ನವದೆಹಲಿ: “ದ್ವೇಷ, ಕೋಪ, ಹಿಂಸೆ ಮತ್ತು ಅನ್ಯಾಯ ಎಂದಿಗೂ ಗೆಲ್ಲುವುದಿಲ್ಲ. ಧೈರ್ಯ ಯಾವಾಗಲೂ ಗೆಲ್ಲುತ್ತದೆ” ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಜೊತೆ 14 ದಿನಗಳ ಕದನ ವಿರಾಮಕ್ಕೆ ಒಪ್ಪಿಕೊಂಡ ನಂತರ ಬುಧವಾರ ಇರಾನಿನ ಪುರುಷರು ಮತ್ತು ಮಹಿಳೆಯರನ್ನು ಶ್ಲಾಘಿಸಿದ್ದಾರೆ.
X ನಲ್ಲಿ ಪ್ರತಿಕ್ರಿಯಿಸಿರುವ ಅವರು, “ಇರಾನಿನ ಪುರುಷರು ಮತ್ತು ಮಹಿಳೆಯರು ತಮ್ಮ ದೇಶದ ಸಂಪನ್ಮೂಲಗಳ ಸುತ್ತ ಮಾನವ ಸರಪಳಿಗಳನ್ನು ರಚಿಸಿದರು, ಆದರೆ ಪಾಶ್ಚಿಮಾತ್ಯ ಶಕ್ತಿಗಳು ಒಂದು ನಾಗರಿಕತೆಯ ಅಂತ್ಯವನ್ನು ಘೋಷಿಸುವ ತುಚ್ಛ ಭಾಷೆಯಲ್ಲಿ ಮಾತನಾಡಿದ್ದರು.
“ಪಶ್ಚಿಮದಿಂದ ನೈತಿಕತೆಯ ಮುಸುಕು ಬೀಳುವುದನ್ನು ಜಗತ್ತು ಗಮನಿಸುತ್ತಿದೆ ಮತ್ತು ಅರ್ಥಮಾಡಿಕೊಳ್ಳುತ್ತಿದೆ. ದ್ವೇಷ, ಕೋಪ, ಹಿಂಸೆ ಮತ್ತು ಅನ್ಯಾಯ ಎಂದಿಗೂ ಗೆಲ್ಲುವುದಿಲ್ಲ. ಧೈರ್ಯ ಯಾವಾಗಲೂ ಗೆಲ್ಲುತ್ತದೆ” ಎಂದು ಅವರು ಒತ್ತಿ ಹೇಳಿದ್ದಾರೆ.
ಈ ಮಧ್ಯೆ ಇರಾನ್ ವಿರುದ್ಧದ ಅಮೆರಿಕದ ಅಭಿಯಾನವನ್ನು “ಗೆಲುವು” ಎಂದು ಶ್ವೇತಭವನ ಘೋಷಿಸಿದೆ.

