ವಿಧಾನಸಭೆಯಲ್ಲಿ ಮತ್ತೆ ಗದ್ದಲ; ಸದನ ಮುಂದೂಡಿಕೆ

Most read

ಮುಡಾ ಹಗರಣ ಕುರಿತು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಗುರುವಾರ ಸದನ ಆರಂಭವಾಗ್ತಿದ್ದಂತೆ ಗದ್ದಲ ಉಂಟು ಮಾಡಿದರು.

ಮುಡಾ ಹಗರಣದ ಬಗ್ಗೆ ಸದನದಲ್ಲಿ ಚರ್ಚೆಗೆ ಅವಕಾಶ ಕೊಡಬೇಕು. ಮುಡಾದಲ್ಲಿ ಸಿಎಂ ತಪ್ಪಿಲ್ಲ ಎಂದರೆ ಚರ್ಚೆಗೆ ಏಕೆ ಮುಂದಾಗುತ್ತಿಲ್ಲ? ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಪ್ರಶ್ನಿಸಿದರು.

ನಮಗೆ ನಿಯಮಾವಳಿ ಪಾಠ ಮಾಡುವ ಕಾಂಗ್ರೆಸ್ ನವರು, ಸಿಎಂ ಮುಡಾ ಹಗರಣದಲ್ಲಿ ನಿಯಮ ಉಲ್ಲಂಘನೆ ಮಾಡಿದ್ದಾರೆ ಅದರ ಬಗ್ಗೆ ಏಕೆ ಮಾತನಾಡ್ತಿಲ್ಲ? ಎಂದು ಸುನೀಲ್ ಕುಮಾರ್ ಕೂಡಾ ಚರ್ಚೆಗೆ ಅವಕಾಶ ನೀಡುವಂತೆ ಆಗ್ರಹಿಸಿದರು.  

More articles

Latest article