ಇಂದು ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ: ಜೈಲಾ ಅಥವಾ ಬೇಲಾ?

Most read

ಕೇಸ್‌ನಲ್ಲಿ ಬಂಧನವಾದ ದರ್ಶನ್​ಗೆ ಸೆಷನ್ಸ್‌ ಕೋರ್ಟ್​​ ಜಾಮೀನು ನಿರಾಕರಿಸಿದೆ. ಸದ್ಯ ದರ್ಶನ್‌ ಪರ ವಕೀಲರು ಅನಾರೋಗ್ಯ ಕಾರಣ ನೀಡಿ ಹೈಕೋರ್ಟ್‌ಗೆ ತುರ್ತು ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಇವತ್ತು ಜೈಲ ಅಥವಾ ಬೇಲಾ ಅನ್ನೊದು ಗೊತ್ತಾಗಲಿದೆ.

ನಟ ದರ್ಶನ್‌ರ ಮೆಡಿಕಲ್ ರಿಪೋರ್ಟ್ ಸಲ್ಲಿಕೆ ಮಾಡುವಂತೆ ಬಳ್ಳಾರಿ ಜೈಲಾಧಿಕಾರಿಗಳಿಗೆ ಹೈಕೋರ್ಟ್ ಸೂಚಿಸಿತ್ತು. ಆ ವರದಿ ಇವತ್ತು ಹೈಕೋರ್ಟ್​ಗೆ ಸಲ್ಲಿಕೆ ಆಗಲಿದ್ದು, ಹೈಕೋರ್ಟ್‌ನಲ್ಲಿ ನಟ ದರ್ಶನ್​ಗೆ ಜೈಲಾ, ಬೇಲಾ ಅನ್ನೋದು ನಿರ್ಧಾರವಾಗಲಿದೆ.

ಅಂದಹಾಗೆ ದರ್ಶನ್​ಗೆ ಬೆನ್ನುನೋವು ಶಮನಕ್ಕೆ ಶಸ್ತ್ರ ಚಿಕಿತ್ಸೆ ಅವಶ್ಯವಿದೆ ಅಂತ ಎಂಆರ್​​ಐ ಸ್ಕ್ಯಾನಿಂಗ್​​ನಲ್ಲಿ ವೈದ್ಯರು ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ. ಶಸ್ತ್ರ ಚಿಕಿತ್ಸೆಗೆ ಸಂಬಂಧಿಸಿ ಬಳ್ಳಾರಿ ಬಿಮ್ಸ್‌ನಲ್ಲಿ ಅಗತ್ಯ ಸೌಲಭ್ಯ ಇದೆ ಅಂತ ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

ದರ್ಶನ್​​​​ ಚಿಕಿತ್ಸೆಗಾಗಿ ಜಾಮೀನು ಅಗತ್ಯವಿದೆ ಅಂತ ಕೋರ್ಟ್‌ಗೆ ಅನಿಸಿದರೆ ಜಾಮೀನು ಮಂಜೂರು ಸಾಧ್ಯತೆ ಇದೆ. ಇಲ್ಲವಾದ್ರೆ, ಬಿಮ್ಸ್​​ ವೈದ್ಯರ ಚಿಕಿತ್ಸೆಗೆ ಅಥವಾ ಬೆಂಗಳೂರಿಗೆ ಶಿಫ್ಟ್​​ ಮಾಡಲು ನಿರ್ದೇಶನ ನೀಡಬಹುದು. ಈ ರಿಪೋರ್ಟ್​​ ಒಂದೇ ದರ್ಶನ್​​​ ಜೈಲು ವಾಸ ನಿರ್ಧರಿಸಲಿದೆ.

More articles

Latest article