Saturday, July 27, 2024

ರಾಷ್ಟ್ರಧ್ವಜವನ್ನು ತಾಲಿಬಾನ್ ಧ್ವಜ ಎಂದ ಸಿ.ಟಿ.ರವಿ : ಶಾಸಕ ನರೇಂದ್ರ ಸ್ವಾಮಿ ಆಕ್ರೋಶ

Most read

ಮಂಡ್ಯ: ರಾಷ್ಟ್ರಧ್ವಜವನ್ನು ಬಿಜೆಪಿ ಮುಖಂಡ ಸಿ.ಟಿ.ರವಿ ತಾಲಿಬಾನ್ ಧ್ವಜ ಎಂದು ಕರೆದಿದ್ದಾರೆ. ರಾಷ್ಟ್ರಧ್ವಜವನ್ನು ಅಪಮಾನಿಸಿದ್ದಾರೆ. ಈ ಕುರಿತು ದೂರು ನೀಡುವುದಾಗಿ ಶಾಸಕ ನರೇಂದ್ರ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ‌.

ಮಂಡ್ಯದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿ.ಟಿ.ರವಿ ಕುರಿತು ಏಕವಚನದಲ್ಲೇ ಮಾತನಾಡಿ, ರಾಷ್ಟ್ರಧ್ವಜವನ್ನು ಅಪಮಾನಿಸಿದನು ಗಾಂ… ಎಂದು ಕಿಡಿಕಿಡಿಯಾದರು.

ಸ್ವತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ಪಕ್ಷ ನಮ್ಮದು. ದೇಶಕ್ಕಾಗಿ ಪ್ರಾಣ ಬೇಕಾದರು ಕೊಡುತ್ತೇವೆ. ಆದರೆ ಸಿಟಿ ರವಿ ಅಂತಹ ಗಾಂ* ಗಳಿಗೆ ನಾವು ಭಯಪಡುವುದಿಲ್ಲ. ಇಂತವರನ್ನು ನಾವು ತುಂಬಾ ನೊಡಿದ್ದೇವೆ ಎಂದು ಹೇಳಿದ್ದಾರೆ.

ರಾಷ್ಟ್ರಧ್ವಜವನ್ನು ತಾಲಿಬಾನ್ ಧ್ವಜ ಎಂದು ಸಿ.ಟಿ.ರವಿ ಹೇಳಿರುವುದಕ್ಕೆ ಸಾಕ್ಷಿ ಇದೆ. ಸಾಕ್ಷಿ ಸಮೇತ ದೂರು ನೀಡುವೆ ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಇದು ಮಂಗಳೂರು, ಉಡುಪಿ ಅಲ್ಲ ಮಂಡ್ಯ. ಮಂಡ್ಯ ಜನರ ನಡುವೆ ಶಾಂತಿ ಕದಡಿದರೆ ಜನ ಸಹಿಸಲ್ಲ. ಇಲ್ಲಿ ನಿಮ್ಮ ರಾಜಕೀಯ ಬೇಳೆ ಬೇಯಿಸಲು ಆಗಲ್ಲ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

More articles

Latest article