ಬಿಜೆಪಿಯವರೇ ಪಾಕಿಸ್ತಾನದ ಪರ ಘೋಷಣೆ ಕೂಗಲು ಕಳಿಸ್ತಾರೆ: ಸಚಿವ ಜಮೀರ್

Most read

ರಾಯಚೂರು: ಬಿಜೆಪಿಯವರೇ ಕೆಲವು ಜನರನ್ನು ಕಳಿಸಿ ಪಾಕಿಸ್ತಾನದ ಪರ ಘೋಷಣೆ ಕೂಗಿಸುತ್ತಾರೆ. ಪಾಕಿಸ್ತಾನದ ಪರ ಘೋಷಣೆ ಕೂಗುವ ಯಾರನ್ನೇ ಆದರೂ ನಾವೇ ಗುಂಡಿಟ್ಟು ಕೊಲ್ಲುತ್ತೇವೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಪಾಕಿಸ್ತಾನದ ಪರ ಘೋಷಣೆ ಕೂಗುವವರನ್ನು ಗುಂಡಿಟ್ಟು ಟಿಶ್ಕ್ಯಾಂ ಟಿಶ್ಕ್ಯಾಂ ಟಿಶ್ಕ್ಯಾಂ ಅಂತಾ ಸ್ಥಳದಲ್ಲೇ ಗುಂಡಿಟ್ಟು ಕೊಲ್ಲಬೇಕು ಎಂದಿದ್ದಾರೆ. ಕೋರ್ಟ್ ಮೂಲಕ ಸರಕಾರವೇ ಇಂತಹ ಕಠಿಣ ನಿಯಮಕ್ಕೆ ಆದೇಶ ಮಾಡಬೇಕು.

ಬಿಜೆಪಿಯವರಿಗೆ ಚುನಾವಣೆ ಗೆಲ್ಲಲೂ ಯಾವುದೇ ವಿಷಯಗಳು ಇಲ್ಲವಾದಾಗ ಇಂತಹ ಕುಕೃತ್ಯ ಎಸಗಲು ಮುಂದಾಗುತ್ತಾರೆ. ಇಂತವರನ್ನು ಸ್ಥಳದಲ್ಲೇ ಗುಂಡಿಟ್ಟು ಕೊಲ್ಲುವ ನಿಯಮ ಬಂದಾಗ ಬಿಜೆಪಿಯವರಿಗೆ ಹೇಳಲು ಏನೂ ಇರುವುದಿಲ್ಲ. ಬಿಜೆಪಿಯವರಿಗೆ ಹಿಂದೂ ಬೇಡ, ಮುಸ್ಲಿಮರು ಬೇಡ ಅವರಿಗೆ ಬೇಕಾಗಿರುವುದು. ಕೇವಲ ಅಧಿಕಾರ ಎಂದು ಬಿಜೆಪಿಗರ ಮೇಲೆ ಕಿಡಿಕಾರಿದ್ದಾರೆ.

More articles

Latest article