ಅತಿಥಿ ಗೃಹದಲ್ಲಿ ಸಾಮಗ್ರಿ ನಾಪತ್ತೆ ಪ್ರಕರಣ: ರೋಹಿಣಿ ಸಿಂಧೂರಿ ವೇತನದಲ್ಲಿ ಕಡಿತಗೊಳಿಸುವಂತೆ ಸರ್ಕಾರಕ್ಕೆ ಪತ್ರ ಬರೆದ ಮೈಸೂರು ನಗರದ ಆಡಳಿತ ತರಬೇತಿ ಸಂಸ್ಥೆ

Most read

ಕೆಲವು ತಿಂಗಳ ಕೆಳಗೆ ಐಪಿಎಸ್‌ ಅಧಿಕಾರಿ ಡಿ ರೂಪಾ ಮೌದ್ಗಿಲ್‌ ಅವರ ಜತೆಗಿನ ಖಾಸಗಿ ಜಗಳದಿಂದ ಸುದ್ದಿಯಾಗಿ ಬಳಿಕ ತಣ್ಣಗಾಗಿದ್ದ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಮತ್ತೆ ಸುದ್ದಿಗೆ ಬಂದಿದ್ದಾರೆ. 

ಮೈಸೂರು ನಗರದ ಆಡಳಿತ ತರಬೇತಿ ಸಂಸ್ಥೆಯ ಅತಿಥಿ ಗೃಹದಲ್ಲಿ ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರ ಸಮಯದಲ್ಲಿ ಅತಿಥಿ ಗೃಹದಲ್ಲಿ ನಾಪತ್ತೆಯಾಗಿದ್ದ ಸಾಮಗ್ರಿಗಳ ಪ್ರಕರಣ ಸಂಬಂಧ ರೋಹಿಣಿ ಸಿಂಧೂರಿ ವೇತನದಲ್ಲಿ ಕಡಿತಗೊಳಿಸಿ ಆ ಹಣವನ್ನು ನಮಗೆ ನೀಡುವಂತೆ ಮೈಸೂರು ನಗರದ ಆಡಳಿತ ತರಬೇತಿ ಸಂಸ್ಥೆಯು ಸರ್ಕಾರದ ಕಾರ್ಯದರ್ಶಿಗೆ ಪತ್ರ ಬರೆದಿದೆ.

ರೋಹಿಣಿ ಸಿಂಧೂರಿ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಪ್ರಾರಂಭದ ದಿನಗಳಲ್ಲಿ ನಗರದ ಆಡಳಿತ ತರಬೇತಿ ಸಂಸ್ಥೆಯ ಅತಿಥಿ ಗೃಹದಲ್ಲಿ ವಾಸವಿದ್ದರು. ಈ ಸಂದರ್ಭದಲ್ಲಿ ಅತಿಥಿ ಗೃಹದ ಬೆಲೆ ಬಾಳುವ ಸುಮಾರು ₹77,296 ಮೌಲ್ಯದ ಕೆಲವು ವಸ್ತುಗಳು ನಾಪತ್ತೆಯಾಗಿದ್ದವು. ಆಡಳಿತ ತರಬೇತಿ ಸಂಸ್ಥೆಯ ಮಹಾ ನಿರ್ದೇಶಕರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಈಗ ಮತ್ತೆ ಆಡಳಿತ ತರಬೇತಿ ಸಂಸ್ಥೆಯ ಮಹಾನಿರ್ದೇಶಕರು ಸರ್ಕಾರಕ್ಕೆ ನಾಪತ್ತೆಯಾದ ಅತಿಥಿ ಗೃಹದ ಸಾಮಗ್ರಿಗಳ ಒಟ್ಟು ಮೌಲ್ಯ ₹77,296 ಮೊತ್ತವನ್ನು ರೋಹಿಣಿ ಸಿಂಧೂರಿ ವೇತನದಲ್ಲಿ ಕಡಿತಗೊಳಿಸಿ ಆ ಹಣವನ್ನು ಡಿಡಿ ಮೂಲಕ ಆಡಳಿತ ತರಬೇತಿ ಸಂಸ್ಥೆಯ ಮಹಾನಿರ್ದೇಶಕರಿಗೆ ಕಳುಹಿಸುವಂತೆ ಸರ್ಕಾರದ ಜಂಟಿ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ರೋಹಿಣಿ ಸಿಂಧೂರಿ ಮೈಸೂರು ಜಿಲ್ಲಾಧಿಕಾರಿಯಾಗಿ ವರ್ಗವಾಗಿ ಬಂದ್​ ಮೇಲೆ ಮೊದಲು 2020ರ ಅಕ್ಟೋಬರ್‌ 2ರಿಂದ ನವೆಂಬರ್ 14ವರೆಗೆ ಮೈಸೂರು ಆಡಳಿತ ತರಬೇತಿ ಸಂಸ್ಥೆಯ ಆವರಣದಲ್ಲಿರುವ ಅತಿಥಿ ಗೃಹದಲ್ಲಿ ವಾಸವಾಗಿದ್ದರು. ರೋಹಿಣಿ ಸಿಂಧೂರಿ ಅಲ್ಲಿಂದ ಜಿಲ್ಲಾಧಿಕಾರಿಗಳ ಅಧಿಕೃತ ಅತಿಥಿ ಗೃಹಕ್ಕೆ ವಾಸ್ತವ್ಯ ಬದಲಾಯಿಸುವ ಸಂದರ್ಭದಲ್ಲಿ ಅತಿಥಿ ಗೃಹದ ಬೆಲೆ ಬಾಳುವ ಟೆಲಿಫೋನ್​, ಟೆಲಿಫೋನ್ ಟೇಬಲ್, ಕೋಟ್ ಹ್ಯಾಂಗರ್, ಬ್ಲಾಂಕೆಟ್, ಮೈಕ್ರೋ ಒವೆನ್, ಬೆತ್ತದ ಕುರ್ಚಿಗಳು, ಹಾಸಿಗೆ, ಕಂಪ್ಯೂಟರ್ ಮೌಸ್, ಟ್ರೇ, ಯೋಗ ಮ್ಯಾಟ್, ಮಂಚ ಸೇರಿದಂತೆ ವಿವಿಧ ವಸ್ತುಗಳು ನಾಪತ್ತೆಯಾಗಿದ್ದು, ಈ ಬಗ್ಗೆ 2020ರ ಡಿಸೆಂಬರ್ 6, 2021ರ ಜನವರಿ 8 ಹಾಗೂ 2021ರ ಏಪ್ರಿಲ್ 12ರಂದು ಆಡಳಿತ ತರಬೇತಿ ಸಂಸ್ಥೆಯಿಂದ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿಯವರಿಗೆ ಸಾಮಗ್ರಿಗಳನ್ನು ಹಿಂದಿರುಗಿಸುವಂತೆ ಪತ್ರ ಬರೆಯಲಾಗಿತ್ತು.

ಆದರೆ, ಈ ಪತ್ರಕ್ಕೆ ರೋಹಿಣಿ ಸಿಂಧೂರಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ನಂತರ 2022ರ ನವೆಂಬರ್ 30ರಂದು ಮತ್ತೊಂದು ಪತ್ರವನ್ನು ಬರೆಯಲಾಗಿದ್ದು, ಆಗ ರೋಹಿಣಿ ಸಿಂಧೂರಿ ಅತಿಥಿ ಗೃಹದಲ್ಲಿ ಯಾವುದೇ ಸಾಮಗ್ರಿ ಇರಲಿಲ್ಲ ಎಂದು ಉತ್ತರ ನೀಡಿದರು. ಆದ್ರೆ ಮೈಸೂರಿನ ಆಡಳಿತ ಸಂಸ್ಥೆಯ ಅಧಿಕಾರಿಗಳು ಪುನಃ ರೋಹಿಣಿ ಸಿಂಧೂರಿ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಾಗಿ ಇದ್ದ ಸಂದರ್ಭದಲ್ಲಿ ಮತ್ತೆ ನಾಪತ್ತೇಯಾದ ಅತಿಥಿ ಗೃಹದ ಸಾಮಗ್ರಿಗಳ ಒಟ್ಟು ಮೊತ್ತ ಪಾವತಿಸುವಂತೆ 2023ರ ಜನವರಿ 15ರಂದು ಮತ್ತೊಂದು ಪತ್ರ ಬರೆದಿದ್ದು, ಅದಕ್ಕೂ ಉತ್ತರ ನೀಡಿಲ್ಲ.

More articles

Latest article