Saturday, July 27, 2024

ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕುರಿತು ಮಾಧ್ಯಮಗಳಲ್ಲಿಯೇ ಎರಡು ಅಭಿಪ್ರಾಯವಿದೆ, FSL ವರದಿ ಬರಲಿ : ಡಾ. ಜಿ ಪರಮೇಶ್ವರ್

Most read

ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಮಾಧ್ಯಮಗಳಲ್ಲಿಯೇ ಎರಡು ಅಭಿಪ್ರಾಯವಿದೆ. ಈ ನಿಟ್ಟಿನಲ್ಲಿ ಸ್ವಯಂಪ್ರೇರಿತ ಕೇಸ್ ದಾಖಲಾಗಿದೆ. ಎಫ್ ಎಸ್ ಎಲ್ ತನಿಖಾ ವರದಿಯಲ್ಲಿ ಸಾಬೀತಾದರೆ ಅಂತಹವರಿಗೆ ಕಠಿಣ‌ ಶಿಕ್ಷೆ‌ ನೀಡಲು ನಾವು ಬದ್ಧ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಭರವಸೆ ನೀಡಿದರು.

ವಿಧಾನಸಭೆಯಲ್ಲಿ ಘಟನೆಯ ಬಗ್ಗೆ ನಡೆದ ಚರ್ಚೆಗೆ ಉತ್ತರ ನೀಡಿದ ಅವರು, ರಾಜಕೀಯ ಚರ್ಚೆ ಮಾಡಲು ಇಂತಹ ಗಂಭೀರವಾದ ವಿಚಾರ ಉಪಯೋಗ ಮಾಡ್ತಿದ್ದೇವೆ. ಇಂತಹ ವಿಚಾರ ಚರ್ಚೆ ಮಾಡುವಾಗ ನೈಜ ವಿಚಾರವಾಗಿ ಚರ್ಚೆ ಮಾಡಬೇಕು. ಹಾಗಾದಾಗ ಈ‌ ರೀತಿಯ ಘಟನೆಗಳು ಮರುಕಳಿಸಲ್ಲ ಎಂದರು.

ಕಾಂಗ್ರೆಸ್ ಪಕ್ಷಕ್ಕೆ ದೇಶಪ್ರೇಮದ ಪಾಠದ ಅಗತ್ಯ ಇಲ್ಲ. ದೇಶದ ಸ್ವಾತಂತ್ರ್ಯಕ್ಕೆ ಎಷ್ಟು ಜನರನ್ನು ಬಲಿ ಕೊಟ್ಟಿಲ್ಲ? ಸ್ವಾತಂತ್ರ್ಯ ಪೂರ್ವ ಕಾಂಗ್ರೆಸ್ ಹಾಗೂ ಇಂದಿನ ಕಾಂಗ್ರೆಸ್ ಬೇರೆ ಆಗಿರಬಹುದು. ಆದರೆ, ನಮ್ಮ ಬದ್ಧತೆ, ನಿಲುವುಗಳಲ್ಲಿ‌ ಬದಲಾವಣೆ ಆಗಿಲ್ಲ. ಹಾಗಾಗಿ ಕಾಂಗ್ರೆಸ್ ಗೆ ದೇಶ ಪ್ರೇಮದ ಪಾಠ ಮಾಡುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು. ಪ್ರಧಾನಿ ಮೋದಿ ಪಾಕಿಸ್ತಾನಕ್ಕೆ ಹೋದಾಗ ನಾವು ತಪ್ಪು ತಿಳಿದುಕೊಂಡಿದ್ದೆವಾ? ಎಂದರು.

ಈ‌ ಘಟನೆ ಆಗಬಾರದಿತ್ತು. ಮಾಧ್ಯಮಗಳಲ್ಲಿ ಎರಡು ಅಭಿಪ್ರಾಯವಿದೆ. ಈ ನಿಟ್ಟಿನಲ್ಲಿ ಸ್ವಯಂಪ್ರೇರಿತ ಕೇಸ್ ದಾಖಲಾಗಿದೆ. ಗೆದ್ದಾಗ ಅವರವರ ಅಭಿಮಾನಿಗಳು ಬಂದಿದ್ದಾರೆ. ಆದರೆ ಯಾರಿಗೂ ಬಿಡಬಾರದಿತ್ತು. ಪಾಕಿಸ್ತಾನ ಘೋಷಣೆ ಕೂಗಿದರೆ ಅದನ್ನು ತಾಂತ್ರಿಕವಾಗಿ ತನಿಖೆ ಆಗಬೇಕು. ಘೋಷಣೆ ಕೂಗಿದ್ದರೆ ಅವನಿಗೆ ಒಂದು ಕ್ಷಣ ಬಿಡಲ್ಲ. ಕಾನೂನಿನಲ್ಲಿ ಏನು ಶಿಕ್ಷೆ ಕೊಡಬೇಕೋ‌ ಅದನ್ನು ನೀಡುತ್ತೇವೆ ಎಂದು ಹೇಳಿದರು.

More articles

Latest article