ಇದು ನಮ್ಮ ಜಿಲ್ಲೆ, ರಾಜ್ಯದ ಹೆಣ್ಣು ಮಕ್ಕಳ ಮಾನ ಗೌರವದ ಪ್ರಶ್ನೆ : ವಕೀಲ ದೇವರಾಜೇಗೌಡ

Most read

ಹಾಸನ: ನಾನು ವಕೀಲನಾಗಿ ಸತ್ಯಾಸತ್ಯತೆ ಬಗ್ಗೆ ಪರಿಶೀಲನೆ ಮಾಡಬೇಕು. ಪೆನ್ ಡ್ರೈವ್ ನನಗೆ ಕೊಟ್ಟಿದ್ದ. ನಾನು ಯಾರಿಗೂ ಕೊಡಲ್ಲ, ಕೋರ್ಟ್ ನಲ್ಲಿ ಜಡ್ಜ್ ಮುಂದೆ ಕೊಡ್ತೀನಿ ಅಂತಾ ಅಂದಿದ್ದೆ. ಅದ್ರೆ ಅಶ್ಲೀಲ ವಿಡಿಯೋ ಕಾರ್ತಿಕ್ ಕೈಗೆ ಹೇಗೆ ಬಂತು ಎಂದು ವಕೀಲ ದೇವರಾಜೇಗೌಡ ಪ್ರಶ್ನೆ ಮಾಡಿದ್ದಾರೆ.

ವಕೀಲ ದೇವರಾಜೇಗೌಡ ಪ್ರತಿಕ್ರಿಯೆ ನೀಡಿದ್ದು, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ದೇಶದಾದ್ಯಂತ ದೊಡ್ಡ ಸಂಚಲನ ಉಂಟು ಮಾಡ್ತಿದೆ. ಕಾರ್ತಿಕ್ 14-15 ವರ್ಷದಿಂದ ಪ್ರಜ್ವಲ್ ಹತ್ರ ಕೆಲಸ ಮಾಡ್ತಿದ್ದೆ ಅಂತಾ ಆತನೇ ಹೇಳಿಕೊಂಡಿದ್ದಾನೆ. ಅಶ್ಲೀಲ ವಿಡಿಯೋಗೆ ಸಂಬಂಧಿಸಿದಂತೆ ಸ್ಟೇ ಕೂಡ ತಗೊಂಡಿದ್ದಾರೆ. ಕಾರ್ತಿಕ್ ನನ್ನ ಹೆಂಡತಿನಾ ಕಿಡ್ನಾಪ್ ಮಾಡಿದ್ದ ಅಂತಾ ಹೇಳಿಕೊಂಡಿದ್ದ. ಕಾಂಗ್ರೆಸ್ ನವರ ಹತ್ರ ಹೋಗಿದ್ದೆ ನ್ಯಾಯ ಸಿಗಲಿಲ್ಲ ಅಂತಾ ಹೇಳಿದ್ದ. ಸ್ಟೇ ತೆಗೆಸಲು ಹೇಳಿದ್ದೇ ಅಂದಿದ್ದಾನೆ.

ಡೌನ್‌ಲೋಡ್ ಮಾಡಿದವರು ಯಾರು. ಪೆನ್ ಡ್ರೈವ್ ಎಲ್ಲಿಂದ ಬಂತು. ಪ್ರಜ್ವಲ್ ರೇವಣ್ಣ ಮೊಬೈಲ್ ನಲ್ಲಿ ಇದ್ದ ವಿಡಿಯೋಗಳು ಕಾರ್ತಿಕ್ ಗೆ ಹೇಗೆ ಬಂದ್ವು. ದೃಶ್ಯ ಮತ್ತು ಪ್ರಿಂಟ್ ಮೀಡಿಯಾ ಮೇಲೆ ಇಂಜೆಕ್ಷನ್ ತಂದ್ರು. ಅದ್ರೆ ಕಾರ್ತಿಕ್ ನನ್ನ ಅಲ್ಲಿ ಪಾರ್ಟಿ ಮಾಡಿಲ್ಲ. ಬಿಜೆಪಿಯವರು ಯಾಕ್ ಲೀಕ್ ಮಾಡ್ತಾರೆ. ಜೆಡಿಎಸ್ ನವರು ಅವರದು ಅವರೇ ಲೀಕ್ ಮಾಡ್ತಾರಾ. ಇದರಿಂದ ಕಾಂಗ್ರೆಸ್ ನವರಿಗೆ ಲಾಭ‌. ಕಾರ್ತಿಕ್ ಮೊದಲೇ ಹೇಳಿದ್ದ ಕಾಂಗ್ರೆಸ್ ನಿಂದ ನ್ಯಾಯ ಸಿಕ್ಕಿಲ್ಲ ಅಂದಿದ್ದ. ಕಾರ್ತಿಕ್ ಹೇಳಿದ್ದು ಎಲ್ಲಾ ಸತ್ಯ. ಅದ್ರೆ ಕೊನೆಯಲ್ಲಿ ಹೇಳಿದ್ದು, ಪೆನ್ ಡ್ರೈವ್ ಬಿಟ್ಟಿದ್ದ ವಿಚಾರ ಸುಳ್ಳು. ಹೆಣ್ಣು ಮಕ್ಕಳ ಭವಿಷ್ಯ ಇರುವ ಪೆನ್ ಡ್ರೈವ್ ಕಾರ್ತಿಕ್ ಗೆ ಹೇಗೆ ಬಂತು. ವಿಡಿಯೋಗಳು ಹೇಗೆ ಬಂತು. ನಾನು ಹೈಕಮಾಂಡ್ ಗೆ ಲೆಟರ್ ಕೂಡ ಬರೆದಿದ್ದೆ.

ಇದು ನಮ್ಮ ಜಿಲ್ಲೆ, ರಾಜ್ಯದ ಹೆಣ್ಣು ಮಕ್ಕಳ ಮಾನ ಗೌರವದ ಪ್ರಶ್ನೆ. ಅವರ ಗೌರವಕ್ಕೆ ನಾನು ಧಕ್ಕೆ ತರಲ್ಲ‌. ಎಸ್ಐಟಿ ನನಗೆ ನೋಟಿಸ್ ಕೊಡಲಿ ಅಂತಾ ಕಾಯ್ತಾ ಇದ್ದೀನಿ. ನನ್ನತ್ರ ಕೆಲವು ದಾಖಲೆಗಳು ಇವೆ ಕೊಡ್ತೀನಿ. ರಾಜ್ಯ ಸರ್ಕಾರ ಸೂಕ್ತ ತನಿಖೆ ನಡೆಸಲಿ. ಇಲ್ಲದೆ ಇದ್ರೆ ಹೈಕೋರ್ಟ್ ನಲ್ಲಿ ರಿಟ್ ಹಾಕ್ತೀನಿ. ಸಿಬಿಐಗೆ ವಹಿಸಬೇಕು ಅಂತಾ ಕೊರುತ್ತೇನೆ ಎಂದು ದೇವರಾಜೇಗೌಡ ಹೇಳಿದ್ದಾರೆ.

More articles

Latest article