Saturday, July 27, 2024

ಚಾಮರಾಜನಗರ ಆಮ್ಲಜನಕ ದುರಂತ : ಸಂತ್ರಸ್ತರ ಕುಟುಂಬಕ್ಕೆ ಸರ್ಕಾರಿ ಕೆಲಸ

Most read

ಕೋವಿಡ್‌ ಸಂದರ್ಭದಲ್ಲಿ ಚಾಮರಾಜನಗರ ಆಸ್ಪತ್ರೆಯೊಂದರಲ್ಲಿ 2021 ಮೇ 2 ರಂದು ಆಮ್ಲಜನಕ ಪೂರೈಕೆಯಾಗದೆ 32 ಜನರು ಮೃತಪಟ್ಟಿದ್ದರು. ಆ ಕುಟುಂಬದ ಸದಸ್ಯರಿಗೆ ಬರುವ ಫೆಬ್ರವರಿ 1 ರಿಂದ ಸರ್ಕಾರಿ ಕೆಲಸ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್‌ ಹೇಳಿದ್ದಾರೆ.

ನಗರದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಈ ಘೊಷಣೆಯನ್ನು ಮಾಡಿದ್ದಾರೆ. ʼಕೆಲವು ದಿನಗಳ ಹಿಂದೆ ಮೃತರ ಕುಟುಂಬವನ್ನು ಬೇಟಿಮಾಡಿದ್ದೆ. ಆ ಸಂದರ್ಭದಲ್ಲಿ ಸರ್ಕಾರ ಕೊಟ್ಟ ಕೆಲಸವನ್ನು ಇನ್ನೂ ಮಾಡಿಲ್ಲ. ನೀವು ನಮಗೆ ಕೆಲಸ ಕೊಡಿಸಲು ಮುಂದಾಗಬೇಕುʼ  ಎಂದು ಬೇಡಿಕೆ ಇಟ್ಟಿದ್ದರು ಎಂದರು.

ಸಂತ್ರಸ್ತರ ಕುಟುಂಬಗಳಿಗೆ ಕಾಯಂ ಉದ್ಯೋಗ ಕೊಡಲು ಪ್ರಸ್ತಾವನೆ ಸಲ್ಲಿಸಿದ್ದೆವೆ. ಅಲ್ಲಿಯವರೆಗೂ ಗುತ್ತಿಗೆ ಆಧಾರದ ಮೇಲೆ ಉದ್ಯೋಗ ನೀಡಲಾಗುವುದು ಎಂದರು. ಪೆಬ್ರವರಿ 1 ರಿಂದ ಅವರು ಕೆಲಸಕ್ಕೆ ಬರಬಹುದು. ಜಿಲ್ಲಾಧಿಕಾರಿ ಕಛೇಯಲ್ಲಿ ಹೇಳಿದ್ದೇನೆ ಎಂದರು.

More articles

Latest article