ಕುಶಾಲನಗರದಲ್ಲಿ ಉದ್ಯಮಿ ಮೇಲೆ ಗುಂಡಿನ ದಾಳಿ

Most read

ಉದ್ಯಮಿ ಶಶಿಧರ್​ ಎಂಬುವರ ಮೇಲೆ 8 ಸುತ್ತು ಗುಂಡಿ ದಾಳಿ ನಡೆಸಿದ ಘಟನೆ ಕೊಡಗು ಜಿಲ್ಲೆ ಕುಶಾಲನಗರ ಪಟ್ಟಣದಲ್ಲಿ ಸೋಮವಾರ ನಡೆದಿದೆ.

ಯಾವುದೊ ಸಣ್ಣ ವಿಚಾರಕ್ಕೆ ಅನುದೀಪ್ ಗನ್‌ನಿಂದ ಉದ್ಯಮಿಯ ಮೇಲೆ ಗುಂಡು ಹಾರಿಸಿದ್ದಾನೆ ಎಂಬ ಮಾಹಿತಿ ತಿಳಿದುಬಂದಿದೆ. ಘಟನೆಯಲ್ಲಿ ಶಶಿಧರ್ ಕಾಲಿಗೆ ಗಂಭೀರ ಗಾಯವಾಗಿದೆ. ಸದ್ಯ ಆರೋಪಿಯನ್ನು ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ.

ಉದ್ಯಮಿ‌ ಶಶಧರ್ ಕಾರಿನಲ್ಲಿ ಕುಳಿತಿರುವಾಗ ಅನುದೀಪ್ ಏಕಾಏಕಿ ಎಂಟು ಸುತ್ತಿನ ದಾಳಿ ಮಾಡಿದ್ದಾನೆ‌. ಈ ದಾಳಿಯಿಂದಾಗಿ ಶಶಿಧರ್ ಅವರಿಗೆ ಕಾಲಿಗೆ ಗುಂಡು ಹೊಕ್ಕಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಾಸನದಲ್ಲಿ ಕಳೆದ ವಾರ ಜೂನ್ 20 ರಂದು ಗುಂಡಿನ ದಾಳಿ ನಡೆದಿತ್ತು. ಈ ಪ್ರಕರಣ ಮಾಸುವ ಮುಂಚೆಯೇ ರಾಜ್ಯದಲ್ಲಿ ಮತ್ತೊಂದು ಗುಂಡಿನ ದಾಳಿ ಘಟನೆ ವರದಿಯಾಗಿದೆ.

More articles

Latest article