ಯಡಿಯೂರಪ್ಪರನ್ನು ಕಿತ್ತು ಹಾಕಿದ್ದೆ ಪ್ರಹ್ಲಾದ್‌ ಜೋಷಿ : ವಿನಯ್ ಕುಲಕರ್ಣಿ ಆಕ್ರೋಶ

Most read

ಧಾರವಾಡ: ಪ್ರಹ್ಲಾದ ಜೋಶಿಯವರು ಲಿಂಗಾಯತ ಸಮಾಜವನ್ನ ತುಳಿಯುವ ಕಾರ್ಯ ಮಾಡಿದ್ದಾರೆ. ಯಡಿಯೂರಪ್ಪರನ್ನ ಕಿತ್ತು ಹಾಕಿದ್ದೆ ಜೋಶಿಯವರು ಎಂದು ಮಾಜಿ ಸಚಿವ, ಶಾಸಕ ವಿನಯ್‌ ಕುಲಕರ್ಣಿ ವಾಗ್ದಾಳಿ ನಡೆಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಶಿಗ್ಗಾವಿ ಸೇರಿದಂತೆ ಎಲ್ಲ ಕಡೆಯಲ್ಲೂ ಬದಲಾವಣೆ ಜನ ಬಯಸಿದ್ದಾರೆ. 4 ಬಾರಿ ನಿರಂತರ ಗೆಲುವು ಸಾಧಿಸಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಸೇಡಿನ ರಾಜಕಾರಣ ಬಿಟ್ಟರೆ, ಜನರನ್ನು ತುಳಿಯುವುದನ್ನು ಬಿಟ್ಟರೆ ಏನು ಮಾಡಿಲ್ಲ. ಜನರು ನಮ್ಮ ಪರವಾಗಿ ಇದ್ದಾರೆ. ನುಡಿದಂತೆ ಅವರು ನಡೆದಿಲ್ಲ. ನಾವು ನುಡಿದಂತೆ ನಡೆಯುತ್ತಿದ್ದೇವೆ ಎಂದು ಹೇಳಿದರು.

ಬಿಜೆಪಿಯಲ್ಲೇ ಹಲವು ನಾಯಕರು ಜೋಶಿ ಕಿತ್ತು ಹಾಕಬೇಕು ಎಂದು ನಿರ್ಧಾರ ಮಾಡಿದ್ದಾರೆ. ಜೋಶಿ ಲಿಂಗಾಯತ ಸಮಾಜವನ್ನು ತುಳಿಯುವ ಕಾರ್ಯ ಮಾಡಿದ್ದಾರೆ. ಯಡಿಯೂರಪ್ಪನವರನ್ನು ಕಿತ್ತು ಹಾಕಿದ್ದೆ ಜೋಶಿಯವರು. ಮುನೇನಕೊಪ್ಪ, ಚಿಕ್ಕನಗೌಡರ ಎಲ್ಲಿದ್ದಾರೆ? ಬಿಜೆಪಿ ಕಚೇರಿಯಲ್ಲಿ ಅಂಬೇಡ್ಕರ್ ಪೋಟೋ ಕಿತ್ತು ಹಾಕುತ್ತಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

 ಸೋಲಿನ ಭೀತಿಗೆ ಸಿಲುಕಿರುವ ಪ್ರಹ್ಲಾದ್‌ ಜೋಶಿ, ಸ್ವಾಮೀಜಿಗಳಿಗೆ ಪಾಕೆಟ್ ಕೊಡುತ್ತಿದ್ದಾರೆ. ಶಾಲು ಹೊದೆಸಿ. ಮಾಲೆ ಹಾಕಿ ದೊಡ್ಡ ಪಾಕೆಟ್ ಕೊಡುತ್ತಿದ್ದಾರೆ. ನಮ್ಮ ಬಳಿ ದಾಖಲೆ ಇವೆ. ಜೋಶಿಯವರು ಬಹಳಷ್ಟು ದುಡ್ಡು ಮಾಡಿದ್ದಾರೆ. ಈ ಚುನಾವಣೆಯಲ್ಲಿ ಆ ಹಣವನ್ನು ನೀರಿನಂತೆ ಖರ್ಚು ಮಾಡುತ್ತಿದ್ದಾರೆ. ಆದರೂ ಈ ಬಾರಿ ಅತಿ ಹೆಚ್ಚು ಒಲವು ನಮ್ಮ ಮೇಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

More articles

Latest article