ನಟ ದರ್ಶನ್‌ ಬಳ್ಳಾರಿ ಜೈಲಿಗೆ ಶಿಫ್ಟ್: ಬದಲಾಯ್ತು ಕೈದಿ ನಂಬರ್​

Most read

ರೇಣುಕಾಸ್ವಾಮಿ ಕೊಲೆ ಪ್ರಕರಣದ A2 ಆರೋಪಿ ದರ್ಶನ್ ರನ್ನು ಇಂದು ಬೆಳ್ಳಂಬೆಳಗ್ಗೆ ಅಧಿಕಾರಿಗಳು ಸುರಕ್ಷಿತವಾಗಿ ಪರಪ್ಪನ ಅಗ್ರಹಾರದಿಂದ ಬಳ್ಳಾರಿಗೆ ಕರೆದುಕೊಂಡು ಹೋಗಿದ್ದಾರೆ. 9.45ರ ವೇಳೆಗೆ ಬಳ್ಳಾರಿಗೆ ತಲುಪಿಸಿದ್ದು, ಆರೋಪಿ ದರ್ಶನ್ಗೆ ಹೊಸ ಕೈದಿ ನಂಬರ್​ ಕೂಡ ಜೈಲಾಧಿಕಾರಿಗಳು ನೀಡಿದ್ದಾರೆ.

ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ದರ್ಶನ್​ಗೆ ಜೈಲಾಧಿಕಾರಿಗಳಿಂದ ಕೈದಿ ನಂಬರ್​ 6106 ನೀಡಿದ್ದರು. ಆದರೀಗ ಬಳ್ಳಾರಿಗೆ ಶಿಫ್ಟ್​ ಆದ ಬಳಿಕ ಬೇರೆ ನಂಬರ್​ ನೀಡಿದ್ದಾರೆ. ಈಗ  ದರ್ಶನ್​ಗೆ ಕೈದಿ ನಂಬರ್​ 511 ಆಗಿದೆ.

ಮೊದಲಿಗೆ 6106 ನಂಬರ್​ ಸಿಕ್ಕಿದಾಗ ನಟನ ಅಭಿಮಾನಿಗಳು ಆ ನಂಬರನ್ನು ವಾಹನದ ಮೇಲೆ, ಹಚ್ಚೆ ಹಾಕಿಸಿಕೊಳ್ಳುವ ಮೂಲಕ ಹುಚ್ಚು ಅಭಿಮಾನ ಮೆರೆದಿದ್ರು. ಆದರೀಗ ಹೊಸ ನಂಬರ್​ ಸಿಕ್ಕಿದ್ದು ಅಭಿಮಾನಿಗಳು ಏನು ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಪರಪ್ಪನ ಅಗ್ರಹಾರದಲ್ಲಿದ್ದಾಗ ದರ್ಶನ್​ ಭೇಟಿಗೆ ಅವರ ಕುಟುಂಬಸ್ಥರು ಪದೇ ಪದೇ ಬರುತ್ತಿದ್ದರು. ಬೆಂಗಳೂರಿನಿಂದ 300ಕ್ಕೂ ಹೆಚ್ಚು ಕಿಮೀ ಇರುವ ಬಳ್ಳಾರಿ ಜೈಲಿಗೆ ಬರುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

More articles

Latest article