ಜಕಾರ್ತ : ಇಂಡೋನೇಷ್ಯಾದ ಪಶ್ಚಿಮ ಜಾವಾದ ಬೆಕಾಸಿಯಲ್ಲಿ ಎರಡು ರೈಲುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 14 ಕ್ಕೆ ಏರಿದ್ದು, 84 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ
ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಮಂಗಳವಾರ ಬೆಳಿಗ್ಗೆ ಬೆಕಾಸಿಯ ಆಸ್ಪತ್ರೆಯಲ್ಲಿ ಸಂತ್ರಸ್ತರನ್ನು ಭೇಟಿ ಮಾಡಿ, ಸರ್ಕಾರ ಮತ್ತು ತಮ್ಮ ಪರವಾಗಿ ಸಂತಾಪ ಸೂಚಿಸಿದ್ದಾರೆ ಮತ್ತು ದುರಂತ ಘಟನೆಯ ಬಗ್ಗೆ ತ್ವರಿತ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.
ಮಂಗಳವಾರ ಅಧಿಕೃತ ಹೇಳಿಕೆಯಲ್ಲಿ, ರೈಲು ನಿರ್ವಾಹಕ ಕೆಎಐ ಅಧ್ಯಕ್ಷ ನಿರ್ದೇಶಕ ಬಾಬಿ ರಸೈದಿನ್, “ಪಶ್ಚಿಮ ಇಂಡೋನೇಷ್ಯಾ ಸಮಯ (ಡಬ್ಲ್ಯೂಐಬಿ) ಬೆಳಿಗ್ಗೆ 8:45 ರ ಇತ್ತೀಚಿನ ಮಾಹಿತಿಯ ಪ್ರಕಾರ 14 ಸಾವುಗಳು ಸಂಭವಿಸಿವೆ. ಮೃತರ ಗುರುತು ಪತ್ತೆ ಹಚ್ಚಬೇಕಾಗಿದೆ ಇದಕ್ಕಾಗಿ ಕ್ರಮತ್ ಜಾತಿ ಪೊಲೀಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಏತನ್ಮಧ್ಯೆ, 84 ಮಂದಿ ಗಾಯಗೊಂಡ ವಿವಿಧ ಆರೋಗ್ಯ ಸೌಲಭ್ಯಗಳಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು.
ಸೋಮವಾರ ಸ್ಥಳೀಯ ಸಮಯ ರಾತ್ರಿ 8:50 ರ ಸುಮಾರಿಗೆ ಜಕಾರ್ತಾ-ಬೆಕಾಸಿ ಮಾರ್ಗದಲ್ಲಿ ಚಲಿಸುತ್ತಿದ್ದ ಪ್ರಯಾಣಿಕ ರೈಲು ಜಕಾರ್ತಾ-ಸುರಬಯಾ ಮಾರ್ಗದಲ್ಲಿ ಚಲಿಸುತ್ತಿತ್ತು. ಎದುರಿಗೆ ಸ್ಪೀಡಾಗಿ ಬರುತ್ತಿದ್ದ ರೈಲಿಗೆ ಡಿಕ್ಕಿ ಹೊಡೆದಿದೆ.
ಘಟನೆಯ ಕಾರಣದ ಬಗ್ಗೆ ರೈಲು ನಿರ್ವಾಹಕರು ಮತ್ತು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಸಮಿತಿ ತನಿಖೆ ನಡೆಸುತ್ತಿದೆ.

