ಕುಡುಕ ಮಗನ ಸೊಂಟಕ್ಕೆ ಸರಪಳಿ ಕಟ್ಟಿ ಕೊಂದ ತಾಯಿ!

Most read

ಪುತ್ತೂರು: ಪಾನಮತ್ತ ಮಗನನ್ನು ತಾಯಿಯೇ ತನ್ನ ಕೈಯಾರೆ ಕೊಂದ ದಾರುಣ ಘಟನೆ ವರದಿಯಾಗಿದೆ.

ಚೇತನ್ ಎಂಬ ಯುವಕ ಪಾನಮತ್ತನಾಗಿ ನೆರೆಮನೆಯವರನ್ನು ಪೀಡಿಸುತ್ತಿದ್ದ. ನೆರೆಮನೆಯವರು ಪದೇಪದೇ ದೂರು ಹೇಳುತ್ತಿದ್ದರು. ಇದರಿಂದ ರೋಸಿದ ತಾಯಿ ಸಿಟ್ಟಿನಿಂದ ಮಗನ ಸೊಂಟಕ್ಕೆ ಸರಪಳಿ ಕಟ್ಟಿ ಎಳೆದೊಯ್ಯುತ್ತಿದ್ದಳು. ಸರಪಳಿ ಜಾರಿ ಕೊರಳಿಗೆ ಬಿಗಿದುಕೊಂಡು ಆತ ಮೃತಪಟ್ಟಿದ್ದಾನೆ

ಮಗ ನೆರೆಮನೆಯವರಿಗೆ ತೊಂದರೆ ಕೊಡುತ್ತಿರುವ ವಿಷಯ ಗೊತ್ತಾಗುತ್ತಿದ್ದಂತೆ ನಾಯಿಯನ್ನು ಕಟ್ಟುವ ಸರಪಳಿಯನ್ನು ಮಗನ ಸೊಂಟಕ್ಕೆ ಕಟ್ಟಿ ಮನೆಗೆ ಎಳೆದೊಯ್ಯುತ್ತಿದ್ದಳು. ದುರದೃಷ್ಟವಶಾತ್ ಸರಪಳಿ ಮೇಲೆ ಜಾರಿ ಅವನ ಕುತ್ತಿಗೆಗೆ ಸುತ್ತಿಕೊಂಡಿತು. ಇದು ಗೊತ್ತಿಲ್ಲದ ತಾಯಿ ಎಳೆದುಕೊಂಡು ಹೋಗುವಾಗ ಕುತ್ತಿಗೆ ಬಿಗಿದು ಚೇತನ್ ಮೃತಪಟ್ಟಿದ್ದಾನೆ.

ಪುತ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

More articles

Latest article