ಮಧ್ಯಪ್ರದೇಶ: ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದ “ಛಾತ್ರೋಂಕಿ ಗೂಂಜ್” ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಂವಹನ ನಡೆಸಿದರು.
ಸಂವಹನದಲ್ಲಿ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ, ನೇಮಕಾತಿ ಪ್ರಶ್ನೆಪತ್ರಿಕೆ ಸೋರಿಕೆ, ಚರ್ತಿ ಮಾಡದ ಖಾಲಿ ಹುದ್ದೆಗಳು, ವಿದ್ಯಾರ್ಥಿವೇತನ ಸಿಗದಿರುವುದು ಸೇರಿದಂತೆ ಅನೇಕ ಸಮಸ್ಯೆಗಳು ವಿದ್ಯಾರ್ಥಿಗಳು ರಾಹುಲ್ ಗಾಂಧಿ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಹುಲ್ ಗಾಂಧಿ “ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವ ಇರುವವರು, ಆದರೆ ಇಂದಿನ ವ್ಯವಸ್ಥೆಗೆ “ಅಂಧಭಕ್ತ”ರು ಬೇಕಾಗಿದ್ದಾರೆ.
“ವಿದ್ಯಾರ್ಥಿಗಳು, ಯಾವಾಗಲೂ ಪ್ರಶ್ನಿಸುವಂತವರಾಗಬೇಕು, ಅಂಧಭಕ್ತರಾಗಬಾರದು ಎಂದು ರಾಹುಲ್ ಗಾಂಧಿ ಹೇಳಿದರು “ಶಿಕ್ಷಣ ಪ್ರತಿಯೊಬ್ಬರ ಹಕ್ಕು” ಎಂದು ರಾಹುಲ್ ಗಾಂಧಿ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು

