ಗುಂಪು ಚದುರಿಸಲು ಅಸ್ಸಾಂ- ಅರುಣಾಚಲ ಪ್ರದೇಶ ಗಡಿಯಲ್ಲಿ ಪೊಲೀಸರಿಂದ ಗುಂಡು

ಅರುಣಾಚಲ : ನೆರೆಯ ರಾಜ್ಯದ ವಿರುದ್ಧದ ಅನಿರ್ದಿಷ್ಟಾವಧಿಯ ಆರ್ಥಿಕ ದಿಗ್ಬಂಧನವು ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಅಸ್ಸಾಂನ ಧೇಮಾಜಿ ಜಿಲ್ಲೆಯಲ್ಲಿರುವ ಅಸ್ಸಾಂ-ಅರುಣಾಚಲ ಪ್ರದೇಶ ಗಡಿಯಲ್ಲಿ ಗುಂಪೊಂದನ್ನು ಚದುರಿಸಲು ಅರುಣಾಚಲ ಪ್ರದೇಶ ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿದ್ದಾರೆ.

ಸಿಲಾಪಥರ್‌ನ ಲಿಕಾಬಾಲಿ ಪ್ರವೇಶದ್ವಾರದಲ್ಲಿ ಈ ಮುಖಾಮುಖಿ ನಡೆದಿದ್ದು, ಇಲ್ಲಿ ‘ತಕಮ್ ಮಿಸಿಂಗ್ ಪೋರಿನ್ ಕೆಬಾಂಗ್’ ಮತ್ತು ಇತರ ಸ್ಥಳೀಯ ಸಂಘಟನೆಗಳು ಕರೆ ನೀಡಿದ್ದ ದಿಗ್ಬಂಧನವನ್ನು ಅಸ್ಸಾಂನ ಪ್ರತಿಭಟನಾಕಾರರು ಜಾರಿಗೊಳಿಸುತ್ತಿದ್ದರು. ದಿಗ್ಬಂಧನ ನಡೆಯುತ್ತಿದ್ದಾಗ, ಅರುಣಾಚಲ ಪ್ರದೇಶದ ಕೆಲವರು ಅಸ್ಸಾಂನ ಪ್ರತಿಭಟನಾಕಾರರ ಮೇಲೆ ಕಲ್ಲು ತೂರಾಟ ನಡೆಸಿದರು, ಇದರಿಂದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾದವು. ಇದು ಎರಡೂ ಕಡೆಯವರ ನಡುವೆ ಜಗಳಕ್ಕೆ ಕಾರಣವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ನಂತರ, ತಮ್ಮ ಕಡೆಯಲ್ಲಿದ್ದ ಗುಂಪನ್ನು ನಿಯಂತ್ರಿಸಲು ಅರುಣಾಚಲ ಪ್ರದೇಶದ ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವುದನ್ನು ನಾವು ಗಮನಿಸಿದೆವು” ಎಂದು ಅಸ್ಸಾಂ ಸರ್ಕಾರದ ಅಧಿಕಾರಿ ಹೇಳಿದರು.

ಭೂ ಒತ್ತುವರಿ ವಿವಾದಕ್ಕೆ ಸಂಬಂಧಿಸಿದಂತೆ ಅಂತರರಾಜ್ಯ ಗಡಿಯಲ್ಲಿ ಅರುಣಾಚಲ ಪ್ರದೇಶದ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಅಸ್ಸಾಂನ 12 ಮಂದಿ ಗಾಯಗೊಂಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಬುಧವಾರ ಈ ದಿಗ್ಬಂಧನವನ್ನು ಆರಂಭಿಸಲಾಗಿತ್ತು.

TMPK, ‘ಮಿಸಿಂಗ್ ಮಿಮಾಗ್ ಕೆಬಾಂಗ್’ ಮತ್ತು ‘ತಕಮ್ ಮಿಸಿಂಗ್ ಮಹಿಳಾ ಕೆಬಾಂಗ್’ ಸಂಘಟನೆಗಳು ಪ್ರವೇಶದ್ವಾರಗಳ ಮೂಲಕ ಅರುಣಾಚಲ ಪ್ರದೇಶಕ್ಕೆ ಸಂಚರಿಸುವ ವಾಹನಗಳನ್ನು ತಡೆಹಿಡಿದಿದ್ದು, ತುರ್ತು ಸೇವೆ ಮತ್ತು ಶಾಲಾ ವಾಹನಗಳಿಗೆ ಮಾತ್ರ ಸಂಚರಿಸಲು ಅವಕಾಶ ನೀಡುತ್ತಿವೆ.

ದೀರ್ಘಕಾಲದ ಅಸ್ಸಾಂ-ಅರುಣಾಚಲ ಗಡಿ ವಿವಾದವನ್ನು ಶೀಘ್ರವಾಗಿ ಬಗೆಹರಿಸಬೇಕು, ಗುಂಡಿನ ದಾಳಿಯಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಅಸ್ಸಾಂ ಭೂಮಿಯ ಒತ್ತುವರಿಯನ್ನು ತಡೆಯಬೇಕು ಎಂದು ಈ ಸಂಘಟನೆಗಳು ಆಗ್ರಹಿಸುತ್ತಿವೆ.

ಅರುಣಾಚಲ : ನೆರೆಯ ರಾಜ್ಯದ ವಿರುದ್ಧದ ಅನಿರ್ದಿಷ್ಟಾವಧಿಯ ಆರ್ಥಿಕ ದಿಗ್ಬಂಧನವು ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಅಸ್ಸಾಂನ ಧೇಮಾಜಿ ಜಿಲ್ಲೆಯಲ್ಲಿರುವ ಅಸ್ಸಾಂ-ಅರುಣಾಚಲ ಪ್ರದೇಶ ಗಡಿಯಲ್ಲಿ ಗುಂಪೊಂದನ್ನು ಚದುರಿಸಲು ಅರುಣಾಚಲ ಪ್ರದೇಶ ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿದ್ದಾರೆ.

ಸಿಲಾಪಥರ್‌ನ ಲಿಕಾಬಾಲಿ ಪ್ರವೇಶದ್ವಾರದಲ್ಲಿ ಈ ಮುಖಾಮುಖಿ ನಡೆದಿದ್ದು, ಇಲ್ಲಿ ‘ತಕಮ್ ಮಿಸಿಂಗ್ ಪೋರಿನ್ ಕೆಬಾಂಗ್’ ಮತ್ತು ಇತರ ಸ್ಥಳೀಯ ಸಂಘಟನೆಗಳು ಕರೆ ನೀಡಿದ್ದ ದಿಗ್ಬಂಧನವನ್ನು ಅಸ್ಸಾಂನ ಪ್ರತಿಭಟನಾಕಾರರು ಜಾರಿಗೊಳಿಸುತ್ತಿದ್ದರು. ದಿಗ್ಬಂಧನ ನಡೆಯುತ್ತಿದ್ದಾಗ, ಅರುಣಾಚಲ ಪ್ರದೇಶದ ಕೆಲವರು ಅಸ್ಸಾಂನ ಪ್ರತಿಭಟನಾಕಾರರ ಮೇಲೆ ಕಲ್ಲು ತೂರಾಟ ನಡೆಸಿದರು, ಇದರಿಂದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾದವು. ಇದು ಎರಡೂ ಕಡೆಯವರ ನಡುವೆ ಜಗಳಕ್ಕೆ ಕಾರಣವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ನಂತರ, ತಮ್ಮ ಕಡೆಯಲ್ಲಿದ್ದ ಗುಂಪನ್ನು ನಿಯಂತ್ರಿಸಲು ಅರುಣಾಚಲ ಪ್ರದೇಶದ ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವುದನ್ನು ನಾವು ಗಮನಿಸಿದೆವು” ಎಂದು ಅಸ್ಸಾಂ ಸರ್ಕಾರದ ಅಧಿಕಾರಿ ಹೇಳಿದರು.

ಭೂ ಒತ್ತುವರಿ ವಿವಾದಕ್ಕೆ ಸಂಬಂಧಿಸಿದಂತೆ ಅಂತರರಾಜ್ಯ ಗಡಿಯಲ್ಲಿ ಅರುಣಾಚಲ ಪ್ರದೇಶದ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಅಸ್ಸಾಂನ 12 ಮಂದಿ ಗಾಯಗೊಂಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಬುಧವಾರ ಈ ದಿಗ್ಬಂಧನವನ್ನು ಆರಂಭಿಸಲಾಗಿತ್ತು.

TMPK, ‘ಮಿಸಿಂಗ್ ಮಿಮಾಗ್ ಕೆಬಾಂಗ್’ ಮತ್ತು ‘ತಕಮ್ ಮಿಸಿಂಗ್ ಮಹಿಳಾ ಕೆಬಾಂಗ್’ ಸಂಘಟನೆಗಳು ಪ್ರವೇಶದ್ವಾರಗಳ ಮೂಲಕ ಅರುಣಾಚಲ ಪ್ರದೇಶಕ್ಕೆ ಸಂಚರಿಸುವ ವಾಹನಗಳನ್ನು ತಡೆಹಿಡಿದಿದ್ದು, ತುರ್ತು ಸೇವೆ ಮತ್ತು ಶಾಲಾ ವಾಹನಗಳಿಗೆ ಮಾತ್ರ ಸಂಚರಿಸಲು ಅವಕಾಶ ನೀಡುತ್ತಿವೆ.

ದೀರ್ಘಕಾಲದ ಅಸ್ಸಾಂ-ಅರುಣಾಚಲ ಗಡಿ ವಿವಾದವನ್ನು ಶೀಘ್ರವಾಗಿ ಬಗೆಹರಿಸಬೇಕು, ಗುಂಡಿನ ದಾಳಿಯಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಅಸ್ಸಾಂ ಭೂಮಿಯ ಒತ್ತುವರಿಯನ್ನು ತಡೆಯಬೇಕು ಎಂದು ಈ ಸಂಘಟನೆಗಳು ಆಗ್ರಹಿಸುತ್ತಿವೆ.

More articles

Latest article

Most read