Tuesday, September 17, 2024

ದಕ್ಷಿಣ ಕನ್ನಡ ಕ್ಷೇತ್ರದಿಂದ ಆರ್ ಪದ್ಮರಾಜ್ ಗೆದ್ದೇ ಗೆಲ್ತಾರೆ : ಜನಾರ್ದನ ಪೂಜಾರಿ

Most read

ಅಳೆದು, ತೂಗಿ ಕೊನೆಗೂ ದಕ್ಷಿಣ ಕನ್ನಡ ಕ್ಷೇತ್ರದಿಂದ ಕಾಂಗ್ರೆಸ್ ಹೈಕಮಾಂಡ್ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರ ಶಿಷ್ಯ ವಕೀಲ ಆರ್ ಪದ್ಮರಾಜ್ ಅವರಿಗೆ ಟಿಕೆಟ್‌ ನೀಡಿದೆ. ಪದ್ಮರಾಜ್ ಗೆಲುವಿನ ಬಗ್ಗೆ ಖುದ್ದು ಜನಾರ್ದನ ಪೂಜಾರಿ ಅವರೇ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹೌದು, ಮಂಗಳೂರಿನಲ್ಲಿ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಪ್ರತಿಕ್ರಿಯಿಸಿದ್ದು, ದಕ್ಷಿಣ ಕನ್ನಡ ಕ್ಷೇತ್ರದಿಂದ ಆರ್ ಪದ್ಮರಾಜ್ ಗೆದ್ದೇ ಗೆಲ್ತಾರೆ. ಯಾವ ಸಂಶಯ ಕೂಡ ಬೇಡ. ಅವರ ಮಾತುಗಳನ್ನು ಕೇಳಿದ್ದೀರಿ ಆತ ಅಹಂಕಾರಿ ಅಲ್ಲ. ಒಳ್ಳೆ ಯುವಕನನ್ನು ದಕ್ಷಣ ಕನ್ನಡದಲ್ಲಿ ನಿಲ್ಲಿಸಿದ್ದಾರೆ. ದೇವರು ಮೇಲಿಂದ ನೋಡುತ್ತಿದ್ದಾನೆ ಪದ್ಮರಾಜ್‌ ಅವರನ್ನು ಗೆಲ್ಲಿಸುತ್ತಾನೆ ಎಂದು ಹೇಳಿದ್ದಾರೆ.

1991ರಲ್ಲಿ ಕಳೆದುಕೊಂಡಿದ್ದ ದಕ್ಷಿಣ ಕನ್ನಡ (ಅಂದಿನ ಮಂಗಳೂರು) ಕ್ಷೇತ್ರವನ್ನು ಮತ್ತೆ ಪಡೆಯುವ ವಿಶ್ವಾಸವನ್ನು ಕೈ ನಾಯಕರು ಹೊಂದಿದ್ದಾರೆ.

ಪದ್ಮರಾಜ್ ಅವರು ಬಿಲ್ಲವ ಯುವ ಸಂಘಟನೆಯನ್ನು ಸಂಘಟಿಸುವುದರ ಮೂಲಕ ಸಮುದಾಯದಲ್ಲಿ ವಿಶ್ವಾಸವನ್ನು ಗಳಿಸಿಕೊಂಡದ್ದಲ್ಲದೆ ಗುರುಬೆಳದಿಂಗಳು ಫೌಂಡೇಶನ್ ಮೂಲಕ ಸಹಸ್ರಾರು ನೊಂದವರಿಗೆ ದಿನಸಿ, ಆಹಾರ ಸಾಮಗ್ರಿ ತಲುಪಿಸುವ ಮೂಲಕ ಗಮನ ಸೆಳೆದರು. ಕುಕ್ಕರ್ ಬಾಂಬ್ ಸ್ಪೋಟದ ಸಂತ್ರಸ್ತ ಉಜ್ಜೋಡಿಯ ಪುರುಷೋತ್ತಮ ಪೂಜಾರಿಯವರಿಗೆ ಸುಸಜ್ಜಿತವಾಗಿ ಮನೆ ನವೀಕರಣಗೊಳಿಸಿದ ವಿಚಾರವೂ ಸೇರಿದಂತೆ ಬಡವರಿಗೆ ಜಾತಿಮತದ ತಾರತಮ್ಯ ನೋಡದೆ ಸುಸಜ್ಜಿತವಾಗಿ ಮನೆ ನಿರ್ಮಿಸಿಕೊಡುವ ಮೂಲಕ ಪದ್ಮರಾಜ್ ಗಮನ ಸೆಳೆದಿದ್ದಾರೆ.

More articles

Latest article