ಪ್ರಧಾನಿಗೆ ಪ್ರಣಾಳಿಕೆ, ಸಂವಿಧಾನ ಪ್ರತಿ ರವಾಣಿಸಿದ ಯೂತ್ ಕಾಂಗ್ರೆಸ್

Most read

ಬೆಂಗಳೂರು: ನಗರದ ಕೆಪಿಸಿಸಿ ಕಚೇರಿ ಎದುರು ಇಂದು ಯೂತ್ ಕಾಂಗ್ರೆಸ್ ವತಿಯಿಂದ ಪ್ರಧಾನಿ ಮೋದಿಯವರಿಗೆ ಭಾರತ ಸಂವಿಧಾನ ಪ್ರತಿ ಮತ್ತು ಕಾಂಗ್ರೆಸ್ ಪ್ರಣಾಳಿಕೆ ಕೋರಿಯರ್ ಮಾಡುವ ಅಭಿಯಾನ ನಡೆಯಿತು.

ಕೋರಿಯರ್ ಮಾಡಿದ ನಂತರ ಅಭಿಯಾನದ ನೇತೃತ್ವ ವಹಿಸಿದ್ದ ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಅವರು ಮಾತನಾಡಿ, ಪ್ರಧಾನಿ ಮೋದಿಯವರಿಗೆ ಕಾಂಗ್ರೆಸ್ ಪ್ರಣಾಳಿಕೆ ಓದದೆ ಚುನಾವಣಾ ಪ್ರಚಾರ ಸಭೆಗಳಲ್ಲಿ ಸುಳ್ಳು ಹೇಳುತ್ತಿದ್ದಾರೆ‌. ತಿಳಿವಳಿಕೆಯ ಕೊರತೆಯಿಂದ ಪ್ರಧಾನಿಗಳು ಹೀಗೆ ಅಸಂವಿಧಾನಿಕವಾಗಿ ಮಾತನಾಡುತ್ತಿದ್ದಾರೆ. ಅದಕ್ಕಾಗಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಹಾಗೂ ಸಂವಿಧಾನ ಓದಲು ಅನುಕೂಲವಾಗಲಿ ಎಂದು ಕೋರಿಯರ್ ಮಾಡಿದ್ದೇವೆ ಎಂದರು.

ಕಾಂಗ್ರೆಸ್ ದೇಶದ ಜನತೆಗೆ ಐತಿಹಾಸಿಕ ಗ್ಯಾರಂಟಿಗಳನ್ನು ಕೊಟ್ಟಿದೆ. ಮೊದಲ ಹಂತದ ಚುನಾವಣೆ ಬಳಿಕ ಬಿಜೆಪಿಯವರಿಗೆ ಭಯ ಶುರುವಾಗಿದೆ. ಅದಕ್ಕೆ ಏನೇನೂ ಮಾತಾಡುತ್ತಾರೆ. ಬಿಜೆಪಿಯ ಎಲ್ಲಾ ನಾಯಕರ ನಮ್ಮ ಪ್ರಣಾಳಿಕೆ ಓದಿಕೊಳ್ಳಬೇಕು. ಎಲ್ಲಾ ವರ್ಗಗಳನ್ನ ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಪ್ರಣಾಳಿಕೆ ರೂಪಿಸಿದೆ. ಪ್ರಧಾನಿ ಸುಳ್ಳು, ಭ್ರಷ್ಟಾಚಾರದ ಚಾಂಪಿಯನ್ ಆಗಿದ್ದಾರೆ ಎಂದು ಪ್ರಧಾನಿ ವಿರುದ್ಧ ಗುಡುಗಿದ್ದಾರೆ.

More articles

Latest article