ಹಗರಣದ ದಾಖಲೆ ಇಟ್ಕೊಂಡ್‌ ಏನ್‌ ಮಾಡ್ತಿರಾ, ಸರ್ಕಾರ ನಿಮ್ಮದೇ ಇದೆ ಕ್ರಮಕೈಗೊಳ್ಳಿ: ಪ್ರಿಯಾಂಕ ಖರ್ಗೆಗೆ ಪ್ರತಾಪ್‌ ಸಿಂಹ ಚಾಟಿ

Most read

40% ಕಮಿಷನ್ ಹಗರಣದ ಬಗ್ಗೆ ಕಾಂಗ್ರೆಸ್‌ ಮಾತನಾಡುತ್ತಲೇ ಇದ್ದಾರೆ. ಇತ್ತ ಪಿಎಸ್‌ಐ ಹಗರಣದ ಬಗ್ಗೆ ಸಚಿವ ಪ್ರಿಯಾಂಕ್‌ ಖರ್ಗೆ ದಾಖಲೆಗಳಿವೆ ಅಂತಾರೆ ದಾಖಲೆ ಇದ್ರೆ ತನಿಖೆ ಮಾಡಿಸಿ ಎಂದು ಸಚಿವ ಪ್ರಿಯಾಂಕ ಖರ್ಗೆಗೆ ಮಾಜಿ ಸಂಸದ ಪ್ರತಾಪ್‌ ಸಿಂಹ ಸವಾಲು ಹಾಕಿದ್ದಾರೆ.

ಹಾಸನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, 40% ಕಮಿಷನ್ ಹಗರಣದ ಬಗ್ಗೆ ಹಾಗೂ ಪಿಎಸ್‌ಐ ಹಗರಣದ ಬಗ್ಗೆ ಕಾಂಗ್ರೆಸ್‌ ಮಾತನಾಡುತ್ತಲೇ ಇದ್ದಾರೆ. ಇತ್ತ ಸಚಿವ ಪ್ರಿಯಾಂಕ್‌ ಖರ್ಗೆ ದಾಖಲೆಗಳಿವೆ ಅಂತಾರೆ. ದಾಖಲೆ ಇದ್ರೆ ಇಟ್ಕಂಡು ಏನು ಮಾಡುತ್ತಿದ್ದೀರಾ ? ಕರ್ನಾಟಕ ಸರ್ಕಾರವೇ ನಿಮ್ಮ ಕೈಯಲ್ಲಿದೆ. ಯಾವ್ಯಾವ ಹಗರಣ ಇದೆ ಎಲ್ಲಾ ವಿಚಾರದ ಬಗ್ಗೆಯೂ ತನಿಖೆ ಮಾಡಿಸಿ ಅಂತ ಸವಾಲು ಹಾಕಿದ್ದಾರೆ.

ಯಾವ್ಯಾವ ಹಗರಣದ ಇದೆ ಎಲ್ಲಾ ತೆಗೆದುಕೊಂಡು ಬನ್ನಿ
ಹಿರಿಯ ರಾಜಕಾರಣಿಗಳು ಏನಿದ್ದೀರಿ ಒಬ್ಬಬ್ಬರೊನ್ನು ಒಬ್ಬೊಬ್ಬರು ಎಕ್ಸ್‌ಪೋಸ್ ಮಾಡಿಕೊಳ್ಳಿ. ಕನಿಷ್ಠ ನೆಕ್ಸ್ಟ್ ಜನರೇಷನ್‌ಗಾದರೂ ಒಳ್ಳೆಯ ರಾಜಕಾರಣಿಗಳು ಬರಲು ಅವಕಾಶ ಆಗುತ್ತೆ. ಆಡಳಿತ, ಪೊಲೀಸ್ ವ್ಯವಸ್ಥೆ ಅವರ ಬಳಿಯೇ ಇದೆ, 40% ಹಗರಣದ ಬಗ್ಗೆ ತನಿಖೆ ಮಾಡಿಸಿ ಎಂದಿದ್ದಾರೆ.

ಮುಡಾದಲ್ಲಿ ಬಿಜೆಪಿ- ಜೆಡಿಎಸ್​ನದ್ದೂ ಹಗರಣಗಳಿವೆ. ಈ ಬಗ್ಗೆ ಕಾಂಗ್ರೆಸ್​ನವರು ಯಾಕೆ ಮಾತಾಡ್ತಿಲ್ಲ? ಎಲ್ಲಾ ಪಕ್ಷದ ಸೀನಿಯರ್ ಲೀಡರ್ಸ್ ಅಡ್ಜಸ್ಟ್‌ಮೆಂಟ್ ಪಾಲಿಟಿಕ್ಸ್‌ನಲ್ಲಿ ಇದ್ದಾರೆ ಎಂದು ಆರೋಪಿಸಿದ್ದಾರೆ.

More articles

Latest article