ಸಂಸತ್‌ ಭವನದ ಹೊರಗೆ ರಾಹುಲ್‌ ಗಾಂಧಿ ವಿರುದ್ಧ ಎನ್‌ಡಿಎ ಪ್ರತಿಭಟನೆ

ನವದೆಹಲಿ : ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ಸಂಸದರು ಸಂಸತ್‌ ಭವನದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾರೆ.  ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ವಿದ್ಯಾರ್ಥಿಗಳ ಪ್ರತಿಭಟನೆ ಮತ್ತು ಪ್ರತಿಭಟನಾಕಾರರ ವಿರುದ್ಧ ಪೊಲೀಸ್ ಕ್ರಮದ ಕುರಿತು ಚರ್ಚೆಯ ದಾರಿಯನ್ನು ತಪ್ಪಿಸುತ್ತಿದ್ದಾರೆ ಎಂದು ಪ್ರತಿಭಟನಕಾರರು  ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. 

ಸಂಸತ್ತಿನಲ್ಲಿ ಗದ್ದಲದ ಮಧ್ಯೆ ಪ್ರತಿಭಟನೆ ನಡೆಯುತ್ತಿದೆ.  ಪ್ರತಿಪಕ್ಷಗಳ ಒತ್ತಾಯದ ಮೇರೆಗೆ ಚರ್ಚೆಗೆ ಸರ್ಕಾರ ಮುಂದಾಗಿದೆ.  ಗೃಹ ಸಚಿವ ಅಮಿತ್ ಶಾ ಪ್ರತಿಕ್ರಿಯಿಸಲು ಸಿದ್ಧರಾಗಿದ್ದರು. ಆದರೆ, ರಾಹುಲ್‌ ಗಾಂಧಿ ಚರ್ಚೆಯ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಬಿಜೆಪಿ ಸಂಸದರು ಪ್ರತಿಭಟನೆಗೆ ನಡೆಸುತ್ತಿದ್ದಾರೆ. 

ಬಿಜೆಪಿ ಸಂಸದ ಕಂಗನಾ ರನೌತ್, ವಿರೋಧ ಪಕ್ಷವು ಈ ಹಿಂದೆ ಚರ್ಚೆಗೆ ಒತ್ತಾಯಿಸಿತ್ತು ಆದರೆ ಈಗ ಹಿಂದೆ ಸರಿದಿದೆ.  ದೇಶವನ್ನು ಕಾಂಗ್ರೆಸ್ ಮೋಸಗೊಳಿಸುತ್ತಿದೆ‌  ಎಂದು ಆರೋಪಿಸಿದರು. ಬಿಜೆಪಿ ಸಂಸದ ಸಂಜಯ್ ಜೈಸ್ವಾಲ್, “ನಾವು ಚರ್ಚೆಗೆ ಸಿದ್ಧರಿದ್ದೇವೆ ಆದರೆ ರಾಹುಲ್ ಗಾಂಧಿ ಅಲ್ಲ” ಎಂದು ಹೇಳಿದರು.

ಬಿಜೆಪಿ ಸಂಸದ ಮನೋಜ್ ತಿವಾರಿ, “ಅಮಿತ್ ಶಾ ಜಿ ಡೆಂಗೆ ಜವಾಬ್, ರಾಹುಲ್ ಗಾಂಧಿ ಭಗ್ನಾ ಮತ್” ಎಂದು ಹೇಳಿದರು. ಜಾರ್ಖಂಡ್‌ನಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ವಿರುದ್ಧ ಪೊಲೀಸ್ ಕ್ರಮದ ಬಗ್ಗೆ ಗಾಂಧಿ  ದ್ವಿಮುಖ ನೀತಿ  ಹೊಂದಿದ್ದಾರೆ ಎಂದು ತರುಣ್ ಚುಗ್ ಆರೋಪಿಸಿದರು.

ನವದೆಹಲಿ : ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ಸಂಸದರು ಸಂಸತ್‌ ಭವನದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾರೆ.  ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ವಿದ್ಯಾರ್ಥಿಗಳ ಪ್ರತಿಭಟನೆ ಮತ್ತು ಪ್ರತಿಭಟನಾಕಾರರ ವಿರುದ್ಧ ಪೊಲೀಸ್ ಕ್ರಮದ ಕುರಿತು ಚರ್ಚೆಯ ದಾರಿಯನ್ನು ತಪ್ಪಿಸುತ್ತಿದ್ದಾರೆ ಎಂದು ಪ್ರತಿಭಟನಕಾರರು  ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. 

ಸಂಸತ್ತಿನಲ್ಲಿ ಗದ್ದಲದ ಮಧ್ಯೆ ಪ್ರತಿಭಟನೆ ನಡೆಯುತ್ತಿದೆ.  ಪ್ರತಿಪಕ್ಷಗಳ ಒತ್ತಾಯದ ಮೇರೆಗೆ ಚರ್ಚೆಗೆ ಸರ್ಕಾರ ಮುಂದಾಗಿದೆ.  ಗೃಹ ಸಚಿವ ಅಮಿತ್ ಶಾ ಪ್ರತಿಕ್ರಿಯಿಸಲು ಸಿದ್ಧರಾಗಿದ್ದರು. ಆದರೆ, ರಾಹುಲ್‌ ಗಾಂಧಿ ಚರ್ಚೆಯ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಬಿಜೆಪಿ ಸಂಸದರು ಪ್ರತಿಭಟನೆಗೆ ನಡೆಸುತ್ತಿದ್ದಾರೆ. 

ಬಿಜೆಪಿ ಸಂಸದ ಕಂಗನಾ ರನೌತ್, ವಿರೋಧ ಪಕ್ಷವು ಈ ಹಿಂದೆ ಚರ್ಚೆಗೆ ಒತ್ತಾಯಿಸಿತ್ತು ಆದರೆ ಈಗ ಹಿಂದೆ ಸರಿದಿದೆ.  ದೇಶವನ್ನು ಕಾಂಗ್ರೆಸ್ ಮೋಸಗೊಳಿಸುತ್ತಿದೆ‌  ಎಂದು ಆರೋಪಿಸಿದರು. ಬಿಜೆಪಿ ಸಂಸದ ಸಂಜಯ್ ಜೈಸ್ವಾಲ್, “ನಾವು ಚರ್ಚೆಗೆ ಸಿದ್ಧರಿದ್ದೇವೆ ಆದರೆ ರಾಹುಲ್ ಗಾಂಧಿ ಅಲ್ಲ” ಎಂದು ಹೇಳಿದರು.

ಬಿಜೆಪಿ ಸಂಸದ ಮನೋಜ್ ತಿವಾರಿ, “ಅಮಿತ್ ಶಾ ಜಿ ಡೆಂಗೆ ಜವಾಬ್, ರಾಹುಲ್ ಗಾಂಧಿ ಭಗ್ನಾ ಮತ್” ಎಂದು ಹೇಳಿದರು. ಜಾರ್ಖಂಡ್‌ನಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ವಿರುದ್ಧ ಪೊಲೀಸ್ ಕ್ರಮದ ಬಗ್ಗೆ ಗಾಂಧಿ  ದ್ವಿಮುಖ ನೀತಿ  ಹೊಂದಿದ್ದಾರೆ ಎಂದು ತರುಣ್ ಚುಗ್ ಆರೋಪಿಸಿದರು.

More articles

Latest article

Most read