ಕರ್ನಾಟಕ ಉಪ ಚುನಾವಣೆ: ಎರಡು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟಿಸಿದ ಕಾಂಗ್ರೆಸ್

Most read

ಶಿಗ್ಗಾವಿ, ಸಂಡೂರು ಹಾಗೂ ಚನ್ನಪಟ್ಟಣ ಮೂರು ಕ್ಷೇತ್ರಗಳ ಉಪಚುನಾವಣೆಯನ್ನು ಗೆಲ್ಲಲು ಸಿಎಂ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್‌ ಮಾಸ್ಟರ್ ಪ್ಲ್ಯಾನ್ ಮಾಡುತ್ತಿದೆ. ಮೂರು ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರಗಳಿಗೆ ಈಗ ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್ ಘೋಷಣೆ ಮಾಡಿದೆ.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಸಿ.ಪಿ. ಯೋಗೇಶ್ವರ್ ಕಣಕ್ಕಿಸಿದೆ. ಇನ್ನೂ ಸಂಡೂರಿನಿಂದ ಸಂಸದ ತುಕಾರಂ ಪತ್ನಿ ಅನುರಾಧ ತುಕಾರಾಂ ಅವರನ್ನು ಕಣಕ್ಕಿಳಿಸಿದೆ. ಶಿಗ್ಗಾವಿ ಕ್ಷೇತ್ರದ ಅಭ್ಯರ್ಥಿಯ ತೀರ್ಮಾನ ಇನ್ನು ಕಗ್ಗಂಟಾಗಿದ್ದು ಶೀಘ್ರದಲ್ಲೇ ಅದು ಕೂಡ ಹೊರಬೀಳಲಿದೆ.

ಆಡಳಿತ ರೂಢ ಸರ್ಕಾರ ಇರುವಾಗ ಉಪ ಚುನಾವಣೆ ಸೋತಲ್ಲಿ ಅದು ತೀವ್ರ ಮುಖಭಂಗ ಆಗುವ ಹಿನ್ನೆಲೆಯಲ್ಲಿ ಕ್ಷೇತ್ರಗಳನ್ನು ಗೆಲ್ಲುವ ಸಲುವಾಗಿ ಈ ಬಾರಿ ಅಭ್ಯರ್ಥಿಗಳ ಹೆಸರನ್ನು ಸೂಕ್ಷ್ಮವಾಗಿ ನೋಡಿ ಟಿಕೆಟ್ ನೀಡಿದೆ.

More articles

Latest article