ಬೆಂಗಳೂರು : ಸಂಸದ ಪ್ರಹ್ಲಾದ್ ಜೋಷಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಹರಕೆ ಕುರಿ ಮಾಡಿದ್ದಾರೆ ಎಂಬುದು ಅವರು ಇತ್ತೀಚೆಗೆ ಕಾಂಗ್ರೆಸ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲು ಹೋಗಿದ್ದರಲ್ಲಿ ತಿಳಿಯುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷರಾದ ಬಿ ಕೆ ಹರಿಪ್ರಸಾದ್ ಹೇಳಿದರು.
ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತಾಡುತ್ತಿದ್ದರು. ಬಿಜೆಪಿಯವರಿಗೆ ನೇರವಾಗಿ ಬಹುಮತ ಪಡೆಯಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಕುತಂತ್ರ ಷಡ್ಯಂತ್ರ ನಡೆಸಿ SIR ಮೂಲಕ ಅಧಿಕಾರ ಪಡೆಯಲು ಯೋಜಿಸಿದ್ದಾರೆ.
ಜಯನಗರ, ಸದಾಶಿವ ನಗರಗಳಲ್ಲಿ ಬಿಜೆಪಿಯ ಬಿಎಲ್ ಎಗಳಯ ಹೋಗಿ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದ ಬಿ ಎಲ್ ಎ ಗಳು ಎನ್ಯುಮರೇಶನ್ ಫಾರಂ ತುಂಬಲು ಸಾಮಾನ್ಯ ಜನರಿಗೆ ಸುಲಭವಾಗಲು ಸಹಕಾರ ನೀಡುತ್ತಿದ್ದೇವೆ. ಇದು SIR ಪ್ರಕ್ರಿಯೆ ಸುಗಮಗೊಳಿಸಲು ಸಹಾಯಕವಾಗುತ್ತಿದೆ. ಬಿಜೆಪಿಯ ಷಡ್ಯಂತ್ರವನ್ನು ನಾವು ವಿಫಲಗೊಳಿಸುತ್ತೇವೆ ಎಂದರು.
ಬಿಜೆಪಿ ಪಕ್ಷದಲ್ಲೇ ಇರುವ ಗೊಂದಲ ಪರಿಹರಿಹರಿಸಿಕೊಳ್ಳಲು ಆಗದೇ ಡೋಲಾಯಮಾನ ಪರಿಸ್ಥಿತಿಯಲ್ಲಿದ್ದಾರೆ. ಅಯೋಧ್ಯಾ ರಾಮ ಮಂದಿರದ ಲೂಟಿ ನೋಡಿದರೆ ಇವರ ಚಾಲ್ ಚೆಹರಾ ಚಿಂತನ್ ಹೇಗಿದೆ ಎಂದು ತಿಳಿಯುತ್ತಿದೆ. ಇಡೀ ದೇಶದ ಜನತೆಗೆ ತಿಳಿಯುತ್ತಿದೆ ಎಂದರು. ಸುದ್ದಿಗೋಷ್ಟಿಯಲ್ಲಿ ಜಿ.ಸಿ.ಚಂದ್ರಶೇಖರ್, ಸುದರ್ಶನ್, ರಮೇಶ್ ಬಾಬು, ನಟರಾಜ್ ಗೌಡ್ರು, ರಾಮಚಂದ್ರಪ್ಪ ಮತ್ತಿತರರು ಹಾಜರಿದ್ದರು.

