Monday, September 23, 2024

ಚಿತ್ರಕತೆ ಮತ್ತು ಪಾತ್ರಗಳ ಬಗ್ಗೆ ಮಾತನಾಡಿ, ಬಾಕ್ಸ್ ಆಫೀಸ್ ಕುರಿತು ಚರ್ಚಿಸಿ ಜಗಳವಾಡದಿರಿ: ಪ್ರೇಕ್ಷಕರಿಗೆ ನಟ ಸೂರ್ಯ ಕರೆ

Most read

ತಮಿಳು ಚಿತ್ರನಟ ಕಾರ್ತಿ ಅವರ ಮುಂಬರುವ ಚಿತ್ರ ಮೇಯಳಗನ್ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರದಲ್ಲಿ ಅರವಿಂದ್ ಸ್ವಾಮಿ ಮುಖ್ಯ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಕೊಯಮತ್ತೂರಿನಲ್ಲಿ ಮೇಯಳಗನ್ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ನಡೆದಿದ್ದು, ನಟ ಸೂರ್ಯ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡುತ್ತಾ, ಇತ್ತೀಚಿಗೆ ಚಿತ್ರ ಕತೆ ಮತ್ತು ಪಾತ್ರಗಳು ದೊಡ್ಡ ಮಟ್ಟದ ಸದ್ದು ಮಾಡುವ ಬದಲಾಗಿ ಬಾಕ್ಸ್ ಆಫೀಸ್ ಕಲೆಕ್ಟರ್ ಬಗ್ಗೆ ಹೆಚ್ಚು ಚರ್ಚೆಯಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ‌.

ಕಾರ್ಯಕ್ರಮದಲ್ಲಿ ನಟ ಸೂರ್ಯ ತಮ್ಮ ಅಭಿಮಾನಿಗಳಿಗೆ ಮತ್ತು‌ ಪ್ರೇಕ್ಷಕರಿಗೆ, ತಮ್ಮ ಕಥೆಗಳು ಮತ್ತು ಪಾತ್ರಗಳಿಗಾಗಿ ಚಲನಚಿತ್ರಗಳನ್ನು ವೀಕ್ಷಿಸಲು ವಿನಂತಿಸಿದರು. ಗಲ್ಲಾಪೆಟ್ಟಿಗೆಯ ಅಂಕಿಅಂಶಗಳನ್ನು ಬಗ್ಗೆ ತಲೆಕೆಡಿಸಿಕೊಳ್ಳಬೇಡಿ “ಸಿನಿಮಾಗಳನ್ನು ವೀಕ್ಷಿಸಿ ಮತ್ತು ಅವುಗಳನ್ನು ಕಥೆಗಳು ಮತ್ತು ಪಾತ್ರಗಳ ಬಗ್ಗೆ ಚರ್ಚಿಸಿ. ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಹೆಚ್ಚು ಚಿಂತಿಸುವುದರಿಂದ ಮತ್ತು ಇತರರೊಂದಿಗೆ ಜಗಳವಾಡುವುದರಿಂದ ದೂರವಿರಿ. ಚಲನಚಿತ್ರಗಳ ಕಲೆಕ್ಷನ್ನೇ ಮುಖ್ಯವಾಗಿರಬಾರದು” ಎಂದು ಸೂರ್ಯ ಹೇಳಿದ್ದಾರೆ.

ಹಿಂದಿನ ಸಂದರ್ಶನವೊಂದರಲ್ಲಿ, ನಟ ಕಾರ್ತಿ ಅವರು ತಮ್ಮ ಸಹೋದರ ಸೂರ್ಯ ಅವರು ಮೇಯಳಗನ್ ಸಂಪೂರ್ಣ ಸಿನಿಮಾ ವೀಕ್ಷಿಸಿ ಮೂಕವಿಸ್ಮಿತರಾಗಿ ನನ್ನನ್ನು ಗಟ್ಟಿಯಾಗಿ ಅಪ್ಪಿಕೊಂಡಿದ್ದರು‌. ಅವರು ನನ್ನ ಚೊಚ್ಚಲ ಚಿತ್ರ ಪರುತಿವೀರನ್ ಸಮಯದಲ್ಲಿ ಇಂತಹ ಅಪ್ಪುಗೆಯನ್ನು ನೀಡಿದ್ದರು‌. ಅದಾದ ಮೇಲೆ “ಈ ಚಿತ್ರ ನೋಡಿದ ನಂತರ, ಅವರು ನಾನು ಊಟ ಮಾಡುವಾಗ ನನ್ನ ಬಳಿಗೆ ಬಂದು ಹಾಗೆ ನನ್ನನ್ನು ತಬ್ಬಿಕೊಂಡರು. ನಾನು ಪರುತ್ತಿವೀರನ್ ಚಿತ್ರಕ್ಕೆ ಪಾದಾರ್ಪಣೆ ಮಾಡಿದ ನಂತರ ಈ ರೀತಿಯ ಪ್ರತಿಕ್ರಿಯೆ ನನಗೆ ಸಿಕ್ಕಿಲ್ಲ. ಇದು ತುಂಬಾ ವಿಶೇಷವಾಗಿದೆ. ” ಎಂದು ಹೇಳಿಕೊಂಡಿದ್ದಾರೆ.

More articles

Latest article