ತೆಲುಗು ನಟ ಮಂಚು ಮನೋಜ್ ಗೆ ಸುದೀಪ್ ಮತ್ತು ದರ್ಶನ್ ಸಾಥ್..!

Most read

ಸಿನಿಮಾ ಇಂಡಸ್ಟ್ರಿ ಅಂದ್ರೆ ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲಬೇಕು. ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಸುದೀಪ್ ಹೊಸಬರ ಸಿನಿಮಾಗಳಿಗೆ ಸಪೋರ್ಟಿವ್ ಆಗಿ ನಿಲ್ಲುತ್ತಾರೆ. ಅವರ ಸಿನಿಮಾಗಳಿಗೆ ಸಾಥ್ ನೀಡುತ್ತಾರೆ. ಇದೀಗ ದರ್ಶನ್ ಅಂಡ್ ಸುದೀಪ್ ತೆಲುಗು ನಟನಿಗೆ ಸಾಥ್ ನೀಡಿದ್ದಾರೆ. ಅವರ ಸಿನಿಮಾವನ್ನು ಪ್ರಚಾರ ಮಾಡಿದ್ದಾರೆ. ಇನ್ನು ನಟ ದರ್ಶನ್ ಸಾಮಾನ್ಯವಾಗಿ ಬೇರೆ ಭಾಷೆಯವರ ಪೋಸ್ಟ್ ಗಳನ್ನು ಹಂಚಿಕೊಳ್ಳುವುದಿಲ್ಲ. ಆದರೆ ಮಂಚು ಮನೋಜ್ ಅವರ ಪೋಸ್ಟ್ ಹಂಚಿಕೊಂಡು ಶುಭ ಹಾರೈಸಿದ್ದಾರೆ.

ಈಗ ಹೇಳಿ ಕೇಳಿ ಪ್ಯಾನ್ ಇಂಡಿಯಾ ಜಮಾನ. ಎಲ್ಲಾ ಭಾಷೆಯವರು ಎಲ್ಲರಿಗೂ ಆತ್ಮೀಯರಾಗಿರುತ್ತಾರೆ. ಜೊತೆಗೆ ಪ್ರಿ ರಿಲೀಸ್, ಪ್ರಮೋಷನ್ ಅಂತ ಬೇರೆ ಇಂಡಸ್ಟ್ರಿಯವರನ್ನು ಕರೆಯುತ್ತಾರೆ. ಇದೀಗ ತೆಲುಗು ನಟ ಮಂಚು ಮನೋಜ್ ಅವರ ಸಿನಿಮಾವನ್ನು ನಮ್ಮ ಕನ್ನಡದ ಬಿಗ್ ಸ್ಟಾರ್ ಗಳು ಬೆಂಬಲಿಸಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅವರ ಸಿನಿಮಾ ಪೋಸ್ಟರ್ ಹಾಕಿ ಶುಭಕೋರಿದ್ದಾರೆ.

ಮಂಚು ಮನೋಜ್ ‘ಮಿರೈ’ ಎಂಬ ಸಿನಿಮಾ ಮಾಡಿದ್ದಾರೆ. ಅದರ ಟೀಸರ್ ರಿಲೀಸ್ ಆಗಿದ್ದು, ದಚ್ಚು, ಕಿಚ್ಚ ಟೀಸರ್ ಹಂಚಿಕೊಂಡಿದ್ದಾರೆ. ತೆಲುಗಿನ ಖ್ಯಾತ ನಟ ಮೋಹನ್ ಬಾಬು ಪುತ್ರ ಮಂಚು ಮನೋಜ್. ತಂದೆಯ ಹಾದಿಯಲ್ಲಿಯೇ ಮಕ್ಕಳು ಕೂಡ ಸಿನಿಮಾ ರಂಗದಲ್ಲಿ ನಡೆಯುತ್ತಿದ್ದಾರೆ. ವಿಷ್ಣು, ಮಂಚು ಲಕ್ಷ್ಮೀ ಕೂಡ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಮಂಚು ಮನೋಜ್ ಸಿನಿಮಾ ಇಂಡಸ್ಟ್ರಿಯಿಂದ ದೂರವಾಗಿದ್ದರು. ಏಳು ವರ್ಷಗಳ ಬಳಿಕ ಕಮ್ ಬ್ಯಾಕ್ ಆಗುತ್ತಿದ್ದು, ಮಿರೈ ಸಿನಿಮಾದಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಮಿರೈ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಅದ್ದೂರಿಯಾಗಿ ನಿರ್ಮಾಣವಾಗಿದೆ. ಮನೋಜ್ ಈ ಸಿನಿಮಾದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ತೇಜಾ ಸಜ್ಜಾ ಹೀರೋ ಆಗಿದ್ದಾರೆ.

More articles

Latest article