Monday, May 20, 2024

ಅಯ್ಯಯ್ಯೋ ನೋಡೋದಕ್ಕೆ ಚೆನ್ನಾಗಿರಲಿಲ್ಲ ಅಂತ ಅಲ್ಲು ಅರ್ಜುನ್ ಗೆ ಅವಕಾಶಗಳೇ ಸಿಕ್ಕಿರಲಿಲ್ಲವಂತೆ..!

Most read

ಈ ಮಾತು ಕೇಳಿದರೆ ನಿಜಕ್ಕೂ ಶಾಕ್ ಆಗುವುದಿಲ್ವಾ ಹೇಳಿ. ಅಲ್ಲು ಅರ್ಜುನ್ ಚೆನ್ನಾಗಿಲ್ವಾ ಎಂಬ ಪ್ರಶ್ನೆ ಬಾರದೆ ಇರುತ್ತದಾ. ಆದ್ರೆ ಅವರ ಈಗಿನ ಅಂದದ ಬಗ್ಗೆ ಮಾತನಾಡುತ್ತಿರುವುದಲ್ಲ. ಬದಲಿಗೆ ಅವರ ಆರಂಭದ ದಿನಗಳಲ್ಲಿ ಅಷ್ಟೇನು ಚೆನ್ನಾಗಿರಲಿಲ್ಲ ಎಂಬ ಕಾರಣಕ್ಕೆ ಅವಕಾಶಗಳು ಸಿಗುತ್ತಾ ಇರಲಿಲ್ಲವಂತೆ. ಈ ಮಾತನ್ನು ಬೇರೆ ಯಾರೋ ಹೇಳಿದ್ದಲ್ಲ. ಸ್ವತಃ ಅಲ್ಲು ಅರ್ಜುನ್ ಹೇಳಿಕೊಂಡಿದ್ದಾರೆ.

ಅಲ್ಲು ಅರ್ಜುನ್ ಮೊದಲ ಸಿನಿಮಾ ಆರ್ಯ ರಿಲೀಸ್ ಆಗಿ 20 ವರ್ಷಗಳು ತುಂಬಿವೆ. ಈ ಸಂತಸವನ್ನು ಕಾರ್ಯಕ್ರಮವೊಂದನ್ನು ಮಾಡುವ ಮೂಲಕ ಆಚರಿಸಿದ್ದಾರೆ. ಈ ವೇಳೆ ಆರ್ಯ ಸಿನಿಮಾದ ಕಲಾವಿದರೆಲ್ಲರೂ ಸೇರಿದ್ದರು. ವೇದಿಕೆಯಲ್ಲಿ ಹಳೆಯ ದಿನಗಳನ್ನು ನೆನೆದಿದ್ದು ಅಲ್ಲದೇ ಅವಕಾಶಗಳಿಗಾಗಿ ಪಟ್ಟ ಕಷ್ಟದ ಬಗ್ಗೆಯೂ ಮಾತನಾಡಿದ್ದಾರೆ. ಆರ್ಯ ಸಿನಿಮಾಗೂ ಮುನ್ನ ಗಂಗೋತ್ರಿ ಎಂಬ ಸಿನಿಮಾದಲ್ಲಿ ನಟಿಸಿದ್ದರು. ಈ ಸಿ‌ನಿಮಾದಲ್ಲಿ ಹೆಸರು ಬಂತೇ ವಿನಃ, ಅವಕಾಶಗಳಲ್ಲ.

‘ನಾನು ನಟಿಸಿದ ಗಂಗೋತ್ರಿ ಸಿನಿಮಾ ಹಿಟ್ ಆಯಿತು. ಆದರೆ ಆ ಸಮಯದಲ್ಲಿ ನಾನು ನೋಡೋಕೆ ಅಷ್ಟೇನು ಚೆನ್ನಾಗಿಲ್ಲ ಎಂಬ ಕಾರಣಕ್ಕೆ ಅವಕಾಶಗಳು ಬರಲಿಲ್ಲ‌. ಗಂಗೋತ್ರಿ ಸಿನಿಮಾ ಯಶಸ್ವಿಯಾಯ್ತು. ಆದರೆ ಹೀರೋ ಆಗಿ ಗುರುತಿಸಿಕೊಳ್ಳುವಲ್ಲಿ ನಾನು ಸೋತೆ. ನಿತಿನ್ ನಟನೆಯ ದಿಲ್ ಸಿನಿಮಾವನ್ನು ನೋಡಲು ಹೋಗಿದ್ದಾಗ, ಅಲ್ಲಿ ನನಗೆ ಸುಕುಮಾರನ್ ಪರಿಚಯವಾಯಿತು. ಆರ್ಯ ಚಿತ್ರಕ್ಕಾಗಿ ಅವರು ನನ್ನನ್ನು ಆಯ್ಕೆ ಮಾಡಿದರು. ಅವರು ಆಗ ಹೊಸ ನಿರ್ದೇಶಕರಾಗಿದ್ದರು. ಆದರೆ ಅವರು ಸ್ಕ್ರಿಪ್ಟ್ ಬರೆದ ರೀತಿ ನನಗೆ ತುಂಬಾ ಇಷ್ಟವಾಗಿತ್ತು’ ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ. ಸುಕುಮಾರನ್ ಹಾಗೂ ಅಲ್ಲು ಅರ್ಜುನ್ ಜೋಡಿಯ ಪಯಣ ಇಪ್ಪತ್ತು ವರ್ಷಗಳ ಹಿಂದೆ ಶುರುವಾದದ್ದು ಈಗಲೂ ಪುಷ್ಪ-2 ತನಕ ಮುಂದುವರೆದಿದೆ.

More articles

Latest article