ಜಮ್ಮು-ಕಾಶ್ಮೀರದಲ್ಲಿ ಧಾರಾಕಾರ ಮಳೆ : 12 ಮಂದಿ *ತ

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದಲ್ಲಿ ಸೋಮವಾರ ಸುರಿದ ಧಾರಕಾರ ಮಳೆಗೆ 12 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಕಳೆದ ಎರಡು ದಿನಗಳಲ್ಲಿ ಹಠಾತ್ ಪ್ರವಾಹ ಮತ್ತು ಇತರ ಹವಾಮಾನ ಸಂಬಂಧಿತ ಘಟನೆಗಳಲ್ಲಿ ಮೃತಪಟ್ಟವರ ಸಂಖ್ಯೆ 22ಕ್ಕೇರಿದೆ.
ಎಂಟು ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಜಮ್ಮು ವಿಭಾಗದ ಗಡಿ ಜಿಲ್ಲೆಯಾದ ಪೂಂಚ್‌ನ ಲೋರಾನ್-ಡುಮಿಲಾನ್ ಪ್ರದೇಶದಲ್ಲಿ, ಸೋಮವಾರ ಸುರಿದ ಭಾರಿ ಮಳೆಯಿಂದಾಗಿ ಉಂಟಾದ ಭೂಕುಸಿತ ಮತ್ತು ಮಣ್ಣಿನ ಕುಸಿತವು ಒಂದು ಕಚ್ಚಾ ಮನೆಗೆ ಅಪ್ಪಳಿಸಿತು. ಈ ಮನೆಯು ಮಣ್ಣಿನಡಿ ಸಂಪೂರ್ಣವಾಗಿ ಹೂತುಹೋಯಿತು. ಅಪಘಾತ ಸಂಭವಿಸಿದಾಗ ಮನೆಯಲ್ಲಿ ಒಂದೇ ಕುಟುಂಬದ ಏಳು ಮಂದಿ ಇದ್ದರು.

ಸ್ಥಳೀಯರು ಮತ್ತು ನಾಗರಿಕ ಆಡಳಿತ ತಕ್ಷಣವೇ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡರಾದರೂ, ದುರದೃಷ್ಟವಶಾತ್ ಅವರೆಲ್ಲರೂ ಮೃತಪಟ್ಟರು. ಅವರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಮೃತಪಟ್ಟವರಲ್ಲಿ ಮೂವರು ಮಹಿಳೆಯರು, ಎರಡು ವರ್ಷದ ಬಾಲಕಿ, ಇಬ್ಬರು ಪುರುಷರು ಮತ್ತು ನಾಲ್ಕು ವರ್ಷದ ಬಾಲಕ ಸೇರಿದ್ದಾರೆ.

ಇದೇ ವೇಳೆ, ಸೋಮವಾರ ಬೆಳಿಗ್ಗೆ ಪರ್ವತಮಯವಾದ ದೋಡಾ ಜಿಲ್ಲೆಯ ಜಮ್ಮು-ಕಿಶ್ತ್‌ವಾರ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ರಾಗಿ ನಲ್ಲಾ   ಬಳಿ ಭಾರಿ ಮಳೆಯಿಂದಾಗಿ ಬೆಟ್ಟದಿಂದ ಕಲ್ಲುಗಳು ಉರುಳಿ ಬಿದ್ದವು (ಶೂಟಿಂಗ್ ಸ್ಟೋನ್ಸ್). ಆ ಸಮಯದಲ್ಲಿ ಆ ಪ್ರದೇಶದಲ್ಲಿ ಪ್ರಯಾಣಿಕರ ಬಸ್ ಮತ್ತು ಇತರ ಎರಡು ವಾಹನಗಳು ಸಂಚರಿಸುತ್ತಿದ್ದವು.

ಪ್ರಯಾಣಿಕರ ಬಸ್ ನೇರವಾಗಿ ಉರುಳಿ ಬಿದ್ದ ಕಲ್ಲುಗಳ ಹೊಡೆತಕ್ಕೆ ಸಿಲುಕಿತು, ಆದರೆ ಇತರ ಎರಡು ವಾಹನಗಳಿಗೆ ಭಾಗಶಃ ಹಾನಿಯಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇತರ ವಾಹನಗಳಲ್ಲಿದ್ದವರು ಯಾವುದೇ ಗಾಯಗಳಿಲ್ಲದೆ ಪಾರಾದರು, ಆದರೆ ಬಸ್‌ನಲ್ಲಿದ್ದ ಎಂಟು ಮಂದಿ ಗಾಯಗೊಂಡರು ಮತ್ತು ಅವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಆಸ್ಪತ್ರೆಯ ಅಧಿಕಾರಿಗಳು ಇಬ್ಬರು ಮೃತಪಟ್ಟಿದ್ದಾರೆ (ಆಸ್ಪತ್ರೆಗೆ ತಲುಪುವಷ್ಟರಲ್ಲಿಯೇ ಮೃತಪಟ್ಟಿದ್ದರು) ಎಂದು ಘೋಷಿಸಿದರು. ಗಾಯಗೊಂಡವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ.

ಮತ್ತೊಂದು ಘಟನೆಯಲ್ಲಿ, ದೋಡಾ ಜಿಲ್ಲೆಯ ಕಾಷ್ಟಿಗಢ ಪ್ರದೇಶದಲ್ಲಿ ಶಿವ ದೇವಿ ಎಂಬ 85 ವರ್ಷದ ಮಹಿಳೆಯೊಬ್ಬರು ತಮ್ಮ ಮನೆ ಮಣ್ಣಿನ ಕುಸಿತಕ್ಕೆ ಸಿಲುಕಿದ ಪರಿಣಾಮ ಮೃತಪಟ್ಟರು. ರಾಜೌರಿ ಜಿಲ್ಲೆಯಲ್ಲಿ, ವಿಕಾಸ್ ಅಹ್ಮದ್ ಎಂಬ ವ್ಯಕ್ತಿಯೊಬ್ಬರು ಬೆಳಗಿನ ಜಾವ ಪ್ರವಾಹದ ನೀರಿನಲ್ಲಿ ಕೊಚ್ಚಿಹೋದರು. ಮೆಂಧಾರ್‌ನ ತೊರೆಯೊಂದರಿಂದ ಮತ್ತೊಂದು ಮೃತದೇಹವನ್ನು ಹೊರತೆಗೆಯಲಾಗಿದೆ.

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದಲ್ಲಿ ಸೋಮವಾರ ಸುರಿದ ಧಾರಕಾರ ಮಳೆಗೆ 12 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಕಳೆದ ಎರಡು ದಿನಗಳಲ್ಲಿ ಹಠಾತ್ ಪ್ರವಾಹ ಮತ್ತು ಇತರ ಹವಾಮಾನ ಸಂಬಂಧಿತ ಘಟನೆಗಳಲ್ಲಿ ಮೃತಪಟ್ಟವರ ಸಂಖ್ಯೆ 22ಕ್ಕೇರಿದೆ.
ಎಂಟು ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಜಮ್ಮು ವಿಭಾಗದ ಗಡಿ ಜಿಲ್ಲೆಯಾದ ಪೂಂಚ್‌ನ ಲೋರಾನ್-ಡುಮಿಲಾನ್ ಪ್ರದೇಶದಲ್ಲಿ, ಸೋಮವಾರ ಸುರಿದ ಭಾರಿ ಮಳೆಯಿಂದಾಗಿ ಉಂಟಾದ ಭೂಕುಸಿತ ಮತ್ತು ಮಣ್ಣಿನ ಕುಸಿತವು ಒಂದು ಕಚ್ಚಾ ಮನೆಗೆ ಅಪ್ಪಳಿಸಿತು. ಈ ಮನೆಯು ಮಣ್ಣಿನಡಿ ಸಂಪೂರ್ಣವಾಗಿ ಹೂತುಹೋಯಿತು. ಅಪಘಾತ ಸಂಭವಿಸಿದಾಗ ಮನೆಯಲ್ಲಿ ಒಂದೇ ಕುಟುಂಬದ ಏಳು ಮಂದಿ ಇದ್ದರು.

ಸ್ಥಳೀಯರು ಮತ್ತು ನಾಗರಿಕ ಆಡಳಿತ ತಕ್ಷಣವೇ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡರಾದರೂ, ದುರದೃಷ್ಟವಶಾತ್ ಅವರೆಲ್ಲರೂ ಮೃತಪಟ್ಟರು. ಅವರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಮೃತಪಟ್ಟವರಲ್ಲಿ ಮೂವರು ಮಹಿಳೆಯರು, ಎರಡು ವರ್ಷದ ಬಾಲಕಿ, ಇಬ್ಬರು ಪುರುಷರು ಮತ್ತು ನಾಲ್ಕು ವರ್ಷದ ಬಾಲಕ ಸೇರಿದ್ದಾರೆ.

ಇದೇ ವೇಳೆ, ಸೋಮವಾರ ಬೆಳಿಗ್ಗೆ ಪರ್ವತಮಯವಾದ ದೋಡಾ ಜಿಲ್ಲೆಯ ಜಮ್ಮು-ಕಿಶ್ತ್‌ವಾರ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ರಾಗಿ ನಲ್ಲಾ   ಬಳಿ ಭಾರಿ ಮಳೆಯಿಂದಾಗಿ ಬೆಟ್ಟದಿಂದ ಕಲ್ಲುಗಳು ಉರುಳಿ ಬಿದ್ದವು (ಶೂಟಿಂಗ್ ಸ್ಟೋನ್ಸ್). ಆ ಸಮಯದಲ್ಲಿ ಆ ಪ್ರದೇಶದಲ್ಲಿ ಪ್ರಯಾಣಿಕರ ಬಸ್ ಮತ್ತು ಇತರ ಎರಡು ವಾಹನಗಳು ಸಂಚರಿಸುತ್ತಿದ್ದವು.

ಪ್ರಯಾಣಿಕರ ಬಸ್ ನೇರವಾಗಿ ಉರುಳಿ ಬಿದ್ದ ಕಲ್ಲುಗಳ ಹೊಡೆತಕ್ಕೆ ಸಿಲುಕಿತು, ಆದರೆ ಇತರ ಎರಡು ವಾಹನಗಳಿಗೆ ಭಾಗಶಃ ಹಾನಿಯಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇತರ ವಾಹನಗಳಲ್ಲಿದ್ದವರು ಯಾವುದೇ ಗಾಯಗಳಿಲ್ಲದೆ ಪಾರಾದರು, ಆದರೆ ಬಸ್‌ನಲ್ಲಿದ್ದ ಎಂಟು ಮಂದಿ ಗಾಯಗೊಂಡರು ಮತ್ತು ಅವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಆಸ್ಪತ್ರೆಯ ಅಧಿಕಾರಿಗಳು ಇಬ್ಬರು ಮೃತಪಟ್ಟಿದ್ದಾರೆ (ಆಸ್ಪತ್ರೆಗೆ ತಲುಪುವಷ್ಟರಲ್ಲಿಯೇ ಮೃತಪಟ್ಟಿದ್ದರು) ಎಂದು ಘೋಷಿಸಿದರು. ಗಾಯಗೊಂಡವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ.

ಮತ್ತೊಂದು ಘಟನೆಯಲ್ಲಿ, ದೋಡಾ ಜಿಲ್ಲೆಯ ಕಾಷ್ಟಿಗಢ ಪ್ರದೇಶದಲ್ಲಿ ಶಿವ ದೇವಿ ಎಂಬ 85 ವರ್ಷದ ಮಹಿಳೆಯೊಬ್ಬರು ತಮ್ಮ ಮನೆ ಮಣ್ಣಿನ ಕುಸಿತಕ್ಕೆ ಸಿಲುಕಿದ ಪರಿಣಾಮ ಮೃತಪಟ್ಟರು. ರಾಜೌರಿ ಜಿಲ್ಲೆಯಲ್ಲಿ, ವಿಕಾಸ್ ಅಹ್ಮದ್ ಎಂಬ ವ್ಯಕ್ತಿಯೊಬ್ಬರು ಬೆಳಗಿನ ಜಾವ ಪ್ರವಾಹದ ನೀರಿನಲ್ಲಿ ಕೊಚ್ಚಿಹೋದರು. ಮೆಂಧಾರ್‌ನ ತೊರೆಯೊಂದರಿಂದ ಮತ್ತೊಂದು ಮೃತದೇಹವನ್ನು ಹೊರತೆಗೆಯಲಾಗಿದೆ.

More articles

Latest article

Most read