ಮೈಸೂರು, ಸೆ. 15 : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೂತನ ಮನೆಯ ಗೃಹಪ್ರವೇಶ ಕಾರ್ಯಕ್ರಮ ಗೌರಿ – ಗಣೇಶ ಹಬ್ಬದ ದಿನವಾರ ಸೋಮವಾರ ಸರಳವಾಗಿ ನೆರವೇರಿತು.
ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿ ಹಲವು ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ನೂತನ ಮನೆ ಇದೀಗ ಶುಭಮುಹೂರ್ತದಲ್ಲಿ ಗೃಹಪ್ರವೇಶ ನಡೆಯಿತು.
ಭಾನುವಾರ ರಾತ್ರಿಯಿಂದಲೇ ಮನೆಯಲ್ಲಿ ವಿವಿಧ ಶುಭಕಾರ್ಯಗಳು ಹಾಗೂ ಪೂಜಾ ವಿಧಿವಿಧಾನಗಳು ಆರಂಭವಾದವು. ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಮತ್ತು ಅವರ, ಕುಟುಂಬಸ್ಥರು ಮಾತ್ರ ಭಾಗಿಯಾಗಿದ್ದರು. ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನಡೆದವು.

