Saturday, July 27, 2024

ವಿಕಸಿತ ಭಾರತಕ್ಕಾಗಿ ಬಿಜೆಪಿಗೆ ದೇಣಿಗೆ ನೀಡಿ : ಪ್ರಧಾನಿ ಮೋದಿ ಕರೆ

Most read

ವಿಕಸಿತ ಭಾರತ ನಿರ್ಮಾಣಕ್ಕಾಗಿ ಬಿಜೆಪಿಗೆ ದೇಣಿಗೆ ನೀಡಿ ಎಂಬ ಆಂದೋಲನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ₹2,000 ದೇಣಿಗೆ ನೀಡಿ ದೇಶವಾಸಿಗಳಿಗೂ ದೇಣಿಗೆ ನೀಡುವಂತೆ ಕೇಳಿಕೊಂಡಿದ್ದಾರೆ.

ಹೌದು, ವಿಕಸಿತ ಭಾರತ ನಿರ್ಮಾಣಕ್ಕೆ ಭಾರತ ಜನತಾ ಪಾರ್ಟಿಗೆ ದೇಣಿಗೆ ಬೀಡಬೇಕಂತೆ. ಇದಕ್ಕೆ ದೇಶ ಕಟ್ಟುವ ಅಭಿಯಾನ ಎಂದು ಹೆಸರಿಟ್ಟು ದೇಶವಾಸಿಗಳಿಂದ ದೇಣಿಗೆ ಪಡೆಯುತ್ತಿದೆ ಬಿಜೆಪಿ. ಇದಕ್ಕೆ ತಕ್ಕಂತೆ ಪ್ರಧಾನಿ ಮೋದಿ ಅವರು ಕೂಡ ದೇಣಿಗೆ ನೀಡಿ ದೇಶದ ಜನರಿಗೂ ದೇಣಿಕೆ ನೀಡುವಂತೆ ಕೇಳಿಕೊಂಡಿದ್ದಾರೆ..

ಪ್ರಧಾನಿ ಮೋದಿ ಅವರ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ರಶೀದಿಯನ್ನು ಹಂಚಿಕೊಂಡು, ವಿಕಸಿತ ಭಾರತ ನಿರ್ಮಾಣಕ್ಕಾಗಿ ಬಿಜೆಪಿಗೆ ದೇಣಿಗೆ ನೀಡಿರುವುದು ಸಂತಸವಾಗುತ್ತಿದೆ. ನಮೊ ಆ್ಯಪ್ ಮೂಲಕ ನೀವೂ ದೇಣಿಗೆ ನೀಡಿ ಎಂದು ಹೇಳಿದ್ದಾರೆ.

More articles

Latest article