ಕೆಪಿಸಿಸಿ ಕಾರ್ಯಕ್ರಮದಿಂದ ನೀಟ್‌ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ ಎಂಬ ಆರೋಪ ನಿರಾಕರಿಸಿದ ಪ್ರಿಯಾಂಕ್‌ ಖರ್ಗೆ

ಬೆಂಗಳೂರು :  ಬಿಜೆಪಿಯವರು ರಾಮನ ಹೆಸರಲ್ಲೇ ಲೂಟಿ ಮಾಡುತ್ತಾರೆ. ಇನ್ನೂ ಧರ್ಮಸ್ಥಳದಲ್ಲಿ ಸತ್ಯ ಹೇಳುತ್ತಾರಾ ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ವ್ಯಂಗ್ಯವಾಡಿದ್ದಾರೆ. 

ಬೆಂಗಳೂರಿನಲ್ಲಿ ಮಾತನಾಡಿದ ಅವರು,  ನಮ್ಮ ಒಗ್ಗಟ್ಟನನ್ನು ನೋಡಿ ಬಿಜೆಪಿಯ   7 ಜನ ವೋಟ್‌ ಹಾಕಿದ್ದಾರೆ. ಬಿಜೆಪಿಯವರು ತಮ್ಮ ಪಕ್ಷವನ್ನು ನೋಡಿಕೊಳ್ಳಲಿ. ಬಿಜೆಪಿಯಲ್ಲಿ ಶಿಸ್ತೇ ಇಲ್ಲ. ಹೀಗಾಗಿ, ಅಡ್ಡ ಮತದಾನ ಮಾಡಿದ್ದಾರೆ. ಬಿಜೆಪಿ- ಜೆಡಿಎಸ್‌ನಲ್ಲಿ ಒಗ್ಗಟ್ಟಿಲ್ಲ. ಅವರ ಮನೆ ನೂರು ಬಾಗಿಲು ಆಗಿದೆ ಎಂದು ಬಿಜೆಪಿಯ ಆಣೆ ಪ್ರಮಾಣಕ್ಕೆ ಹೇಳಿಕೆ ನೀಡಿದ್ದಾರೆ. 

ಹಾಗೆಯೇ,  ಕೆಪಿಸಿಸಿ ಅಧ್ಯಕ್ಷರಾಗಿ ಬಿ.ಕೆ.ಹರಿಪ್ರಸಾದ್‌ ಅಧಿಕಾರ ಸ್ವೀಕಾರ ಸಮಾರಂಭದಿಂದ ನೀಟ್‌ ಪರೀಕ್ಷಾ ಕೇಂದ್ರಕ್ಕೆ ತಲುಪಲು ತಡವಾಯಿತು ಎಂಬ ಬಿಜೆಪಿ ಆರೋಪಕ್ಕೆ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ತಿರುಗೇಟು ನೀಡಿದ್ದಾರೆ.

ಮೂರು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿಲ್ಲ. ಮೂರು ಜನರಿಗೂ ವಿವಿಧ ಕಾರಣಗಳಿತ್ತು. ಒಬ್ಬರು ಮಾಗಡಿಯಿಂದ ಬಂದಿದ್ದು, ಮತ್ತೊಬ್ಬರು ಹಳೆಯ ಹಾಲ್‌ಟಿಕೆಟ್‌ ತಂದಿದ್ದರು, ಮತ್ತೊಬ್ಬರೂ ಆರ್‌ಟಿ ನಗರದಿಂದ ಬಂದಿದ್ದಾರೆ. 

ವಿದ್ಯಾರ್ಥಿಗಳು ನೀಟ್‌ ನಿಯಮಗಳನ್ನು ಪಾಲಿಸಿಲ್ಲ. ಬಿಜೆಪಿಯವರು  ರಾಜಕೀಯ ಮಾಡಲು ಲಾಜಿಕಲ್‌ ಬಳಸಲಿ.  ದೆಹಲಿ , ಮುಂಬೈನಲ್ಲೂ ನಾಲ್ಕು ಜನ ಪರೀಕ್ಷೆ ಬರೆಯಲು ಆಗಿಲ್ಲ. ಇದಕ್ಕೆಲ್ಲ ಅಲ್ಲಿನ ಸರ್ಕಾರ ಕಾರಣನಾ? . ಬಿಜೆಪಿಯವರ  ಖಾಲಿ ಟ್ರಂಕ್‌ಗಳ ಜೊತೆ ಮಾಡತನಾಡಲ್ಲ. ವಿದ್ಯಾರ್ಥಿಗಳ ಪರವಾಗಿದ್ದರೆ ಕ್ಷಮೆ ಕೇಳಲಿ ಎಂದು ಪ್ರಿಯಾಂಕ್‌ ಖರ್ಗೆ ಆಗ್ರಹಿಸಿದ್ದಾರೆ.

ಬೆಂಗಳೂರು :  ಬಿಜೆಪಿಯವರು ರಾಮನ ಹೆಸರಲ್ಲೇ ಲೂಟಿ ಮಾಡುತ್ತಾರೆ. ಇನ್ನೂ ಧರ್ಮಸ್ಥಳದಲ್ಲಿ ಸತ್ಯ ಹೇಳುತ್ತಾರಾ ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ವ್ಯಂಗ್ಯವಾಡಿದ್ದಾರೆ. 

ಬೆಂಗಳೂರಿನಲ್ಲಿ ಮಾತನಾಡಿದ ಅವರು,  ನಮ್ಮ ಒಗ್ಗಟ್ಟನನ್ನು ನೋಡಿ ಬಿಜೆಪಿಯ   7 ಜನ ವೋಟ್‌ ಹಾಕಿದ್ದಾರೆ. ಬಿಜೆಪಿಯವರು ತಮ್ಮ ಪಕ್ಷವನ್ನು ನೋಡಿಕೊಳ್ಳಲಿ. ಬಿಜೆಪಿಯಲ್ಲಿ ಶಿಸ್ತೇ ಇಲ್ಲ. ಹೀಗಾಗಿ, ಅಡ್ಡ ಮತದಾನ ಮಾಡಿದ್ದಾರೆ. ಬಿಜೆಪಿ- ಜೆಡಿಎಸ್‌ನಲ್ಲಿ ಒಗ್ಗಟ್ಟಿಲ್ಲ. ಅವರ ಮನೆ ನೂರು ಬಾಗಿಲು ಆಗಿದೆ ಎಂದು ಬಿಜೆಪಿಯ ಆಣೆ ಪ್ರಮಾಣಕ್ಕೆ ಹೇಳಿಕೆ ನೀಡಿದ್ದಾರೆ. 

ಹಾಗೆಯೇ,  ಕೆಪಿಸಿಸಿ ಅಧ್ಯಕ್ಷರಾಗಿ ಬಿ.ಕೆ.ಹರಿಪ್ರಸಾದ್‌ ಅಧಿಕಾರ ಸ್ವೀಕಾರ ಸಮಾರಂಭದಿಂದ ನೀಟ್‌ ಪರೀಕ್ಷಾ ಕೇಂದ್ರಕ್ಕೆ ತಲುಪಲು ತಡವಾಯಿತು ಎಂಬ ಬಿಜೆಪಿ ಆರೋಪಕ್ಕೆ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ತಿರುಗೇಟು ನೀಡಿದ್ದಾರೆ.

ಮೂರು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿಲ್ಲ. ಮೂರು ಜನರಿಗೂ ವಿವಿಧ ಕಾರಣಗಳಿತ್ತು. ಒಬ್ಬರು ಮಾಗಡಿಯಿಂದ ಬಂದಿದ್ದು, ಮತ್ತೊಬ್ಬರು ಹಳೆಯ ಹಾಲ್‌ಟಿಕೆಟ್‌ ತಂದಿದ್ದರು, ಮತ್ತೊಬ್ಬರೂ ಆರ್‌ಟಿ ನಗರದಿಂದ ಬಂದಿದ್ದಾರೆ. 

ವಿದ್ಯಾರ್ಥಿಗಳು ನೀಟ್‌ ನಿಯಮಗಳನ್ನು ಪಾಲಿಸಿಲ್ಲ. ಬಿಜೆಪಿಯವರು  ರಾಜಕೀಯ ಮಾಡಲು ಲಾಜಿಕಲ್‌ ಬಳಸಲಿ.  ದೆಹಲಿ , ಮುಂಬೈನಲ್ಲೂ ನಾಲ್ಕು ಜನ ಪರೀಕ್ಷೆ ಬರೆಯಲು ಆಗಿಲ್ಲ. ಇದಕ್ಕೆಲ್ಲ ಅಲ್ಲಿನ ಸರ್ಕಾರ ಕಾರಣನಾ? . ಬಿಜೆಪಿಯವರ  ಖಾಲಿ ಟ್ರಂಕ್‌ಗಳ ಜೊತೆ ಮಾಡತನಾಡಲ್ಲ. ವಿದ್ಯಾರ್ಥಿಗಳ ಪರವಾಗಿದ್ದರೆ ಕ್ಷಮೆ ಕೇಳಲಿ ಎಂದು ಪ್ರಿಯಾಂಕ್‌ ಖರ್ಗೆ ಆಗ್ರಹಿಸಿದ್ದಾರೆ.

More articles

Latest article

Most read