ಪಟ್ನಾ: ವರ್ಷಾಂತ್ಯದಲ್ಲಿ ಬಿಹಾರ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಬಿಹಾರಕ್ಕೆ ಪದೇ ಪದೇ ಭೇಟಿ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಿಹಾರದ ಮಾಜಿ ಮುಖ್ಯಮಂತ್ರಿ ರಾಷ್ಟ್ರೀಯ ಜನತಾದಳ (ಆರ್ ಜೆಡಿ) ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಸಂಬಂಧ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ನೃತ್ಯ ಮಾಡುವ ಎಐ ವಿಡಿಯೊವನ್ನು ಹಂಚಿಕೊಂಡು ಟೀಕಿಸಿದ್ದಾರೆ.
ಬಿಹಾರದ ಹಿತದೃಷ್ಟಿಯಿಂದ ಹವಾಮಾನ ಮುನ್ನಚ್ಚೆರಿಕೆ ಎಂದು ಹೇಳಿರುವ ಲಾಲು, ಇಂದು ಬಿಹಾರದಲ್ಲಿ ಸುಳ್ಳು ಭರವಸೆಗಳ ಮಳೆಯಾಗಲಿದೆ ಎಂದು ವ್ಯಂಗ್ಯವಾಡಿದ್ದು, ರಾಜ್ಯದ ಜನರು ಜಾಗರೂಕರಾಗಿರ ಬೇಕು ಎಂದು ಎಚ್ಚರಿಸಿದ್ದಾರೆ.ವಿಡಿಯೊದ ಕೊನೆಯಲ್ಲಿ ಜನನಾಯಕನಾಗಿ ಪುತ್ರ ತೇಜಸ್ವಿ ಯಾದವ್ ಅವರನ್ನು ಬಿಂಬಿಸಲಾಗಿದೆ.