ಹಿಂದಿ ಪರ ನಿಂತ ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ತೀವ್ರ ಜನಾಕ್ರೋಶ

ಬೆಂಗಳೂರು : ಹಿಂದಿ ಭಾಷೆಯನ್ನು ಪರೀಕ್ಷೆಯಿಂದ ಕೈಬಿಟ್ಟಿರುವುದನ್ನು ಖಂಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿವೆ.
ರಾಜ್ಯ ಮಾತ್ರವಲ್ಲ ಜಗತ್ತಿನ ಮೂಲೆ ಮೂಲೆಯಲ್ಲಿರುವ ಕನ್ನಡಿಗರು ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆಯನ್ನು ಕಠಿಣ ಶಬ್ಧಗಳಿಂದ ಖಂಡಿಸುತ್ತಿದ್ದಾರೆ.

ಕನ್ನಡಿಗರ ಆಕ್ರೋಶ ಹೀಗಿದೆ…

@Amara_Bengaluruನಿಮ್ಮ ಪಕ್ಷವೇ ಅಧಿಕಾರದಲ್ಲಿರುವ ರಾಜಸ್ಥಾನ, ಉತ್ತರಪ್ರದೇಶ, ಬಿಹಾರ, ರಾಜಾಸ್ಥಾನದಲ್ಲಿ ಮೂರನೇ ಭಾಷೆಯಾಗಿ ಕನ್ನಡ ಸೇರಿಸಿ ಅದನ್ನು 100 ಅಂಕಗಳ ಪರೀಕ್ಷೆಯಾಗಿ ಮಾಡಿಸಿ.ಆಮೇಲೆ ನಮ್ಮಲ್ಲಿಯೂ ಹಿಂದಿ ಪರಿಗಣಿಸೋಣ. ಹಿಂದಿ ಭಾಗಗಳ ಜನರು ಕನ್ನಡನಾಡಿಗೆ ವಲಸೆ ಬರುವುದು. ಅವರಿಗೆ ಕನ್ನಡ ಮುಖ್ಯ. ಹಿಂದಿ ಊರುಗಳಿಗೆ ವಲಸೆ ಹೋಗುವ ಅನಿವಾರ್ಯತೆ ನಮಗಿಲ್ಲ.
ಅಮರನಾಥ್‌ ಶಿವಶಂಕರ್

@Yadu06 “ಕೇಂದ್ರ ಸರಕಾರದ ಉದ್ಯೋಗಗಳಿಗೆ ಸೇರ್ಪಡೆಗೊಳ್ಳುವ ಕರ್ನಾಟಕದ ಯುವಸಮೂಹವು ರಾಷ್ಟ್ರಮಟ್ಟದಲ್ಲಿ ಹಿಂದೆ ಬೀಳಬಾರದು ಎಂಬ ಕಾಳಜಿ ನಮ್ಮದು.”?? ಅಷ್ಟು ಕಾಳಜಿ ಇದ್ದರೆ ಕೇಂದ್ರ ಸರಕಾರದ ಪರೀಕ್ಷೆಗಳಲ್ಲಿ ಕನ್ನಡದಲ್ಲಿಯೂ ಇರುವಂತೆ ಮಾಡಿ. ಉತ್ತರನ ಪೌರುಷ ಒಲೆ ಮುಂದೆ ಅನ್ನೋ ಥರ ಇಲ್ಲಿ ಬಂದು ಬೌ ಅನ್ನೋದಲ್ಲ. ಎಂತಾ ತಂದೆಗೆ ಎಂಥಾ ಮಗ.‌
ಯದು

ಮುಂದಿನ ಚುನಾವಣೆಯಲ್ಲೂ ವಿರೋಧ ಪಕ್ಷದಲ್ಲಿ ಕೋರುವ ಆಸೆ ನಾ ನಿಮಗೆ?? ಕರ್ನಾಟಕದಲ್ಲಿ ಕನ್ನಡ ವಿರೋಧ ಮಾಡುವುದು ಮುಠ್ಠಾಳತನ.
ಅಮೋಘ್‌ ಮಣ್ಣಿಕೇರಿ

@ShivashankarKoನಿಮ್ಮ ರಾಜಕೀಯ ಲಾಭಕ್ಕೆ ಕನ್ನಡ ಮಕ್ಕಳ ಮೇಲೆ ಹಿಂದಿ ಹೇರಿ ಅವರ ಜೀವನ ಹಾಳು ಮಾಡಲು ನಿಮಗೆ ನಾಚಿಕೆ ಆಗುವುದಿಲ್ಲವೇ, ಥು ನಿಮ್ಮ ಜನ್ಮಕ್ಕೆ. ಕಳೆದ ವರ್ಷ ಹಿಂದಿ ಯಲ್ಲಿ 145000 ಮಕ್ಕಳು ಹಿಂದಿ ಯಲ್ಲಿ ಫೇಲ್ ಆಗಿ ಅವರ ಜೀವನ ಹಾಳಾಗಿದೆ @BYVijayendra, @BJP4Karnataka ಹಿಂದಿ ಹೇರಿಕೆ ಮಾಡಿ ಇನ್ನು ಎಷ್ಟು ಮಕ್ಕಳ ಜೀವನ ಹಾಳು ಮಾಡುತ್ತೀರಿ?
ಶಿವಶಂಕರ ಕನ್ನಡಿಗ

@naveenkumarmhನಿಮಗೆ ಒಂದೇ ಒಂದು ಪ್ರಶ್ನೆ. ಉತ್ತರದ ರಾಜ್ಯಗಳು 3 ಭಾಷೆ ಸೂತ್ರ ಪಾಲಿಸುತ್ತಿದ್ದಾರ? ಅವರು ಮಾಡದಿದ್ದಾಗ ನಾವು ಯಾಕೆ ಮಾಡಬೇಕು? ಕನ್ನಡವನ್ನು ಅವರು ಕಲಿಸ್ತಾರಾ? ಅವರಿಗೇಕೆ ಈ ಆತಿಥ್ಯ? ವಿರೋಧಿಸಲು ನೂರಾರು ವಿಷಯಗಳಿವೆ. ನೀವು ಇದನ್ನ ಬೆಂಬಲಿಸಿದ್ದರೆ ನಿಮ್ಮ ಬೆಲೆನೆ ಬೇರೆ ಇರ್ತಿತ್ತು! #twolanguagepolicy ಬೇಕು ಅನ್ಬೇಕಿತ್ತು ನೀವು.
ನವೀನ ಕುಮಾರ

@AllAnalyyssttನೀವು ಮೋದಿ ಅಮಿತ್ ಶಾ ಮೆಚ್ಚಿಸಲು ಕನ್ನಡಿಗರನ್ನು ಬಲಿ ಕೊಡಬೇಡಿ. ನಿಮ್ಮ ತಂದೆ ದೆಹಲಿ ಅಯೋಗ್ಯರನ್ನು ಮೆಚ್ಚಿಸಲು ಮಾಡಿದ ತಪ್ಪಿನಿಂದ ಇಂದು ಲಕ್ಷಾಂತರ ಎಕರೆ ಭೂಮಿ ಕನ್ನಡಿಗರ ಕೈ ತಪ್ಪಿ ಪರರ ಪಾಲಾಗುತ್ತಿದೆ. ಯಾವ ತಜ್ಞರನ್ನು ಕೇಳುವ ಅವಶ್ಯಕತೆ ಇಲ್ಲಾ ಸ್ವಾಮಿ. ಕನ್ನಡ ಕರ್ನಾಟಕ ಕನ್ನಡಿಗರಿಗೆ ಮಾರಕ ಈ ರಾಷ್ಟ್ರೀಯ ಪಕ್ಷದ ರಾಜಕಾರಣಿಗಳಿಂದ
– ಅಲ್‌ರೌಂಡರ್‌ ಅನಲಿಸ್ಟ್‌

ಕನ್ನಡಿಗರ ಹಿತಾಸಕ್ತಿಗೆ ವಿರುದ್ಧವಾದ ಹೇಳಿಕೆ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ — ನಮ್ಮ ಮಕ್ಕಳಿಗೆ ಮೊದಲ ಆದ್ಯತೆ ಕನ್ನಡ ಮತ್ತು ಇಂಗ್ಲಿಷ್. ಹಿಂದಿ ಕಡ್ಡಾಯಗೊಳಿಸಿ ಅನ್ಯಾಯವಾದ ಸ್ಪರ್ಧೆಗೆ ತಳ್ಳುವುದು ಸರಿಯಲ್ಲ. ರಾಜಕೀಯಕ್ಕಾಗಿ ಮಕ್ಕಳ ಭವಿಷ್ಯವನ್ನು ಬಳಸಬೇಡಿ. ತಕ್ಷಣ ನಿಮ್ಮ ನಿಲುವನ್ನು ಪರಿಷ್ಕರಿಸಿ ಕನ್ನಡಿಗರ ಭಾವನೆಗೆ ಗೌರವ ನೀಡಿ.
-‌ ಖಾದರ್‌ ಬೇಲೂರ್

@girishbtಕೇಂದ್ರ ಸರಕಾರದ ಕೆಲಸಕ್ಕೆ ಸೇರಲು ಹಿಂದಿ ಯಾಕೆ ಬೇಕು ಅಂತ ಕೇಳುವುದನ್ನು ಬಿಟ್ಟು ಹಿಂದಿ ಗೊತ್ತಿರಬೇಕು ಅಂತ ಹೇಳುವ ನಿಮ್ಮಂಥವರು ಕರ್ನಾಟಕ ರಾಜ್ಯದಿಂದ ಆರಿಸಿ ಬಂದದ್ದು ಕರ್ನಾಟಕದ ದುರಂತ. ಈಗ ಕರ್ನಾಟಕದ ಜನ ತಮ್ಮ ಹಳೆಯ ಜನ್ಮಗಳಲ್ಲಿ ಅದ್ಯಾವ ಪಾಪ ಮಾಡಿದ್ದರೋ ಗೊತ್ತಿಲ್ಲ. ಕರ್ನಾಟಕದ ಈಗಿನ ಜನಾಂಗ ನಿಮ್ಮಂತ ಜನರ ಮೂರ್ಖ ವಾದವನ್ನ ಕೇಳಿಕೊಂಡು ಕುಳಿತುಕೊಳ್ಳಲ್ಲ. ಸಾಕಷ್ಟು ಜಾಗ್ರತರಾಗಿದ್ದಾರೆ. ನಿಮಗಿದು ಗೊತ್ತಿರಲಿ. #StopHindiImposition.

@hk81ವಿಜಯೇಂದ್ರ ಅವರೇ, ಇಂದು ಉದ್ಯೋಗಕ್ಕಾಗಿ ಉತ್ತರ ಭಾರತದವರು ಕರ್ನಾಟಕ್ಕೆ ಬರ್ತಾ ಇರೋದೇ ವಿನಃ ಇಲ್ಲಿಂದ ಹೋಗೋರು ಕಡಿಮೆ. ಹಾಗೆ ಹೋಗೋ ಮೂರು ಮತ್ತೊಂದು ಜನಕ್ಕಾಗಿ ರಾಜ್ಯದ ಲಕ್ಷಾಂತರ ಮಕ್ಕಳು ಹಿಂದಿ ಕಲಿಯಬೇಕಿಲ್ಲ. ಅಲ್ಲಿಂದ ಬರೋರು ಕನ್ನಡ ಕಲಿತು ಬರ್ತಾರಾ? ದೆಹಲಿಯಲ್ಲಿ 5 ವಿಷಯ 500 ಅಂಕಗಳು ಇರುವಾಗ ಇಲ್ಲಿ ಕೂಡಾ 525 ಅಂಕಗಳಿರುವುದು ಸರಿ.
– ಹರ್ಷಕುಮಾರ್‌ ಕುಗ್ವೆ

@MaheshSRmedalaಬಸವಣ್ಣನ ಹೆಸರು ಹೇಳ್ಕೊಂಡ್ ಕನ್ನಡಿಗರಿಗೆ ಚೂರಿ ಹಾಕೋಕೆ ಇದ್ದೀರ ನೀವ್ಗಳು. ತ್ರಿಭಾಷಾ ಸೂತ್ರ ತಂದು ದರಿದ್ರ ಕಾಂಗ್ರೆಸ್ ಈಗ ಸ್ವಲ್ಪ ಬದಲಾಗಿದ್ದಾರೆ, ಕನ್ನಡಿಗನಾಗಿ ಖುಷಿ ಪಡ್ರಿ ನೀವು. ಹುಚ್ಚರ ಸಂತೇಲಿ ಉಂಡೋನೆ ಜಾಣ ಅಂತ ಬಕೇಟ್ ರಾಜಕೀಯ ಬಿಟ್ಬಿಡಿ.

@iAdarshAdiಅನ್ಯ ರಾಜ್ಯಕ್ಕೆ ಹೋಗಿ ಕೆಲಸ ಮಾಡಲು ಹಿಂದಿಯೇ ಏಕೆ ಬೇಕು? ತಮಿಳುನಾಡಿನಲ್ಲಿ ತಮಿಳು, ಅದೇ ರೀತಿ ಆಂಧ್ರ, ತೆಲಂಗಾಣದಲ್ಲಿ ತೆಲುಗು. ತಮಿಳರು ಹಿಂದಿ ಕಲಿಯದೇ ಅನ್ಯ ರಾಜ್ಯಗಳಲ್ಲಿ ಕೆಲಸ ಮಾಡುತ್ತಿಲ್ಲವೇ?ರಾಷ್ಟ್ರೀಯ ದೃಷ್ಟಿಕೋನಕ್ಕೆ ಹಿಂದಿ ಎನ್ನುವ ವ್ಯಾಮೋಹದಿಂದಲೇ ಕರ್ನಾಟಕದಲ್ಲಿ ಕನ್ನಡದಲ್ಲಿ ಸೇವೆ ನೀಡಿ ಎಂದು ಕೇಳುವ ಪರಿಸ್ಥಿತಿ ಬಂದಿರುವುದು

ಬೆಂಗಳೂರು : ಹಿಂದಿ ಭಾಷೆಯನ್ನು ಪರೀಕ್ಷೆಯಿಂದ ಕೈಬಿಟ್ಟಿರುವುದನ್ನು ಖಂಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿವೆ.
ರಾಜ್ಯ ಮಾತ್ರವಲ್ಲ ಜಗತ್ತಿನ ಮೂಲೆ ಮೂಲೆಯಲ್ಲಿರುವ ಕನ್ನಡಿಗರು ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆಯನ್ನು ಕಠಿಣ ಶಬ್ಧಗಳಿಂದ ಖಂಡಿಸುತ್ತಿದ್ದಾರೆ.

ಕನ್ನಡಿಗರ ಆಕ್ರೋಶ ಹೀಗಿದೆ…

@Amara_Bengaluruನಿಮ್ಮ ಪಕ್ಷವೇ ಅಧಿಕಾರದಲ್ಲಿರುವ ರಾಜಸ್ಥಾನ, ಉತ್ತರಪ್ರದೇಶ, ಬಿಹಾರ, ರಾಜಾಸ್ಥಾನದಲ್ಲಿ ಮೂರನೇ ಭಾಷೆಯಾಗಿ ಕನ್ನಡ ಸೇರಿಸಿ ಅದನ್ನು 100 ಅಂಕಗಳ ಪರೀಕ್ಷೆಯಾಗಿ ಮಾಡಿಸಿ.ಆಮೇಲೆ ನಮ್ಮಲ್ಲಿಯೂ ಹಿಂದಿ ಪರಿಗಣಿಸೋಣ. ಹಿಂದಿ ಭಾಗಗಳ ಜನರು ಕನ್ನಡನಾಡಿಗೆ ವಲಸೆ ಬರುವುದು. ಅವರಿಗೆ ಕನ್ನಡ ಮುಖ್ಯ. ಹಿಂದಿ ಊರುಗಳಿಗೆ ವಲಸೆ ಹೋಗುವ ಅನಿವಾರ್ಯತೆ ನಮಗಿಲ್ಲ.
ಅಮರನಾಥ್‌ ಶಿವಶಂಕರ್

@Yadu06 “ಕೇಂದ್ರ ಸರಕಾರದ ಉದ್ಯೋಗಗಳಿಗೆ ಸೇರ್ಪಡೆಗೊಳ್ಳುವ ಕರ್ನಾಟಕದ ಯುವಸಮೂಹವು ರಾಷ್ಟ್ರಮಟ್ಟದಲ್ಲಿ ಹಿಂದೆ ಬೀಳಬಾರದು ಎಂಬ ಕಾಳಜಿ ನಮ್ಮದು.”?? ಅಷ್ಟು ಕಾಳಜಿ ಇದ್ದರೆ ಕೇಂದ್ರ ಸರಕಾರದ ಪರೀಕ್ಷೆಗಳಲ್ಲಿ ಕನ್ನಡದಲ್ಲಿಯೂ ಇರುವಂತೆ ಮಾಡಿ. ಉತ್ತರನ ಪೌರುಷ ಒಲೆ ಮುಂದೆ ಅನ್ನೋ ಥರ ಇಲ್ಲಿ ಬಂದು ಬೌ ಅನ್ನೋದಲ್ಲ. ಎಂತಾ ತಂದೆಗೆ ಎಂಥಾ ಮಗ.‌
ಯದು

ಮುಂದಿನ ಚುನಾವಣೆಯಲ್ಲೂ ವಿರೋಧ ಪಕ್ಷದಲ್ಲಿ ಕೋರುವ ಆಸೆ ನಾ ನಿಮಗೆ?? ಕರ್ನಾಟಕದಲ್ಲಿ ಕನ್ನಡ ವಿರೋಧ ಮಾಡುವುದು ಮುಠ್ಠಾಳತನ.
ಅಮೋಘ್‌ ಮಣ್ಣಿಕೇರಿ

@ShivashankarKoನಿಮ್ಮ ರಾಜಕೀಯ ಲಾಭಕ್ಕೆ ಕನ್ನಡ ಮಕ್ಕಳ ಮೇಲೆ ಹಿಂದಿ ಹೇರಿ ಅವರ ಜೀವನ ಹಾಳು ಮಾಡಲು ನಿಮಗೆ ನಾಚಿಕೆ ಆಗುವುದಿಲ್ಲವೇ, ಥು ನಿಮ್ಮ ಜನ್ಮಕ್ಕೆ. ಕಳೆದ ವರ್ಷ ಹಿಂದಿ ಯಲ್ಲಿ 145000 ಮಕ್ಕಳು ಹಿಂದಿ ಯಲ್ಲಿ ಫೇಲ್ ಆಗಿ ಅವರ ಜೀವನ ಹಾಳಾಗಿದೆ @BYVijayendra, @BJP4Karnataka ಹಿಂದಿ ಹೇರಿಕೆ ಮಾಡಿ ಇನ್ನು ಎಷ್ಟು ಮಕ್ಕಳ ಜೀವನ ಹಾಳು ಮಾಡುತ್ತೀರಿ?
ಶಿವಶಂಕರ ಕನ್ನಡಿಗ

@naveenkumarmhನಿಮಗೆ ಒಂದೇ ಒಂದು ಪ್ರಶ್ನೆ. ಉತ್ತರದ ರಾಜ್ಯಗಳು 3 ಭಾಷೆ ಸೂತ್ರ ಪಾಲಿಸುತ್ತಿದ್ದಾರ? ಅವರು ಮಾಡದಿದ್ದಾಗ ನಾವು ಯಾಕೆ ಮಾಡಬೇಕು? ಕನ್ನಡವನ್ನು ಅವರು ಕಲಿಸ್ತಾರಾ? ಅವರಿಗೇಕೆ ಈ ಆತಿಥ್ಯ? ವಿರೋಧಿಸಲು ನೂರಾರು ವಿಷಯಗಳಿವೆ. ನೀವು ಇದನ್ನ ಬೆಂಬಲಿಸಿದ್ದರೆ ನಿಮ್ಮ ಬೆಲೆನೆ ಬೇರೆ ಇರ್ತಿತ್ತು! #twolanguagepolicy ಬೇಕು ಅನ್ಬೇಕಿತ್ತು ನೀವು.
ನವೀನ ಕುಮಾರ

@AllAnalyyssttನೀವು ಮೋದಿ ಅಮಿತ್ ಶಾ ಮೆಚ್ಚಿಸಲು ಕನ್ನಡಿಗರನ್ನು ಬಲಿ ಕೊಡಬೇಡಿ. ನಿಮ್ಮ ತಂದೆ ದೆಹಲಿ ಅಯೋಗ್ಯರನ್ನು ಮೆಚ್ಚಿಸಲು ಮಾಡಿದ ತಪ್ಪಿನಿಂದ ಇಂದು ಲಕ್ಷಾಂತರ ಎಕರೆ ಭೂಮಿ ಕನ್ನಡಿಗರ ಕೈ ತಪ್ಪಿ ಪರರ ಪಾಲಾಗುತ್ತಿದೆ. ಯಾವ ತಜ್ಞರನ್ನು ಕೇಳುವ ಅವಶ್ಯಕತೆ ಇಲ್ಲಾ ಸ್ವಾಮಿ. ಕನ್ನಡ ಕರ್ನಾಟಕ ಕನ್ನಡಿಗರಿಗೆ ಮಾರಕ ಈ ರಾಷ್ಟ್ರೀಯ ಪಕ್ಷದ ರಾಜಕಾರಣಿಗಳಿಂದ
– ಅಲ್‌ರೌಂಡರ್‌ ಅನಲಿಸ್ಟ್‌

ಕನ್ನಡಿಗರ ಹಿತಾಸಕ್ತಿಗೆ ವಿರುದ್ಧವಾದ ಹೇಳಿಕೆ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ — ನಮ್ಮ ಮಕ್ಕಳಿಗೆ ಮೊದಲ ಆದ್ಯತೆ ಕನ್ನಡ ಮತ್ತು ಇಂಗ್ಲಿಷ್. ಹಿಂದಿ ಕಡ್ಡಾಯಗೊಳಿಸಿ ಅನ್ಯಾಯವಾದ ಸ್ಪರ್ಧೆಗೆ ತಳ್ಳುವುದು ಸರಿಯಲ್ಲ. ರಾಜಕೀಯಕ್ಕಾಗಿ ಮಕ್ಕಳ ಭವಿಷ್ಯವನ್ನು ಬಳಸಬೇಡಿ. ತಕ್ಷಣ ನಿಮ್ಮ ನಿಲುವನ್ನು ಪರಿಷ್ಕರಿಸಿ ಕನ್ನಡಿಗರ ಭಾವನೆಗೆ ಗೌರವ ನೀಡಿ.
-‌ ಖಾದರ್‌ ಬೇಲೂರ್

@girishbtಕೇಂದ್ರ ಸರಕಾರದ ಕೆಲಸಕ್ಕೆ ಸೇರಲು ಹಿಂದಿ ಯಾಕೆ ಬೇಕು ಅಂತ ಕೇಳುವುದನ್ನು ಬಿಟ್ಟು ಹಿಂದಿ ಗೊತ್ತಿರಬೇಕು ಅಂತ ಹೇಳುವ ನಿಮ್ಮಂಥವರು ಕರ್ನಾಟಕ ರಾಜ್ಯದಿಂದ ಆರಿಸಿ ಬಂದದ್ದು ಕರ್ನಾಟಕದ ದುರಂತ. ಈಗ ಕರ್ನಾಟಕದ ಜನ ತಮ್ಮ ಹಳೆಯ ಜನ್ಮಗಳಲ್ಲಿ ಅದ್ಯಾವ ಪಾಪ ಮಾಡಿದ್ದರೋ ಗೊತ್ತಿಲ್ಲ. ಕರ್ನಾಟಕದ ಈಗಿನ ಜನಾಂಗ ನಿಮ್ಮಂತ ಜನರ ಮೂರ್ಖ ವಾದವನ್ನ ಕೇಳಿಕೊಂಡು ಕುಳಿತುಕೊಳ್ಳಲ್ಲ. ಸಾಕಷ್ಟು ಜಾಗ್ರತರಾಗಿದ್ದಾರೆ. ನಿಮಗಿದು ಗೊತ್ತಿರಲಿ. #StopHindiImposition.

@hk81ವಿಜಯೇಂದ್ರ ಅವರೇ, ಇಂದು ಉದ್ಯೋಗಕ್ಕಾಗಿ ಉತ್ತರ ಭಾರತದವರು ಕರ್ನಾಟಕ್ಕೆ ಬರ್ತಾ ಇರೋದೇ ವಿನಃ ಇಲ್ಲಿಂದ ಹೋಗೋರು ಕಡಿಮೆ. ಹಾಗೆ ಹೋಗೋ ಮೂರು ಮತ್ತೊಂದು ಜನಕ್ಕಾಗಿ ರಾಜ್ಯದ ಲಕ್ಷಾಂತರ ಮಕ್ಕಳು ಹಿಂದಿ ಕಲಿಯಬೇಕಿಲ್ಲ. ಅಲ್ಲಿಂದ ಬರೋರು ಕನ್ನಡ ಕಲಿತು ಬರ್ತಾರಾ? ದೆಹಲಿಯಲ್ಲಿ 5 ವಿಷಯ 500 ಅಂಕಗಳು ಇರುವಾಗ ಇಲ್ಲಿ ಕೂಡಾ 525 ಅಂಕಗಳಿರುವುದು ಸರಿ.
– ಹರ್ಷಕುಮಾರ್‌ ಕುಗ್ವೆ

@MaheshSRmedalaಬಸವಣ್ಣನ ಹೆಸರು ಹೇಳ್ಕೊಂಡ್ ಕನ್ನಡಿಗರಿಗೆ ಚೂರಿ ಹಾಕೋಕೆ ಇದ್ದೀರ ನೀವ್ಗಳು. ತ್ರಿಭಾಷಾ ಸೂತ್ರ ತಂದು ದರಿದ್ರ ಕಾಂಗ್ರೆಸ್ ಈಗ ಸ್ವಲ್ಪ ಬದಲಾಗಿದ್ದಾರೆ, ಕನ್ನಡಿಗನಾಗಿ ಖುಷಿ ಪಡ್ರಿ ನೀವು. ಹುಚ್ಚರ ಸಂತೇಲಿ ಉಂಡೋನೆ ಜಾಣ ಅಂತ ಬಕೇಟ್ ರಾಜಕೀಯ ಬಿಟ್ಬಿಡಿ.

@iAdarshAdiಅನ್ಯ ರಾಜ್ಯಕ್ಕೆ ಹೋಗಿ ಕೆಲಸ ಮಾಡಲು ಹಿಂದಿಯೇ ಏಕೆ ಬೇಕು? ತಮಿಳುನಾಡಿನಲ್ಲಿ ತಮಿಳು, ಅದೇ ರೀತಿ ಆಂಧ್ರ, ತೆಲಂಗಾಣದಲ್ಲಿ ತೆಲುಗು. ತಮಿಳರು ಹಿಂದಿ ಕಲಿಯದೇ ಅನ್ಯ ರಾಜ್ಯಗಳಲ್ಲಿ ಕೆಲಸ ಮಾಡುತ್ತಿಲ್ಲವೇ?ರಾಷ್ಟ್ರೀಯ ದೃಷ್ಟಿಕೋನಕ್ಕೆ ಹಿಂದಿ ಎನ್ನುವ ವ್ಯಾಮೋಹದಿಂದಲೇ ಕರ್ನಾಟಕದಲ್ಲಿ ಕನ್ನಡದಲ್ಲಿ ಸೇವೆ ನೀಡಿ ಎಂದು ಕೇಳುವ ಪರಿಸ್ಥಿತಿ ಬಂದಿರುವುದು

More articles

Latest article

Most read