ದಸರಾ ಸಂಭ್ರಮ ಆರಂಭ : ಇಂದು ಅರಮನೆಗೆ ಆಗಮಿಸಿದ ಗಜಪಡೆ

Most read

ನಾಡಹಬ್ಬ ದಸರಾ ಸಂಭ್ರಮಕ್ಕೆ ಗಜಪಯಣ ಮೂಲಕ ಆರಂಭ ದೊರಕಿದೆ. ದಸರಾ ಹಬ್ಬಕ್ಕಾಗಿ ಹಲವು ಸಿದ್ಧತೆ ನಡೆಯುತ್ತಿದೆ. ಮೈಸೂರಿಗೆ ಆಗಮಿಸಿರುವ ಗಜಪಡೆಯು ಅರಣ್ಯ ಇಲಾಖೆ ಆವರಣದಲ್ಲಿ ವಿಶ್ರಾಂತಿ ತೆಗೆದುಕೊಂಡಿದ್ದು, ಇಂದು ಜಯ ಮಾರ್ತಾಂಡ ದ್ವಾರದ ಮೂಲಕ ಅರಮನೆ ಪ್ರವೇಶ ಮಾಡಿವೆ.

ವಿ‍ಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಬುಧವಾರ ವೀರನಹೊಸಹಳ್ಳಿಯಿಂದ ಗಜಪಯಣದ ಮೂಲಕ ಮೈಸೂರಿಗೆ ಆಗಮಿಸಿದ್ದ ಅಭಿಮನ್ಯು ನೇತೃತ್ವದ ಮೊದಲ ಹಂತದ 9 ಗಜಪಡೆ ಅರಣ್ಯ ಭವನದ ಆವರಣದಲ್ಲಿ ವಾಸ್ತವ್ಯ ಹೂಡಿದ್ದವು.

ಗುರುವಾರ ಅರಣ್ಯ ಭವನದ ಆವರಣದಲ್ಲಿ ಗಜಪಡೆಗೆ ಮಾವುತರು ಹಾಗೂ ಕಾವಾಡಿಗಳು ಮಜ್ಜನ ಮಾಡಿಸಿದ್ದಾರೆ. ಇಂದು ಅರಣ್ಯ ಭವನದಿಂದ ಅರಮನೆಗೆ ಗಜಪಡೆಯನ್ನು ಕರೆತಂದಿದ್ದಾರೆ.

ಅರಣ್ಯಾಧಿಕಾರಿಗಳು ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಅಭಿಮನ್ಯು ನೇತೃತ್ವದ 9 ಗಜಪಡೆಯನ್ನ ಅರಮನೆಗೆ ರಸ್ತೆ ಮೂಲಕ ಕರೆತಂದಿದ್ದಾರೆ. ಅರಮನೆ ಮುಂಭಾಗದ ಜಯ ಮಾರ್ತಂಡ ದ್ವಾರದ ಬಳಿ ಬೆಳಗ್ಗೆ 10 ರಿಂದ 10.30ರ ತುಲಾ ಲಗ್ನದಲ್ಲಿ ಗಜಪಡೆಯನ್ನು ಸ್ವಾಗತ ಮಾಡಲಾಗಿದೆ.

More articles

Latest article