Saturday, July 27, 2024

ಲೋಕಸಭಾ ಚುನಾವಣೆ | ಪಕ್ಷ ಸೇರ್ಪಡೆ ಮುನ್ನವೇ ಮುದ್ದಹನುಮಗೌಡರ ಪರ ಸಚಿವ ರಾಜಣ್ಣ ಬ್ಯಾಟಿಂಗ್ ; ಟಿಕೆಟ್ ಕನ್ಫರ್ಮ್!

Most read

 2024 ರ ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿರುವ ಕಾಂಗ್ರೆಸ್‌ ಹೆಚ್ಚು ಸ್ಥಾನಗಳನ್ನ ಗೆಲ್ಲುವ ನಿಟ್ಟಿನಲ್ಲಿ ಹಲವು ತಂತ್ರಗಾರಿಕೆಯನ್ನ ನಡೆಸುತ್ತಿದೆ. ಈ ಹಿನ್ನೆಲೆ ಹಲವು ಬಿಜೆಪಿ ಹಾಗೂ ಜೆಡಿಎಸ್‌ ನಾಯಕರನ್ನ ಕಾಂಗ್ರೆಸ್‌ ನಾಯಕರನ್ನ ಸಂಪರ್ಕಿಸುತ್ತಿದ್ದು, ಆದರೆ ಇಲ್ಲೊಬ್ಬರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗದ ವ್ಯಕ್ತಿಗೆ ಸಚಿವ ರಾಜಣ್ಣ ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ.

ಹೌದು, ಬಿಜೆಪಿ ಮುಖಂಡ ಹಾಗೂ ತುಮಕೂರಿನ ಲೋಕಸಭಾ ಮಾಜಿ ಸಂಸದ ಎಸ್‌ಪಿ ಮುದ್ದಹನುಮೇಗೌಡ ಅವರ ಪರ  ತುಮಕೂರಿನಲ್ಲಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಬ್ಯಾಟಿಂಗ್ ಮಾಡುತ್ತಿದ್ದಾರೆ. ಬಹುತೇಕ ಅವರಿಗೆ ಟಿಕೆಟ್ ಫೈನಲ್ ಆಗಿದ್ದು ನೀವೆಲ್ಲರೂ ಮುದ್ದಹನುಮೇಗೌಡರಿಗೆ ಮತ ನೀಡಿ ಎಂದು ಸಾರ್ವಜನಿಕ ಸಭೆಯಲ್ಲಿ ಹೇಳಿದ್ದಾರೆ.

ಮಧುಗಿರಿಯ ಗುಟ್ಟೆ ಗ್ರಾಮದಲ್ಲಿ ಮಾತಾಡಿರುವ ಸಚಿವ ರಾಜಣ್ಣ,  ಲೋಕಸಭಾ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗುವ ಸಾಧ್ಯತೆ ಹೆಚ್ಚಿದೆ, ಹಾಗಾಗಿ ನೀವೆಲ್ಲ ಅವರಿಗೆ ಮಾತ್ರ ವೋಟು ಹಾಕಬೇಕು ಮತ್ತು ಭರ್ಜರಿ ಬಹುಮತದೊಂದಿಗೆ ಗೆಲ್ಲಿಸಬೇಕು ಎಂದು ಸಚಿವ ರಾಜಣ್ಣ ಹೇಳಿದ್ದಾರೆ

ಮುಂದುವರೆದು,  ಬೇರೆ ಪಕ್ಷಗಳ ಬಗ್ಗೆ ಯೋಚನೆ ಕೂಡ ಮಾಡದೆ ಮುದ್ದಹನುಮೇಗೌಡರ ಪರ ಮತ ಚಲಾಯಿಸಬೇಕು. ರಾಜ್ಯದಲ್ಲಿ ಬಡವರು ಬರಿ ಹೊಟ್ಟೆಯಲ್ಲಿರಬಾರದು, ಯಾರೂ ಹಸಿಯಬಾರದು ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದಾರೆ ಎಂದು ಹೇಳುವ ಮೂಲಕ ಲೋಕಸಭಾ ಚುನಾವಣೆಗೆ ಪ್ರಚಾರ ಕಾರ್ಯವನ್ನು ಶುರು ಮಾಡಿದ್ದಾರೆ.

ಮಾಜಿ ಸಂಸದ ಎಸ್ ಪಿ ಮುದ್ದಹನುಮೇಗೌಡ  ಕಾಂಗ್ರೆಸ್ ಪಕ್ಷ ಸೇರೋದು ಮತ್ತು ಮುಂಬರುವ ಲೋಕಸಭಾ ಚುನಾವನಣೆಯಲ್ಲಿ ತುಮಕೂರು ಕ್ಷೇತ್ರದಿಂದ  ಸ್ಪರ್ಧಿಸುವುದು ಖಚಿತವೇ ಎಂಬ ಬಗ್ಗೆ ಈಗ ಚರ್ಚೆಗಳು ನಡೆಯುತ್ತಿವೆ.

 

More articles

Latest article