರ್ಶನ್...
ಭಾರತದ ಆಫ್-ಸ್ಪಿನ್ನರ್ ಶ್ರೇಯಾಂಕಾ ಪಾಟೀಲ್ ಅವರು ನೆದರ್ಲ್ಯಾಂಡ್ಸ್ ವಿರುದ್ಧದ ಗ್ರೂಪ್ ಹಂತದ ಪಂದ್ಯದ ಸಮಯದಲ್ಲಿ ಗಾಯಗೊಂಡ ನಂತರ ಮಹಿಳಾ ಟಿ20 ವಿಶ್ವಕಪ್ನ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಐಸಿಸಿ ಅವರು ಪಂದ್ಯಾವಳಿಯಿಂದ ಹಿಂದೆ ಸರಿಯುವುದನ್ನು ದೃಢಪಡಿಸಿತು ಮತ್ತು ಪ್ರೇಮಾ ರಾವತ್ ಅವರನ್ನು...
ಮೈಸೂರು: ಬಹುನಿರೀಕ್ಷಿತ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಟೂರ್ನಿಯು ಜೂನ್ 20 ರಿಂದ ಜುಲೈ 12 ರವರೆಗೆ ನಡೆಯಲಿದೆ. ಇದರ ಅಧಿಕೃತ ಗೀತೆಯನ್ನು ಮೈಸೂರಿನಲ್ಲಿ ಬಿಡುಗಡೆ ಮಾಡಲಾಯಿತು. ಮೈಸೂರು ವಾರಿಯರ್ಸ್ ತಂಡ ಪ್ರಕಟಲಾಗಿದೆ. ತಂಡದ ನಾಯಕನಾಗಿ ವೈಶಾಖ್ ವಿಜಯ್ ಕುಮಾರ್ ಆಯ್ಕೆಯಾಗಿದ್ದಾರೆ.
ಭಾರತದ ಮಾಜಿ ಕ್ರಿಕೆಟಿಗ ಹಾಗೂ ಕೆಎಸ್ಸಿಎ ಮಾಜಿ ಕಾರ್ಯದರ್ಶಿ ಜಾವಗಲ್ ಶ್ರೀನಾಥ್, ಕೆಎಸ್ಸಿಎ ಕಾರ್ಯದರ್ಶಿ ಸಂತೋಷ್ ಮೆನನ್ ಮತ್ತು ಮೈಸೂರು ವಲಯದ ಸಂಚಾಲಕ ಶ್ರೀನಿವಾಸ್ ಪ್ರಸಾದ್ ಅವರೊಂದಿಗೆ ಸೇರಿ ಈ ಗೀತೆಯನ್ನು ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಜಾವಗಲ್ ಶ್ರೀನಾಥ್, ಮಹಾರಾಜ ಟ್ರೋಫಿಯು ಪ್ರಾದೇಶಿಕ ಪ್ರತಿಭೆಗಳಿಗೆ ಸದಾ ಅತ್ಯುತ್ತಮ ವೇದಿಕೆಯನ್ನು ಒದಗಿಸುತ್ತಾ ಬಂದಿದೆ. ಈ ಹೊಸ ಅಧಿಕೃತ ಗೀತೆಯ ಹಿಂದಿರುವ ಉತ್ಸಾಹವನ್ನು ನೋಡಿದರೆ,2026 ರ ಸೀಸನ್ ಕರ್ನಾಟಕದಾದ್ಯಂತ ಸ್ಪರ್ಧಾತ್ಮಕ ಕ್ರಿಕೆಟ್ ಮತ್ತು ಅಭಿಮಾನಿಗಳ ಮನರಂಜನೆಯಲ್ಲಿ ಒಂದು ಹೊಸ ಮೈಲಿಗಲ್ಲನ್ನು ಸೃಷ್ಟಿಸಲಿದೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ ಎಂದರು.
ಕೆಎಸ್ಸಿಎ ಕಾರ್ಯದರ್ಶಿ ಸಂತೋಷ್ ಮೆನನ್ ಅವರು,ಗ್ರಾಮೀಣ ಮಟ್ಟದ ಪ್ರತಿಭೆಗಳು ಮತ್ತು ವೃತ್ತಿಪರ ಕ್ರಿಕೆಟ್ ವೇದಿಕೆಯ ನಡುವಿನ ಅಂತರವನ್ನು ಕಡಿಮೆ ಮಾಡುವುದು ಕೆಎಸ್ ಸಿಎನಲ್ಲಿ ನಮ್ಮ ಪ್ರಮುಖ ಗುರಿಯಾಗಿದೆ. ಈ ಗೀತೆಯು ಕರ್ನಾಟಕದ ಕ್ರಿಕೆಟ್ ಜಗತ್ತಿನ ಚೇತನ, ಹಸಿವು ಮತ್ತು ಉತ್ಸಾಹವನ್ನು ಪ್ರತಿಬಿಂಬಿಸುತ್ತದೆ, ಇದು ವರ್ಷದಿಂದ ವರ್ಷಕ್ಕೆ ಮತ್ತಷ್ಟು ಬಲಗೊಳ್ಳುತ್ತಿದೆ ಎಂದು ತಿಳಿಸಿದರು.
ಮೈಸೂರು ವಲಯದ ಸಂಚಾಲಕ ಶ್ರೀನಿವಾಸ್ ಪ್ರಸಾದ್ ಮಾತನಾಡಿ,ಮೈಸೂರಿಗೆ ಕ್ರೀಡೆಯ ಬಗ್ಗೆ ಅಪಾರ ಪ್ರೀತಿಯಿದೆ. ಈ ಬಾರಿಯ ಆವೃತ್ತಿಯ ಮೊದಲ ಹಂತದ ಪಂದ್ಯಗಳಿಗೆ ನಮ್ಮ ನಗರ ಆತಿಥ್ಯ ವಹಿಸುತ್ತಿರುವುದು ನಮಗೆ ಸಿಕ್ಕ ಗೌರವವಾಗಿದೆ. ನಮ್ಮ ಸಾಂಸ್ಕೃತಿಕ ರಾಜಧಾನಿಯಲ್ಲಿಯೇ ಟೂರ್ನಿಯ ಅಧಿಕೃತ ಗೀತೆಯನ್ನು ಅನಾವರಣಗೊಳಿಸಿರುವುದು ಇಡೀ ಕ್ರಿಕೆಟ್ ಹಬ್ಬಕ್ಕೆ ಅತ್ಯಂತ ರೋಮಾಂಚಕ ಮುನ್ನುಡಿಯನ್ನು ಬರೆದಿದೆ ಎಂದರು.
ಈ ಸಂದರ್ಭದಲ್ಲಿ ಸೈಕಲ್ ಪ್ಯೂರ್ ಅಗರಬತ್ತಿ ಪ್ರಾಯೋಜಕತ್ವದ ಹಾಗೂ ಎನ್.ಆರ್. ಗ್ರೂಪ್ ಒಡೆತನದ ಮೈಸೂರು ವಾರಿಯರ್ಸ್ ತಂಡವು ಮುಂಬರುವ ಸೀಸನ್ ಗಾಗಿ ತನ್ನ ಬಹುನಿರೀಕ್ಷಿತ ತಂಡವನ್ನು ಅಧಿಕೃತವಾಗಿ ಘೋಷಿಸಿತು.
ಕರ್ನಾಟಕ ಮತ್ತು ಐಪಿಎಲ್ ನ ಪ್ರಸಿದ್ಧ ವೇಗದ ಬೌಲರ್ ವೈಶಾಖ್ ವಿಜಯ್ ಕುಮಾರ್ ಅವರಿಗೆ ಈ ಸೀಸನ್ ನಲ್ಲಿ ತಂಡವನ್ನು ಮುನ್ನಡೆಸುವ ನಾಯಕತ್ವದ ಜವಾಬ್ದಾರಿನೀಡಲಾಗಿದೆ ಎಂದು ಫ್ರಾಂಚೈಸಿ ಘೋಷಿಸಿತು. ವೈಶಾಖ್ ಅವರು ತಮ್ಮ ದೇಶಿ ಮತ್ತು ಐಪಿಎಲ್ ಕ್ರಿಕೆಟ್ ನ ಅಪಾರ ಅನುಭವವನ್ನು ತಂಡಕ್ಕೆ ಧಾರೆ ಎರೆಯಲಿದ್ದು, ತಂಡದ ಯುವ ಆಟಗಾರರಿಗೆ ಮಾರ್ಗದರ್ಶಕರಾಗಿಯೂ ದ್ವಿಪಾತ್ರ ನಿರ್ವಹಿಸಲಿದ್ದಾರೆ.
ಮುಖ ಆಟಗಾರರು: ಅಂತರರಾಷ್ಟ್ರೀಯ ತಾರೆ ದೇವದತ್ ಪಡಿಕ್ಕಲ್, ಆಕ್ರಮಣಕಾರಿ ಆಲ್ ರೌಂಡರ್ ಮನೋಜ್ ಭಾಂಡಗೆ, ಚೇತನ್ ಎಲ್.ಆರ್. ಮತ್ತು ರಿತೇಶ್ ಭಟ್ಕಲ್. ಈ ಸೀಸನ್ ನಲ್ಲಿ ಗ್ರಾಮೀಣ ಮತ್ತು ತಳಮಟ್ಟದ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಫ್ರಾಂಚೈಸಿ ವಿಶೇಷ ಒತ್ತು ನೀಡಿದೆ.
ಹೊಸ ತಂಡದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಸೈಕಲ್ ಪ್ಯೂರ್ ಅಗರಬತ್ತಿಯ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮೈಸೂರು ವಾರಿಯರ್ಸ್ ತಂಡದ ಮಾಲೀಕ ಅರ್ಜುನ್ ರಂಗ ಅವರು, ಈ ವರ್ಷದ ತಂಡವು ಕರ್ನಾಟಕ ಕ್ರಿಕೆಟ್ನ ಉಜ್ವಲ ಭವಿಷ್ಯವನ್ನು ಪ್ರತಿಬಿಂಬಿಸುತ್ತದೆ. ಯುವ ಆಟಗಾರರಲ್ಲಿ ಗೆಲ್ಲುವ ಹಸಿವು ಎದ್ದು ಕಾಣುತ್ತಿದೆ. ಗ್ರಾಮೀಣ ಮಟ್ಟದಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ಪ್ರತಿಭೆಗಳಿಗೆ ಇಂತಹ ಪ್ರಮುಖ ವೇದಿಕೆಯನ್ನು ಕಲ್ಪಿಸಿಕೊಡಲು ನಾವು ಹೆಮ್ಮೆಪಡುತ್ತೇವೆ,” ಎಂದು ಹೇಳಿದರು.
ಮುಖ್ಯ ಕೋಚ್ ಆರ್.ಎಕ್ಸ್ ಮುರಳೀಧರ್ ಅವರು ತಂಡದ ಕಾರ್ಯತಂತ್ರದ ಬಗ್ಗೆ ಇದೇ ರೀತಿಯ ಆಶಾವಾದವನ್ನು ವ್ಯಕ್ತಪಡಿಸಿ, “ನಮ್ಮ ತಂಡವು ಅನುಭವ ಮತ್ತು ಯುವ ಶಕ್ತಿಯ ಪರಿಪೂರ್ಣ ಸಮತೋಲನವನ್ನು ಹೊಂದಿದೆ. ವೈಶಾಖ್ ಅವರಂತಹ ನಾಯಕನ ನೇತೃತ್ವದಲ್ಲಿ ನಮ್ಮ ತಂಡವು ಈ ಸೀಸನ್ನಲ್ಲಿ ಅತ್ಯಂತ ಸಕಾರಾತ್ಮಕ ಮತ್ತು ನಿರ್ಭೀತ ಕ್ರಿಕೆಟ್ ಆಡಲಿದ್ದು, ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಲಿದೆ ಎಂದು ತಿಳಿಸಿದರು.
ನಾಯಕತ್ವದ ಜವಾಬ್ದಾರಿಯನ್ನು ಸ್ವೀಕರಿಸಿದ ನಾಯಕ ವೈಶಾಖ್ ವಿಜಯ್ ಕುಮಾರ್ ಅವರು ತಮ್ಮ ತಂಡದ ಮೇಲೆ ಅಪಾರ ವಿಶ್ವಾಸ ವ್ಯಕ್ತಪಡಿಸಿದ್ದು, ಮೈಸೂರು ನಗರವು ಹೆಮ್ಮೆಪಡುವಂತಹ ಕ್ರಿಕೆಟ್ ಪ್ರದರ್ಶನವನ್ನು ನೀಡುವುದಾಗಿ ಭರವಸೆ ನೀಡಿದರು.
ಮೈಸೂರಿನಲ್ಲಿ ಆರಂಭ ಟೂರ್ನಿಯು ಮೈಸೂರಿನಲ್ಲಿ ಪ್ರಾರಂಭವಾಗಿ ನಂತರ ಹುಬ್ಬಳ್ಳಿ ಮತ್ತು ಬೆಂಗಳೂರಿಗೆ ಸ್ಥಳಾಂತರಗೊಳ್ಳಲಿದ್ದು, ಕರ್ನಾಟಕದಾದ್ಯಂತ ಇರುವ ಅಭಿಮಾನಿಗಳಿಗೆ ಉನ್ನತ ಗುಣಮಟ್ಟದ ಕ್ರಿಕೆಟ್ ರಸದೌತಣವನ್ನು ಉಣಬಡಿಸಲಿದೆ. ಕ್ರಿಕೆಟ್ ಪ್ರೇಮಿಗಳು ಜೂನ್ 20 ರಿಂದ ಜುಲೈ 12, ರವರೆಗೆ ನಡೆಯುವ ಎಲ್ಲಾ ಪಂದ್ಯಗಳನ್ನು ಕಣ್ಣುಂಬಿಕೊಳ್ಳಬಹುದು. ಪಂದ್ಯಗಳ ಟಿಕೆಟ್ಗಳು ಡಿಸ್ಟ್ರಿಕ್ಟ್ ಬೈ ಜೊಮ್ಯಾಟೋ ಆಪ್ನಲ್ಲಿ ಲಭ್ಯವಿರುತ್ತವೆ.
ಅಲ್ಜೀರಿಯಾ ವಿರುದ್ಧದ ಪಂದ್ಯದಲ್ಲಿ ಅದ್ಭುತ ಹ್ಯಾಟ್ರಿಕ್ ಗಳಿಸುವ ಮೂಲಕ ಲಿಯೋನೆಲ್ ಮೆಸ್ಸಿ ತಮ್ಮ ವಿಶ್ವಕಪ್ ಇತಿಹಾಸದಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ಇದು 2026 ರ ಪಂದ್ಯಾವಳಿಗೆ ಒಂದು ಅದ್ಭುತ ಆರಂಭವನ್ನು ನೀಡಿತು. ಆರು ಫಿಫಾ...
ಮುಂಬೈ : ಜುಲೈ 4 ರಿಂದ ಆರಂಭವಾಗಲಿರುವ ಶ್ರೀಲಂಕಾ ಪ್ರವಾಸಕ್ಕಾಗಿ ಭಾರತದ ಅಂಡರ್-19 ತಂಡದಲ್ಲಿ ಲೆಜೆಂಡರಿ ಬ್ಯಾಟ್ಸ್ಮನ್ ರಾಹುಲ್ ದ್ರಾವಿಡ್ ಅವರ ಕಿರಿಯ ಪುತ್ರ ಅನ್ವೇ ದ್ರಾವಿಡ್ ಅವರನ್ನು ಗುರುವಾರ ಸೇರಿಸಿಕೊಳ್ಳಲಾಗಿದೆ....