ಪ್ರಧಾನಿ ಮೋದಿ ಅವರ ನೂತನ ಕ್ಯಾಬಿನೆಟ್‌ನಲ್ಲಿ ಯಾರೆಲ್ಲ ಇದ್ದಾರೆ ಗೊತ್ತೇ?

Most read

ಎನ್ ಡಿಎ ಮೈತ್ರಿಕೂಟ ಸತತ ಮೂರನೇ ಬಾರಿಗೆ ದೆಹಲಿ ಗದ್ದುಗೆ ಏರಿದ್ದು ಇಂದು ಭಾನುವಾರ ಸಂಜೆ ಪ್ರಧಾನ ಮಂತ್ರಿಯಾಗಿ ಸತತ ಮೂರನೇ ಅವಧಿಗೆ ನರೇಂದ್ರ ದಾಮೋದರ ದಾಸ್ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ಕ್ಯಾಬಿನೆಟ್​ ಮಂತ್ರಿಯಾಗಿ ರಾಜನಾಥ್ ಸಿಂಗ್ ಅವರು ಪ್ರಮಾಣ ವಚನ ಸ್ವೀಕರಿಸಿದರು.

ಬಿಜೆಪಿ ಹಿರಿಯ ಸಂಸದ ಅಮಿತ್ ಶಾ ಅವರು ಸಹ ಈಶ್ವರನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಕಳೆದ ಬಾರಿ ಶಾ ಕೇಂದ್ರ ಗೃಹ ಸಚಿವರಾಗಿದ್ದರು, ಈ ಬಾರಿಯೂ ಸಹ ಅವರು ಮತ್ತೊಮ್ಮೆ ಗೃಹ ಖಾತೆ ವಹಿಸಿಕೊಳ್ಳುವ ಸಾಧ್ಯೆತಗಳಿವೆ.ಮೋದಿ ಸಂಪುಟದ ಕ್ಯಾಬಿನೆಟ್​ ಸಚಿವರಾಗಿ ನಿತಿನ್ ಗಡ್ಕರಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಅಚ್ಚರಿ ಎಂಬಂತೆ ಮೋದಿ ಸಂಪುಟ ಸೇರಿದ್ದಾರೆ. ಇಂದು ಮೋದಿ ಜೊತೆಗೆ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಮಧ್ಯ ಪ್ರದೇಶ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ನಿರ್ಮಲಾ ಸೀತಾರಾಮನ್, ಡಾ ಎಸ್ ಜೈಶಂಕರ್, ಪಿಯೂಷ್ ಗೋಯಲ್, ಧರ್ಮೇಂದ್ರ ಪ್ರಧಾನ್, ಹೆಚ್ ಡಿ ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ ಅವರು ಸಹ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಹರ್ಯಾಣದ ಮಾಜಿ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಅವರು ಕ್ಯಾಬಿನೆಟ್ ಸಚಿವರಾಗಿ ಮೋದಿ ಸರ್ಕಾರಕ್ಕೆ ಸೇರ್ಪಡೆಯಾದರು. ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವ ಹಿಂದೂಸ್ತಾನ್ ಅವಾಮಿ ಮೋರ್ಚಾ ಪಕ್ಷದ ನಾಯಕ ಜಿತನ್ ರಾಮ್ ಮಾಂಝಿ, ಬಿಹಾರದ ಜೆಡಿಯು ಸಂಸದ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಲನ್ ಸಿಂಗ್ ಅವರು ನಿತೀಶ್ ಕುಮಾರ್ ಅವರ ಜೆಡಿಯು ಕೋಟಾದಿಂದ ಮೋದಿ ಸಂಪುಟಕ್ಕೆ ಸೇರ್ಪಡೆಯಾದರು.

ಅಸ್ಸಾಂನ ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯಸಭೆ ಸಂಸದ ಸರ್ಬಾನಂದ್ ಸೊನೊವಾಲ್, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವರಾಗಿದ್ದ ಮಧ್ಯಪ್ರದೇಶದ ಬಿಜೆಪಿ ಸಂಸದ ಡಾ ವಿರೇಂದ್ರ ಕುಮಾರ್ ಖಾಟಿಕ್ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ.

ಆಂಧ್ರಪ್ರದೇಶದ ತೆಲುಗು ದೇಶಂ ಪಕ್ಷದ ಸಂಸದ ಕಿಂಜರಪು ರಾಮ್ ಮೋಹನ್ ನಾಯ್ಡು ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಶ್ರೀಕಾಕುಳಂ ಕ್ಷೇತ್ರದ ಸಂಸದರಾಗಿರುವ ನಾಯ್ಡು, 36ನೇ ವಯಸ್ಸಿನಲ್ಲಿಯೇ ಕೇಂದ್ರ ಸಚಿವರಾಗುವ ಅವಕಾಶ ಪಡೆದಿದ್ದಾರೆ.

ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದವರು:

ರಾಜನಾಥ ಸಿಂಗ್ (ಬಿಜೆಪಿ)

ಅಮಿತ್ ಶಾ (ಬಿಜೆಪಿ)

ನಿತಿನ್ ಗಡ್ಕರಿ (ಬಿಜೆಪಿ)

ಜೆ.ಪಿ. ನಡ್ಡಾ (ಬಿಜೆಪಿ)

ಶಿವರಾಜ ಸಿಂಗ್ ಚೌಹಾಣ (ಬಿಜೆಪಿ)

ನಿರ್ಮಲಾ ಸೀತಾರಾಮನ್ (ಬಿಜೆಪಿ)

ಎಸ್. ಜೈಶಂಕರ (ಬಿಜೆಪಿ)

ಮನೋಹರ ಲಾಲ ಖಟ್ಟರ್ (ಬಿಜೆಪಿ)

ಎಚ್.ಡಿ. ಕುಮಾರಸ್ವಾಮಿ (ಜೆಡಿಎಸ್‌)

ಪಿಯೂಷ್ ಗೋಯಲ್ (ಬಿಜೆಪಿ)

ಧರ್ಮೇಂದ್ರ ಪ್ರಧಾನ (ಬಿಜೆಪಿ)

ಜಿತನ್ ರಾಮ್ ಮಾಂಝಿ (ಎಚ್‌ಎಎಂ)

ರಾಜೀವ ರಂಜನ ಸಿಂಗ್ ಅಲಿಯಾಸ್ ಲಲ್ಲನ್‌ ಸಿಂಗ್ (ಜೆಡಿಯು)

ಸರ್ಬಾನಂದ ಸೋನೋವಾಲ್ (ಬಿಜೆಪಿ)

ಡಾ ವೀರೇಂದ್ರ ಕುಮಾರ (ಬಿಜೆಪಿ)

ಕಿಂಜರಾಪು ರಾಮ ಮೋಹನ ನಾಯ್ಡು (ಟಿಡಿಪಿ)

ಪ್ರಹ್ಲಾದ ಜೋಶಿ (ಬಿಜೆಪಿ)

ಜುಯಲ್ ಓರಮ್ (ಬಿಜೆಪಿ)

ಗಿರಿರಾಜ ಸಿಂಗ್ (ಬಿಜೆಪಿ)

ಅಶ್ವಿನಿ ವೈಷ್ಣವ (ಬಿಜೆಪಿ)

ಜ್ಯೋತಿರಾದಿತ್ಯ ಸಿಂಧಿಯಾ (ಬಿಜೆಪಿ)

ಭೂಪೇಂದರ ಯಾದವ್ (ಬಿಜೆಪಿ)

ಗಜೇಂದ್ರ ಸಿಂಗ್ ಶೇಖಾವತ್ (ಬಿಜೆಪಿ)

ಅನ್ನಪೂರ್ಣ ದೇವಿ (ಬಿಜೆಪಿ)

ಕಿರಣ ರಿಜಿಜು (ಬಿಜೆಪಿ)

ಹರ್ದೀಪ್ ಸಿಂಗ್ ಪುರಿ (ಬಿಜೆಪಿ)

ಮನ್ಸುಖ್ ಮಾಂಡವಿಯಾ (ಬಿಜೆಪಿ)

ಜಿ ಕಿಶನ್ ರೆಡ್ಡಿ (ಬಿಜೆಪಿ)

ಚಿರಾಗ ಪಾಸ್ವಾನ್ (ಎಲ್‌ಜೆಪಿ)

ಸಿ.ಆರ್. ಪಾಟೀಲ (ಬಿಜೆಪಿ)

ರಾವ್ ಇಂದ್ರಜಿತ್ ಸಿಂಗ್ (ಬಿಜೆಪಿ)

ಜಿತೇಂದ್ರ ಸಿಂಗ್ (ಬಿಜೆಪಿ)

ಅರ್ಜುನ್ ರಾಮ ಮೇಘವಾಲ್ (ಬಿಜೆಪಿ)

ಪ್ರತಾಪರಾವ್ ಗಣಪತರಾವ್ ಜಾಧವ್ (ಶಿವಸೇನೆ)

ಜಯಂತ ಚೌಧರಿ (ಆರ್‌ಎಲ್‌ಡಿ)

ಜಿತಿನ್ ಪ್ರಸಾದ (ಬಿಜೆಪಿ)

ಶ್ರೀಪಾದ್ ನಾಯ್ಕ (ಬಿಜೆಪಿ)

ಪಂಕಜ ಚೌಧರಿ (ಬಿಜೆಪಿ)

ಕಿಶನ್ ಪಾಲ ಗುರ್ಜರ್ (ಬಿಜೆಪಿ)

ರಾಮದಾಸ್ ಅಠವಳೆ (ಆರ್‌ಪಿಐ)

ರಾಮನಾಥ ಠಾಕೂರ್ (ಜೆಡಿಯು)

ನಿತ್ಯಾನಂದ ರೈ (ಬಿಜೆಪಿ)

ಅನುಪ್ರಿಯಾ ಪಟೇಲ್ (ಅಪ್ನಾ ದಳ)

ವಿ ಸೋಮಣ್ಣ (ಬಿಜೆಪಿ)

ಡಾ. ಚಂದ್ರಶೇಖರ್ ಪೆಮ್ಮಸಾನಿ (ಟಿಡಿಪಿ)

More articles

Latest article