Saturday, July 27, 2024

ಕರ್ನಾಟಕದಿಂ‌ದ ರಾಜ್ಯಸಭೆಗೆ ಅಜಯ್‌ ಮಕೆನ್ ಸ್ಪರ್ಧೆ

Most read

ಕರ್ನಾಟಕದಿಂದ ರಾಜ್ಯಸಭಾ ಚುನಾವಣೆಗೆ ಮಾಜಿ ಸಂಸದರಾದ ಅಜಯ್‌ ಮಕೆನ್, ರಾಜ್ಯಸಭಾ ಸದಸ್ಯರಾದ ಡಾ. ಸೈಯದ್ ನಾಸಿರ್ ಹುಸೇನ್ ಮತ್ತು‌ ಜಿ. ಸಿ. ಚಂದ್ರಶೇಖರ್ ಸ್ಪರ್ಧಿಸಲಿದ್ದಾರೆ ಎಂದು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿರುವ ಕಾಂಗ್ರೆಸ್, ಮಧ್ಯಪ್ರದೇಶದಿಂದ‌ ರಾಜ್ಯಸಭೆಗೆ ಶ್ರೀ ಅಶೋಕ್ ಸಿಂಗ್ ಮತ್ತು ತೆಲಂಗಾಣದಿಂದ ರೇಣುಕಾ ಚೌಧರಿ ಹಾಗು ಎಂ ಅನಿಲ್ ಕುಮಾರ್ ಯಾದವ್ ಅವರ ಹೆಸರುಗಳನ್ನು ಅಂತಿಮಗೊಳಿಸಿದೆ.

ಈಗಾಗಲೇ ರಾಜಸ್ತಾನದಿಂದ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಹೆಸರನ್ನು ಸೂಚಿಸಿ, ನಾಮಪತ್ರವನ್ನು ಸಲ್ಲಿಸಲಾಗಿದೆ.

More articles

Latest article