ಮೇ 25 ಹಾಗೂ 26 ರಂದು ಕೊಪ್ಪಳದಲ್ಲಿ ಮೇ ಸಾಹಿತ್ಯ ಮೇಳ

Most read

ಕೊಪ್ಪಳ-23: ನಾಡಿನ ಸಾಹಿತ್ಯ-ಸಾಂಸ್ಕೃತಿಕ ಚಳುವಳಿಯಲ್ಲಿ ತನ್ನದೇ ಆದ ಮಹತ್ವದ ಪಾತ್ರ ನಿರ್ವಹಿಸುತ್ತಿರುವ, ಸರ್ಕಾರದಿಂದ ಯಾವ ನೆರವೂ ಪಡೆಯದೇ ಜನರಿಂದಲೇ ನಡೆಯುವ ಮೇ ಸಾಹಿತ್ಯ ಮೇಳಕ್ಕೆ ಈಗ ದಶಕದ ಉತ್ಸಾಹ. 10 ನೇ ಮೇ ಸಾಹಿತ್ಯ ಮೇಳವು ಇದೇ ಮೇ 25 ಹಾಗೂ 26 ರಂದು ಕೊಪ್ಪಳದ ಶಿವಶಾಂತವೀರ ಮಂಗಲ ಭವನದಲ್ಲಿ ಜರುಗಲಿದೆ.

ಗದಗಿನ ಲಡಾಯಿ ಪ್ರಕಾಶನ, ಹೊನ್ನಾವರ ತಾಲ್ಲೂಕು ಕವಲಕ್ಕಿಯ ಕವಿ ಪ್ರಕಾಶನ, ಧಾರವಾಡದ ಚಿತ್ತಾರ ಕಲಾ ಬಳಗ ಹಾಗೂ ಕೊಪ್ಪಳದ ಮೇ ಸಾಹಿತ್ಯ ಬಳಗದ ಸಹಯೋಗದಲ್ಲಿ ಆಯೋಜಿಸಿರುವ ಈ ಮೇಳವು ಈ ಬಾರಿ “ಸಂವಿಧಾನ ಭಾರತ ಧರ್ಮಕಾರಣ”ಎಂಬ ಆಶಯವಾಕ್ಯದೊಂದಿಗೆ ಆಚರಿಸಲ್ಪಡುತ್ತಿದೆ.

ವೇದಿಕೆ-ಆವರಣ-ದ್ವಾರಗಳು-
1958 ರ ಸ್ವಾತಂತ್ರ್ಯ ಹೋರಾಟ ಕೊಪ್ಪಳ ಹುತಾತ್ಮರ ಹೆಸರಿನಲ್ಲಿ ವೇದಿಕೆ ನಿರ್ಮಾಣವಾಗಿದೆ. ಡಾ.ವಿ.ಎನ್.ಲಕ್ಷ್ಮೀನಾರಾಯಣ, ಪ್ರಕಾಶ ಹಿಟ್ನಳ್ಳಿ, ರಾಜು ಬಾಗಲಿ, ಆನಂದ ಭಂಡಾರಿ ಅವರ ಹೆಸರುಗಳನ್ನು ಆವರಣಕ್ಕೆ ನಾಮಕರಣ ಮಾಡಲಾಗಿದೆ. ವಿಠ್ಠಪ್ಪ ಗೋರಂಟ್ಲಿ ಹಾಗೂ ಗವಿಸಿದ್ಧ ಎನ್ ಬಳ್ಳಾರಿ ಅವರ ಹೆಸರಿನಲ್ಲಿ ದ್ವಾರ ನಿರ್ಮಿಸಲಾಗಿದೆ.

ಪುಸ್ತಕ, ಚಿತ್ರಕಲಾ ಮಳಿಗೆಗಳು

ಕೊಪ್ಪಳದಲ್ಲಿ ಪುಸ್ತಕ ಹಾಗೂ ಓದುವ ಸಂಸ್ಕೃತಿ ಬೆಳಸಲು ಶ್ರಮಿಸಿದ ಶಿಕ್ಷಕ ಬಿ.ಆರ್.ತುಬಾಕಿ ಹಾಗೂ ನಿವೃತ್ತ ಗ್ರಂಥಪಾಲಕ ದೇವೇಂದ್ರಪ್ಪ ಎನ್.ಡೊಳ್ಳಿನ ಅವರ ಹೆಸರಿನಲ್ಲಿ ನಿರ್ಮಿಸಲಾಗಿರುವ ಪುಸ್ತಕ ಮಳಿಗೆಗಳನ್ನು ಮೇ 25 ರಂದು ಬೆಳಿಗ್ಗೆ 10 ಗಂಟೆಗೆ ಸಿ.ಚನ್ನಬಸವಣ್ಣ, ಈರಪ್ಪ ಕಂಬಳಿ, ರವಿತೇಜ ಅಬ್ಬಿಗೇರಿ ಉದ್ಘಾಟಿಸುವರು. ಶರಣು ಶೆಟ್ಟರ್ ಕಾರ್ಯಕ್ರಮ ಸಂಯೋಜಿಸುವರು.

ಕಾಳಪ್ಪ ಪತ್ತಾರ ಚಿತ್ರಕಲಾ ಪ್ರದರ್ಶನ ಮಳಿಗೆಯನ್ನು ಏಕಪ್ಪ ಚಿತ್ರಗಾರ, ಪ್ರಕಾಶ ಕಂದಕೂರ ಹಾಗೂ ಶರಣಪ್ಪ ವಡಿಗೇರಿ ಉದ್ಘಾಟಿಸುವರು. ರುದ್ರಪ್ಪ ಭಂಡಾರಿ ಸಂಯೋಜಿಸುವರು.

ಹೋರಾಟದ ಹಾಡುಗಳು


ಆರ್ ಸಿ ಎಫ್ ಕಲಾತಂಡ ಸಿಂಧನೂರು, ದಲಿತ ಕಲಾ ಮಂಡಳಿ, ಇಪ್ಟಾ ಕರ್ನಾಟಕ, ಅರುಣೋದಯ ಕಲಾ ತಂಡ ಕೊತಬಾಳ, ಶರಣ ಕಲಾಬಳಗ ಗಂಗಾವತಿ, ಸಾಂಬಯ್ಯ ಹಿರೇಮಠ ಮತ್ತು ತಂಡ ಹರ್ಲಾಪುರ-ಕುಂದಗೋಳ, ಡಿಂಗ್ರಿ ಭರತ್, ಮರಿಯಮ್ಮ ಚೂಡಿ, ಗೌರಿ ಗೋನಾಳ, ನಾದ ಮಣಿನಾಲ್ಕೂರು ಮತ್ತಿತರ ಕಲಾವಿದರಿಂದ ಹೋರಾಟದ ಹಾಡುಗಳು, ಜನಪರ ಗೀತೆಗಳು ಮೊಳಗಲಿವೆ.

ಜನಸಾಮಾನ್ಯರಿಂದ ಉದ್ಘಾಟನೆ-
ಬೆಳಿಗ್ಗೆ 10.30 ಕ್ಕೆ ಮೇಳವನ್ನು ಜನಸಾಮಾನ್ಯರಾದ ಬಸಮ್ಮ, ಜಂಬವ್ವ, ದುರ್ಗವ್ವ, ಶೋಭಾ ಮಠ, ನಿಂಗಜ್ಜ ಮತ್ತು ಮಕ್ಕಳಿಂದ ಮೇಳ ಉದ್ಘಾಟನೆಯಾಗಲಿದೆ.

ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಅಧ್ಯಕ್ಷತೆ ವಹಿಸುವರು, ನವದೆಹಲಿಯ ರೈತ ಹೋರಾಟಗಾರ ರಾಕೇಶ್ ಟಿಕಾಯತ್, ಪಣಜಿಯ ಕೊಂಕಣಿ ಕವಿ, ಹೋರಾಟಗಾರ ದಾಮೋದರ್ ಮೌಜೋ, ತೆಲಂಗಾಣದ ಕವಿ, ಹೋರಾಟಗಾರ್ತಿ ಜೂಪಕ ಸುಭದ್ರ ದಿಕ್ಸೂಚಿ ಮಾತುಗಳನ್ನಾಡುವರು. ರಮೇಶ ಗಬ್ಬೂರ ಸಂವಿಧಾನದ ಪ್ರಸ್ತಾವನೆ ಓದುವರು. ಡಿ.ಎಂ.ಬಡಿಗೇರ ಸ್ವಾಗತಿಸುವರು, ಕೆ.ಪಿ.ಸುರೇಶ ಪ್ರಾಸ್ತಾವಿಕ ಮಾತನಾಡುವರು.

ಕಾಶಪ್ಪ ಚಲವಾದಿ, ಅನಿಲ ಹೊಸಮನಿ ನಿರ್ಣಯಗಳನ್ನು ಮಂಡಿಸುವರು. ಟಿ.ರತ್ನಾಕರ್, ಜೆ.ಭಾರದ್ವಾಜ, ಕೆ.ವೆಂಕಟರಾಜು, ಮೆಹಮೂದ್ ಬೇಗಂ ಉಪಸ್ಥಿತರಿರುವರು. ಸಂಗಮೇಶ ಮೆಣಸಿನಕಾಯಿ, ಅಖಿಲಾ ವಿದ್ಯಾಸಂದ್ರ ಕಾರ್ಯಕ್ರಮ ಸಂಯೋಜಿಸುವರು.

ಗೋಷ್ಟಿ 1- ಸಂವಿಧಾನ ಭಾರತ
ಮಧ್ಯಾಹ್ನ 2 ಗಂಟೆಗೆ

ಸಂವಿಧಾನ ಪೀಠಿಕಾ ಭಾಗ ಆದರ್ಶ-ಅವಲೋಕನ ಕುರಿತು ಸುಪ್ರೀಂ ಕೋರ್ಟಿನ ಹಿರಿಯ ನ್ಯಾಯವಾದಿ ಮೋಹನ್ ಕಾತರಕಿ ಮಾತನಾಡುವರು, ಭಾರತದಲ್ಲಿ ಕೋಮುರಾಜಕಾರಣ ಇತಿಹಾಸ ಕುರಿತು ಉಡುಪಿಯ ಕೆ.ಫಣಿರಾಜ್, ಸಂವಿಧಾನ ಎದುರಿಸಿದ ಪ್ರತಿರೋಧಗಳ ಕುರಿತು ನಿವೃತ್ತ ಜಿಲ್ಲಾ ನ್ಯಾಯಾಧೀಶ ನಬಿ ರಸೂಲ್ ಮಮದಾಪೂರ ಮಾತನಾಡುವರು. ಎಚ್.ಎಸ್.ಪಾಟೀಲ, ಡಾ.ರಾಜಶೇಖರ ನಾರಿನಾಳ, ಡಾ.ಈರಣ್ಣ, ಸವಿತಾ ಅಂಗಡಿ ಉಪಸ್ಥಿತರಿರುವರು. ಶರಣಪ್ಪ ಬಾಚಲಾಪುರ ಸಂಯೋಜಿಸುವರು.

ಗೋಷ್ಟಿ -2- ವರ್ತಮಾನದಲ್ಲಿ ಧರ್ಮ ರಾಜಕಾರಣ ಇಳಿಹೊತ್ತು 3.45 ಕ್ಕೆ

ನ್ಯಾಯ ವ್ಯವಸ್ಥೆ ಕುರಿತು ಎಸ್.ಬಾಲನ್, ಚುನಾವಣಾ ಪ್ರಜಾಪ್ರಭುತ್ವ ಕುರಿತು ಸುಧೀರ್ ಕುಮಾರ್ ಮುರೊಳ್ಳಿ, ಕಾರ್ಯಾಂಗ ಕುರಿತು ನಿವೃತ್ತ ಕೆಎಎಸ್ ಅಧಿಕಾರಿ ನೂರ್ ಮನ್ಸೂರ್, ಶಿಕ್ಷಣ ವ್ಯವಸ್ಥೆ ಕುರಿತು ವಿ.ಪಿ.ನಿರಂಜನಾರಾಧ್ಯ, ಸಿನೆಮಾ ಮಾಧ್ಯಮ ಕುರಿತು ಕೇಸರಿ ಹರವೂ ಮಾತನಾಡುವರು. ಡಾ.ಮಹಾಂತೇಶ ಮಲ್ಲನಗೌಡರ್, ರಾಜಾಭಕ್ಷಿ, ಆನಂದ ಸಿಂಗಾಡಿ, ಸಲೀಮಾ ಜಾನ್ ಉಪಸ್ಥಿತರಿರುವರು. ಬಸವರಾಜ ಪೂಜಾರ್, ಜೀವನ್‌ಸಾಬ ವಾಲೀಕಾರ ಸಂಯೋಜಿಸುವರು.

ಗೋಷ್ಟಿ-3- ಬದುಕು-ಹಾಡು
ಸಂಜೆ 6.15 ಕ್ಕೆ

ರಹಿಮಾನವ್ವ ಕಲ್ಮನಿ, ಪಿ.ಬಿ.ಧುತ್ತರಗಿ ಸಾಂಸ್ಕೃತಿಕ ವೇದಿಕೆಯಲ್ಲಿ ಹಾಡು-ಮಾತು ಮೈಸೂರಿನ ಜನಾರ್ದನ(ಜನ್ನಿ) ಅವರಿಂದ, ಫಕ್ಕೀರಪ್ಪ ವಜ್ರಬಂಡಿ, ಮಹಾಂತೇಶ ಕೊತಬಾಳ, ಹೊನ್ನಪ್ಪ ಮರಿಯಮ್ಮನವರ, ಜ್ಯೋತಿ ಹಿಟ್ನಾಳ ಉಪಸ್ಥಿತರಿರುವರು. ಬಾಳಪ್ಪ ವೀರಾಪುರ, ಮಂಜುಳಾ ಸೋಮನಾಳ ಸಂಯೋಜಿಸುವರು.

ಕವಿಗೋಷ್ಟಿ -1- ಸಂಜೆ 7.30 ಕ್ಕೆ


ಅರುಣಾ ನರೇಂದ್ರ ಅಧ್ಯಕ್ಷತೆವಹಿಸುವರು, ಸಿರಾಜ್ ಬಿಸರಳ್ಳಿ ಆಶಯ ಮಾತುಗಳನ್ನಾಡುವರು. ಡಾ.ಜಾಜಿ ದೇವೇಂದ್ರಪ್ಪ, ವಿಜಯಲಕ್ಷ್ಮಿ ಕೊಟಗಿ ಮುಖ್ಯ ಅತಿಥಿಗಳಾಗಿ ಆಗಮಿಸುವರು.

ಮೈಲಾರಪ್ಪ ಬೂದಿಹಾಳ, ಶರಣಪ್ಪ ತಳ್ಳಿ, ನಾಗಭೂಷಣ ಅರಳಿ, ಶಕುಂತಲಾ ನಾಯಕ, ಶೈಲಜಾ ಹಿರೇಮಠ, ಅಜಮೀರ್ ನಂದಾಪುರ, ಲಕ್ಷ್ಮಿ ಮಾನಸ, ಅಶೋಕ ಹೊಸಮನಿ, ಅಮೀರ್‌ಸಾಬ ಒಂಟಿ, ಪಾರ್ವತಿ ಕನಕಗಿರಿ, ಡಾ.ಮಮ್ತಾಜ್ ಬೇಗಂ, ಡಾ.ನಾಗೇಶ್ ಪೂಜಾರಿ, ಮೌನೇಶ್ ನವಲಹಳ್ಳಿ, ಜಹರಾನಾ ಕೋಳೂರು, ಶ್ರೀನಿವಾಸ ದೇಸಾಯಿ, ಅಲ್ಲಾವುದ್ದೀನ್ ಯಮ್ಮಿ, ಡಾ.ಪ್ರವೀಣ್ ಪೊಲೀಸ್‌ಪಾಟೀಲ, ಮೌನೇಶ್ ಬಡಿಗೇರ, ನಿಂಗು ಬೆಣಕಲ್, ವಸುಧಾ ಪಾಟೀಲ, ವಿರೇಶ ಮೇಟಿ ಕವಿತೆಗಳನ್ನು ವಾಚಿಸುವರು.

ಶೀಲಾ ಹಾಲ್ಕುರಿಕೆ ಹಾಗೂ ನಾಗರಾಜನಾಯಕ ಡೊಳ್ಳಿನ ಸಂಯೋಜಿಸುವರು.

ಮೇ.26 ರವಿವಾರದ ಕಾರ್ಯಕ್ರಮಗಳು

ಕವಿಗೋಷ್ಟಿ-2- ಬೆಳಿಗ್ಗೆ 9 ಗಂಟೆಗೆ

ಕೇರಳದ ತ್ರಿಶ್ಯೂರಿನ ಕವಿ ಪಿ.ಎನ್.ಗೋಪಿಕೃಷ್ಣನ್ ಆಶಯ ಭಾಷಣ ಮಾಡುವರು, ಕಲೇಸಂ ಅಧ್ಯಕ್ಷೆ ಎಚ್.ಎಲ್.ಪುಷ್ಪಾ ಅಧ್ಯಕ್ಷತೆ ವಹಿಸುವರು.

ನರೇಂದ್ರ ರೈ ದೇರ್ಲ, ದೀಪಾ ಬುದ್ಧೆ, ವಿಲ್ಸನ್ ಕಟೀಲು, ರಾಮಪ್ಪ ಮಾದರ, ಮುಆದ್, ಅಂಜಲಿ ಬೆಳಗಲ್, ಕೆ.ಪಿ‌.ಲಕ್ಷ್ಮಣ, ದಿನೇಶ್ ಕುಕ್ಕುಜಡ್ಕ, ಸಂಘಮಿತ್ರೆ, ವಿಶಾಲ ಮ್ಯಾನ್ಸರ್, ಮೆಹಬೂಬ್ ಮಠದ, ಪೂಜಾ ಸಿಂಗೆ, ಬಸವರಾಜ ಹೂಗಾರ, ವಿ.ಹರಿನಾಥಬಾಬು, ಪ್ರಿಯಾಂಕ ಮಾವಿನಕರ, ಮೌಲ್ಯ ಸ್ವಾಮಿ, ರಮೇಶ ಬನ್ನಿಕೊಪ್ಪ, ಮುರ್ತುಜಾಬೇಗಂ ಕೊಡಗಲಿ, ಚಂದ್ರಪ್ರಭಾ ಬಾಗಲಕೋಟ, ಸದಾಶಿವ ಸೊರಟೂರ, ಕೆ.ಜಿ.ರಮ್ಯ, ಸಿದ್ಧರಾಮ ತಳವಾರ, ಸುರೇಶ ರಾಜಮಾನೆ ಕವಿತೆಗಳನ್ನು ವಾಚಿಸುವರು.

ಮಮ್ತಾಜ್ ಬಿರಾದಾರ, ಮಹೇಶ ಬಳ್ಳಾರಿ ಸಂಯೋಜಿಸುವರು.

ಗೋಷ್ಟಿ-4- ಚಳವಳಿ ಮತ್ತು ಧರ್ಮ ರಾಜಕಾರಣ
ಬೆಳಿಗ್ಗೆ 11 ಗಂಟೆಗೆ

ಮಹಿಳಾ ಚಳವಳಿ ಕುರಿತು ಕೆ.ನೀಲಾ, ದಲಿತ-ಆದಿವಾಸಿ ಚಳವಳಿ ಕುರಿತು ಡಾ.ಅಪ್ಪಗೆರೆ ಸೋಮಶೇಖರ್, ವಿದ್ಯಾರ್ಥಿ ಚಳವಳಿ ಕುರಿತು ನವದೆಹಲಿ ಜೆಎನ್‌ಯುನ ಅವಿಜಿತ್ ಘೋಷ್, ಕಾರ್ಮಿಕ-ರೈತ ಚಳವಳಿ ಕುರಿತು ಯು‌‌.ಟಿ.ಆಯೇಷಾ ಫರ್ಜಾನಾ ಮಾತನಾಡುವರು.

ಬಸವರಾಜ ಶೀಲವಂತರ್, ಡಿ.ಹೆಚ್.ಪೂಜಾರ, ಅಶೋಕ ಬರಗುಂಡಿ, ಹನುಮೇಶ ಕಲ್ಮಂಗಿ ಉಪಸ್ಥಿತರಿರುವರು.
ಡಾ.ಎಚ್.ಎಸ್.ಅನುಪಮಾ ಸಂಯೋಜಿಸುವರು.

ಗೋಷ್ಟಿ-5- ನಾವು ಮತ್ತು ನಾಳೆ
ಮಧ್ಯಾಹ್ನ 1 ಗಂಟೆಗೆ

ಚುನಾವಣೋತ್ತರ ಸರ್ಕಾರ ಎದುರಿಸುವ ಬಗೆ -ಐಕ್ಯತೆ ಅಗತ್ಯ ಕುರಿತು ಶಿವಸುಂದರ್ ಮಾತನಾಡುವರು. ಡಾ.ಕೆ.ಬಿ.ಬ್ಯಾಳಿ, ಗುಂಜಳ್ಳಿ ನರಸಿಂಹ, ಬಿ.ಎಂ.ಹನುಮಂತಪ್ಪ, ಭಾರತಿ ಮೂಲಿಮನಿ, ಸಂಜಯದಾಸ್ ಕೌಜಗೇರಿ ಉಪಸ್ಥಿತರಿರುವರು. ಮುತ್ತು ಬಿಳೇಯಲಿ ಸಂಯೋಜಿಸುವರು.

ಗೋಷ್ಟಿ-6- ಅನುಭವ ಕಥನ
ಮಧ್ಯಾಹ್ನ 2.30 ಕ್ಕೆ

ಕೊಪ್ಪಳದ ಚಂದ್ರು ದಾಸರ, ಬೆಂಗಳೂರಿನ ಲತಾ ಮಾಲ, ಮಂಗಳೂರಿನ ಜೊಹರಾ, ಕಲಬುರಗಿಯ ಪಿ.ನಂದಕುಮಾರ್ ಅನುಭವಗಳನ್ನು ಹಂಚಿಕೊಳ್ಳುವರು‌‌. ಪ್ರಭುಗೌಡ ಪಾಟೀಲ, ಜಬೀನಾ ಖಾನುಂ, ಸಿದ್ಧಾರ್ಥ ಸಿಂಗೆ, ಶೇಖರ ಇಂಗಳದಾಳ, ಸಿ.ಎಂ.ಚನ್ನಬಸಪ್ಪ, ಭೀಮಣ್ಣ ಹಾವಳಿ ಉಪಸ್ಥಿತರಿರುವರು. ರಾಮಚಂದ್ರ ಹಂಸನೂರು, ಮಹಾಂತೇಶ ನೆಲಗಣಿ ಸಂಯೋಜಿಸುವರು.

ಸಮಾರೋಪ-ಪ್ರಶಸ್ತಿ ಪ್ರದಾನ
ಸಂಜೆ 4 ಗಂಟೆಗೆ

ಮಾಜಿ ಸಂಸದ, ಸಾಹಿತಿ ಡಾ.ಎಲ್.ಹನುಮಂತಯ್ಯ ಸಮಾರೋಪ ಮಾತುಗಳನ್ನಾಡುವರು. ಪ್ರೊ.ಆರ್.ಸುನಂದಮ್ಮ ಪ್ರಶಸ್ತಿ ಪ್ರದಾನ ಮಾಡುವರು. ಮಹಾಂತೇಶ ನವಲಕಲ್ ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡುವರು. ಪ್ರೊ.ಅಲ್ಲಮಪ್ರಭು ಬೆಟ್ಟದೂರ ಅಧ್ಯಕ್ಷತೆ ವಹಿಸುವರು.

ಪ್ರಶಸ್ತಿ ಪುರಸ್ಕೃತರು


ವಿಭಾ ಸಾಹಿತ್ಯ ಪ್ರಶಸ್ತಿ- ತೀರ್ಥಹಳ್ಳಿಯ ಸವಿರಾಜ್ ಆನಂದ್, ಬಂಡ್ರಿ ನರಸಪ್ಪ ಸಮಾಜಮುಖಿ ಶ್ರಮಜೀವಿ ಪ್ರಶಸ್ತಿ-ಧಾರವಾಡದ ಎಸ್.ಆರ್.ಹಿರೇಮಠ, ನವಲಕಲ್ ಬೃಹನ್ಮಠ ಶಾಂತವೀರಮ್ಮ ಮಹಾತಾಯಿ ಕಥಾ ಪ್ರಶಸ್ತಿ- ಕೆರೆಕೋಣದ ಮಾಧವಿ ಭಂಡಾರಿ, ನಿಂಗಪ್ಪ ಸಂಶಿ ರೈತ ಚೇತನ ಪ್ರಶಸ್ತಿ- ಬೆಳಗಾವಿಯ ಶಿವಾಜಿ ಕಾಗಣೇಕರ್, ಪಂಚಪ್ಪ ಸಮುದಾಯ ಮಾರ್ಗಿ ಪ್ರಶಸ್ತಿ-ಜನಾರ್ದನ(ಜನ್ನಿ) ಮೈಸೂರು, ಚಂದ್ರಶೇಖರ ಹೊಸಮನಿ ಅಂಬೇಡ್ಕರ್ ಪತ್ರಿಕಾ ಮಾರ್ಗಿ ಪ್ರಶಸ್ತಿ- ಇಂದೂಧರ ಹೊನ್ನಾಪುರ, ಲಕ್ಷ್ಮಿಬಾಯಿ ಕಟ್ಟಿಮನಿ ಸಮಾಜಮುಖಿ ಮಹಿಳೆ ಪ್ರಶಸ್ತಿ-ಕೊಪ್ಪಳದ ಹುಚ್ಚಮ್ಮ ಚೌಧರಿ ಅವರಿಗೆ ಪ್ರದಾನ ಮಾಡಲಾಗುವುದು.

ಚನ್ನು ಕಟ್ಟೀಮನಿ, ವೆಂಕಟಯ್ಯ ಅಪ್ಪಗೆರೆ, ಜೇಸುದಾಸ್ ಮೋಹನದಾಸ್, ಮುತ್ತು ಹಾಳಕೇರಿ, ಸರಸ್ವತಿ ಪಾಟೀಲ, ಮಾಲತೇಶ ಮರೇಗೌಡರ್ ಉಪಸ್ಥಿತರಿರುವರು.

ಬಿ.ಪೀರಬಾಷಾ ಅವರು ಮತ್ತೆ ಜೊತೆಗೂಡುವ ಮಾತುಗಳನ್ನಾಡುವರು, ಬಿ.ಶ್ರೀನಿವಾಸ, ಕೆ.ಬಿ.ಗೋನಾಳ ಸಂಯೋಜಿಸುವರು.

ಎರಡು ದಿನಗಳ ಕಾಲ ನಡೆಯುವ ಮೇ ಸಾಹಿತ್ಯ ಮೇಳವನ್ನು ಬಸವರಾಜ ಸೂಳಿಭಾವಿ ಅವರ ನೇತೃತ್ವದಲ್ಲಿ ಕೊಪ್ಪಳ ಹಾಗೂ ನಾಡಿನ ವಿವಿಧ ಜನಪರ ಸಂಘಟನೆಗಳು ಆಯೋಜಿಸುತ್ತಿವೆ. ಬಂಡಾಯದ ನೆಲ ಕೊಪ್ಪಳದಲ್ಲಿ ನಾಡಿನ ದೇಶದ ಹಲವಾರು ಚಿಂತಕರು ನೆರೆದು ಚಿಂತನೆಯ ಹೊಳೆ ಹರಿಸಿ, ಅರಿವನ್ನು ವಿಸ್ತರಿಸುವ, ಎಚ್ಚರಿಸುವ ಮಹತ್ವದ ಚಿಂತನ ಮಂಥನಗಳನ್ನು ನಡೆಸುವರು.

ಕೊಪ್ಪಳ ಹಾಗೂ ಸುತ್ತಲಿನ ವಿದ್ಯಾರ್ಥಿಗಳು, ಯುವಜನರು ಈ ಅಪರೂಪದ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಸಂಘಟಕರು ಕೋರಿದ್ದಾರೆ.

More articles

Latest article