ʻಉತ್ತರಕಾಂಡʼ ಸೆಟ್ ಗೆ ಬಂದ ಶಿವಣ್ಣನಿಗೆ ಅದ್ದೂರಿ ಸ್ವಾಗತ

Most read


ಲೋಕಸಭಾ ಚುನಾವಣೆ ಮುಗಿದ ಬಳಿಕ ಶಿವಣ್ಣ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸದಾ ಬ್ಯುಸಿಯಾಗಿರಲೇಬೇಕೆಂಬ ಧ್ಯೇಯ ಹೊಂದಿರುವವರು ಶಿವಣ್ಣ. ಈ ನಿಟ್ಟಿನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾ ಒಪ್ಪಿಕೊಂಡಿರುವ ಶಿವಣ್ಣ ಇದೀಗ ಉತ್ತರಕಾಂಡ ಸೆಟ್ ಗೆ ಎಂಟ್ರಿ ಕೊಟ್ಟಿದ್ದಾರೆ. ಡಾಲಿ ಧನಂಜಯ ಅಭಿನಯಿಸುತ್ತಿರುವ ಉತ್ತರಕಾಂಡ ಸಿನಿಮಾ ಮೇಲೆ ಬಾರೀ ನಿರೀಕ್ಷೆ ಇದೆ. ಶಿವಣ್ಣ ಕೂಡ ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ಶಿವಣ್ಣನ ಕ್ರೇಜ್ ಏನು ಕಡಿಮೆ ಇಲ್ಲ ಬಿಡಿ. ಎಲ್ಲಿಯೇ ಹೋದರೂ ಅಭಿಮಾನಿಗಳು ಸುತ್ತುವರಿದು ನಿಲ್ಲುತ್ತಾರೆ. ಫೋಟೋ, ಸೆಲ್ಫೀಗೆ ಮುಗಿಬೀಳುತ್ತಾರೆ. ಇದೀಗ ಉತ್ತರಕಾಂಡ ಸೆಟ್ ನಲ್ಲಿ ಶಿವಣ್ಣನಿಗೆ ಅದ್ದೂರಿ ಸ್ವಾಗತ ಸಿಕ್ಕಿದೆ. ಶಿವಣ್ಣ ಎಂಟ್ರಿಯಾಗುತ್ತಲೇ ತಮಟೆ ಬಾರಿಸಲಾಗಿದೆ. ಅಷ್ಟೇ ಅಲ್ಲ ಅಲ್ಲಿದ್ದವರೆಲ್ಲ ಶಿವಣ್ಣನ ಮುಖವಾಡವನ್ನೇ ಧರಿಸಿದ್ದರು. ಈ ಮೂಲಕ ಎಲ್ಲರೂ ಶಿವಣ್ಣನಿಗೆ ಗೌರವದಿಂದ ಸ್ವಾಗತ ಕೋರಿದ್ದಾರೆ. ಈ ವಿಡಿಯೋವನ್ನು ಕೆಆರ್‌ಜಿ ಕನೆಕ್ಷನ್ ಹಂಚಿಕೊಂಡಿದೆ.

ರೋಹಿತ್ ಪದಕಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ಸಂಪೂರ್ಣ ಕಥೆ ಉತ್ತರ ಕರ್ನಾಟಕ ಭಾಗದಲ್ಲಿಯೇ ನಡೆಯಲಿದೆ. ಮೊದಲಿಗೆ ರಮ್ಯಾ ನಟಿಯಾಗಿ ಒಪ್ಪಿದ್ದರು. ಮೂಹೂರ್ತ ಕೂಡ ಮುಗಿಸಿದ್ದರು. ಆದರೆ ಈಗ ಬ್ಯಾಕ್ ಔಟ್ ಆಗಿದ್ದಾರೆ. ಆ ಸ್ಥಾನಕ್ಕೆ ಐಶ್ವರ್ಯಾ ರಾಜೇಶ್ ಎಂಟ್ರಿಕೊಟ್ಟಿದ್ದಾರೆ. ಶಿವಣ್ಣ ಕೂಡ ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಉಳಿದಂತೆ ರಂಗಾಯಣ ರಘು, ಯೋಗರಾಜ್ ಭಟ್, ಚೈತ್ರಾ ಆಚಾರ್ ಸೇರಿದಂತೆ ಹಲವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈಗಾಗಲೇ ಅವರುಗಳ ಲುಕ್ ಕೂಡ ರಿವಿಲ್ ಆಗಿದೆ. ನಿರ್ಮಾಪಕರಾದ ಕಾರ್ತಿಕ್ ಗೌಡ, ಯೋಗಿ ಜಿ. ರಾಜ್ ಹಾಗೂ ನಟ ಡಾಲಿ ಧನಂಜಯ್ ಅವರು ‘ರತ್ನನ್ ಪ್ರಪಂಚ’ ಹಾಗೂ ‘ಗುರುದೇವ ಹೊಯ್ಸಳ’ ಸಿನಿಮಾದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಈಗ ಇವರ ಕಾಂಬಿನೇಷನ್ನಲ್ಲಿ ‘ಉತ್ತರಕಾಂಡ’ ಸಿನಿಮಾ ಮೂಡಿಬರುತ್ತಿದೆ.

More articles

Latest article