ದಲಿತ ಗುತ್ತಿಗೆದಾರ ಹೆಂಡತಿಯನ್ನು ಮಂಚಕ್ಕೆ ಕರೆದ ಬಿಜೆಪಿ ಶಾಸಕ ಮುನಿರತ್ನ: ಕಾಂಟ್ರಾಕ್ಟರ್ ಚಲುವರಾಜು ಆರೋಪ

Most read

ಹಣವನ್ನು ತಂದುಕೊಡು ಇಲ್ಲವೇ ನಿನ್ನ ಹೆಂಡತಿಯನ್ನು ತಂದು ಬಿಡು, ನಿನ್ನನ್ನು ರೇಣುಕಾಸ್ವಾಮಿ ತರನೇ ಕೊಲೆ ಮಾಡ್ತಿವಿ ಎಂದು ಬಿಜೆಪಿ ಶಾಸಕ ಮುನಿರತ್ನ ಹಾಗೂ ಅವರ ಆಪ್ತ ವಸಂತ್ ಕುಮಾರ್ ಬೆದರಿಕೆ ಹಾಕಿದ್ದಾರೆ ಎಂದು ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಆರೋಪಿಸಿದ್ದಾರೆ.

ಈ ಕುರಿತು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿನ್ನ ಗುತ್ತಿಗೆಯನ್ನು ಕ್ಯಾನ್ಸಲ್ ಮಾಡಿಸುತ್ತೇನೆ. ಎಷ್ಟು ವರ್ಷದಿಂದ ಕೆಲಸ ಮಾಡ್ತಿದಿಯಾ ನೀನು ನನಗೆ 36 ಲಕ್ಷ ಕೊಡಬೇಕು ಎಂದು ಸುಲಿಗೆ ಮಾಡಲು ಮುಂದಾಗಿದ್ದರು ಆದರೆ ನನಗೆ ಅಷ್ಟು ಹಣ ಇರಲಿಲ್ಲ. ನಂತರ ಮೀಟಿಂಗ್ ಕರೆದು ಅಲ್ಲಿ ಮರ್ಡರ್ ಮಾಡ್ತಿನಿ ಎಂದೆಲ್ಲ ಬೆದರಿಕೆ ಹಾಕಿದ್ದರು. ಇದನ್ನೆಲ್ಲ ನಾನು ವಿಡಿಯೋ ಮಾಡಿಕೊಳ್ಳಲು ಹೋದಾಗ ಮೊಬೈಲ್ ಹೊರಗಡೆ ಇಟ್ಟು ಬಾ ಎಂದು ಕಳಿಸಿ ಅವಾಚ್ಯ ಶಬ್ದಗಳಿಂದ ಮುನಿರತ್ನ ನಿಂದಿಸಿರುವುದಾಗಿ ಆರೋಪಿಸಿದ್ದಾರೆ.

ಇದಲ್ಲದೇ ಜಾತಿ ನಿಂದನೆ, ತಾಯಿ ಹೆಂಡತಿಯ ಬಗ್ಗೆ ಅವಾಚ್ಯವಾಗಿ ನಿಂದಿಸಿ ಅವರನ್ನು ತನ್ನ ಬಳಿಗೆ ಕಳಿಸುವಂತೆ ಬೆದರಿಕೆ ಕೂಡ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಮೂರು ದಿನದ ಮುಂದೆ ಮುನಿರತ್ನ ಆಪ್ತ ವಸಂತಕುಮಾರ್ ಸಿಕ್ಕಿದ್ದರು. ನೀನು ಹಣ ಕೊಟ್ಟಿಲ್ಲ ಅಂದ್ರೆ ರೇಣುಕಾಸ್ವಾಮಿ ತರ ನಿನಗೂ ಆಗುತ್ತೆ ಅಂದರು. ಅದಕ್ಕೆ ನನಗೆ ಭಯ ಆಗಿದೆ. ಮುನಿರತ್ನ ನನ್ನನ್ನು ಏನಾದ್ರೂ ಮಾಡುವಷ್ಟು ಪ್ರಭಾವಿ. ನನ್ನ ಜೀವಕ್ಕೆ ಅಪಾಯವಿದೆ. ಮುಂದೆ ನಾನು‌ ಜೀವಂತವಾಗಿ ಇರ್ತಿನೋ ಇಲ್ವೋ ಗೊತ್ತಿಲ್ಲ ಎಂದಿದ್ದಾರೆ.

ನಾನು ಪೌರ ಕಾರ್ಮಿಕನಾಗಿ, ಲಾರಿ ಕ್ಲೀನರ್,‌ ಡ್ರೈವರ್ ಆಗಿ ಕೆಲಸ ಮಾಡಿ, ಈಗ ವಾರ್ಡ್ ಗುತ್ತಿಗೆದಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

More articles

Latest article