ವೆಸ್ಟ್ ಎಂಡ್ ವಾಸ್ತವ್ಯ, ರೇಂಜ್ ರೋವರ್ ಇರುವ ನಿಮಗೆ ಹೆಣ್ಣುಮಕ್ಕಳ ತ್ಯಾಗ ಹೇಗೆ ಅರ್ಥವಾಗುತ್ತದೆ?

Most read

ಬೆಂಗಳೂರು: ವೆಸ್ಟ್ ಎಂಡ್ ವಾಸ್ತವ್ಯ, ರೇಂಜ್ ರೋವರ್ ಓಡಾಟ, ಊರು ತುಂಬಾ ಮನೆ ಹೊಂದಿರುವ ತಮಗೆ ಹೆಣ್ಣುಮಕ್ಕಳ ತ್ಯಾಗ ಹೇಗೆ ಅರ್ಥವಾಗಬಲ್ಲದು ಎಂದು ಕಾಂಗ್ರೆಸ್ ಪಕ್ಷ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಟೀಕಿಸಿದೆ.

ಗ್ಯಾರೆಂಟಿಗಳಿಂದ ಹಳ್ಳಿ ಹೆಣ್ಣುಮಕ್ಕಳು ದಾರಿ ತಪ್ಪಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಕಟುವಾಗಿ ಟೀಕಿಸಿರುವ ಪಕ್ಷ ಮಹಿಳೆಯರು ಅತ್ಯಂತ ಹೆಚ್ಚು ಜವಾಬ್ದಾರಿ ಇರುವವರು, ಕುಟುಂಬದ ಸುಧಾರಣೆಗೆ ಶ್ರಮಿಸುವವರು,
ತಮ್ಮ ಕೈ ಸೇರುವ ಹಣವನ್ನು ಜತನದಿಂದ ಸಂಸಾರದ ಉದ್ಧಾರಕ್ಕೆ ಬಳಸುವವರು ಎಂದು ತಿರುಗೇಟು ನೀಡಿದೆ.

ಕೆಪಿಸಿಸಿ ಫೇಸ್ ಬುಕ್ ಪುಟದಲ್ಲಿ ಈ ಕುರಿತು ಪೋಸ್ಟ್ ಮಾಡಲಾಗಿದ್ದು ಕುಮಾರಸ್ವಾಮಿಯವರಿಗೆ ಹಲವು ಪ್ರಶ್ನೆಗಳನ್ನು ಒಡ್ಡಲಾಗಿದೆ.

ಗೃಹಲಕ್ಷ್ಮಿ ಹಣದಲ್ಲಿ
◆ ಮಹಿಳೆಯರು ತಮ್ಮ ಕುಟುಂಬಕ್ಕೆ ಟಿವಿ ಖರೀದಿಸಿದ್ದು ದಾರಿ ತಪ್ಪುವುದೇ?
◆ ಫ್ರಿಡ್ಜ್ ಖರೀದಿಸುವುದು ತಪ್ಪು ದಾರಿಯೇ?
◆ ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸುವುದು ತಪ್ಪು ದಾರಿಯೇ?
◆ ದುಡಿವ ಮಗನನ್ನು ಕಳೆದುಕೊಂಡ ವೃದ್ಧೆ ಗೃಹಲಕ್ಷ್ಮಿ ಹಣದಲ್ಲಿ ಜೀವ ಸಾಗಿಸುವುದು ದಾರಿ ತಪ್ಪಿದಂತೆಯೇ?
◆ ಔಷಧಿ ಖರೀದಿಸುವುದು ದಾರಿ ತಪ್ಪಿದಂತೆಯೇ?

ಎಂದು ಕಾಂಗ್ರೆಸ್ ಪಕ್ಷ ಪ್ರಶ್ನಿಸಿದೆ.

More articles

Latest article