ಸಹಕಾರ ಸಚಿವ ಕೆ ಎನ್‌ ರಾಜಣ್ಣ ರಾಜೀನಾಮೆ; ಈ ವಿವಾದಾತ್ಮಕ ಹೇಳಿಕೆಯೇ ಕಾರಣವಾಯಿತೇ?

Most read

ಬೆಂಗಳೂರು: ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ತಮ್ಮ ಸಚಿವ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ.

ಸಚಿವ ರಾಜಣ್ಣ ಅವರ ರಾಜೀನಾಮೆ ಪತ್ರವನ್ನು ಅವರ ಪುತ್ರ ವಿಧಾನಪರಿಷತ್‌ ಸದಸ್ಯ ಕೆ ಆರ್‌ ರಾಜೇಂದ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ್ದಾರೆ.

ಮಹಾದೇವಪುರ ಕ್ಷೇತ್ರದ ಮತಗಳ್ಳತನಕ್ಕೆ ನಮ್ಮ ಲೋಪವೇ ಕಾರಣ ಎಂದು ಹೇಳಿಕೆ ನೀಡಿದ್ದರಿಂದ ಕೆಂಡಾಮಂಡಲವಾದ ಹೈಕಮಾಂಡ್‌ ಅವರ ರಾಜೀನಾಮೆ ಪಡೆಯುವಂತೆ ಮುಖ್ಯಮಂತ್ರಿಗಳಿಗೆ ಸೂಚಿಸಿತ್ತು. ವಿವಾದಿತ ಹೇಳಿಕೆಗಳಿಂದಲೇ ರಾಜಣ್ಣ ಸದಾ ಸುದ್ದಿಯಲ್ಲಿರುತ್ತಿದ್ದರು.

ಮೊನ್ನೆಯಷ್ಟೇ ಹಾಸನ ಉಸ್ತುವಾರಿ ಸ್ಥಾನದಿಂದ ಅವರನ್ನು ಬಿಡುಗಡೆಗೊಳಿಸಲಾಗಿತ್ತು.

More articles

Latest article