ಚೆನ್ನೈ: ಮುಖ್ಯಮಂತ್ರಿ ಆದ ನಂತರ ಮೊದಲ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸಿ. ಜೋಸೆಫ್ ವಿಜಯ್ ರಾಜ್ಯದ ಮೂರು ಪ್ರಮುಖ ಮೃಗಾಲಯಗಳಿಗೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಿರುವುದು ಸರ್ಕಾರ ಪ್ರಕಟಿಸಿದೆ.
ಇದೇ ಜೂನ್ 21 ಮತ್ತು 22ರಂದು (ಭಾನುವಾರ ಮತ್ತು ಸೋಮವಾರ) ಸಾರ್ವಜನಿಕರು ಉಚಿತವಾಗಿ ಮೃಗಾಲಯ ವೀಕ್ಷಿಸಬಹುದಾಗಿದೆ. (Vandalur, Amirthi Zoological Park) ಚೆನ್ನೈನ ವಂಡಲೂರು ಅರಿಗ್ನರ್ ಅಣ್ಣಾ ಮೃಗಾಲಯ(Arignar Anna Zoological Park), ವೆಲ್ಲೂರು ಜಿಲ್ಲೆಯ ಅಮೃತಿ (Kurumbapatti) ಮೃಗಾಲಯಗಳಲ್ಲಿ ಈ ಉಚಿತ ಪ್ರವೇಶ ಸೌಲಭ್ಯ ಲಭ್ಯವಿರಲಿದೆ ಎಂದು ಅರಣ್ಯ ಸಚಿವ ಆರ್. ವಿ. ರಂಜಿತ್ಕುಮಾರ್ ತಿಳಿಸಿದ್ದಾರೆ.
ಆನ್ಲೈನ್ ನೋಂದಣಿ ಕಡ್ಡಾಯ : ಉಚಿತ ಪ್ರವೇಶದ ಸೌಲಭ್ಯ ಪಡೆಯಲು ಸಾರ್ವಜನಿಕರು ಆನ್ಲೈನ್ ಮೂಲಕ ಕಡ್ಡಾಯವಾಗಿ ಮುಂಚಿತವಾಗಿಯೇ ನೋಂದಣಿ ಮಾಡಿಕೊಂಡು ಟಿಕೆಟ್ ಪಡೆಯಬೇಕಾಗುತ್ತದೆ.

