ಶಿರಸಿ: ಪೊಲೀಸರ ವಿರುದ್ದ ಕಾಲೆಳೆದುಕೊಂಡು ಜಗಳಕ್ಕೆ ಹೋದ ವಿಶ್ವೇಶ್ವರ ಹೆಗಡೆ

Most read

ಶಿರಸಿ: ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ಸಭೆಯ ವೇದಿಕೆ ಬಳಿ ಪ್ರೊಟೋಕಾಲ್ ಪ್ರಕಾರ ತಪಾಸಣೆ ನಡೆಸುತ್ತಿದ್ದ ಪೊಲೀಸರ ವಿರುದ್ಧ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಜಗಳಕ್ಕೆ ಇಳಿದ ಘಟನೆ ನಡೆದಿದೆ.

ಪೊಲೀಸರು ಕರ್ತವ್ಯ ನಿರತರಾಗಿದ್ದಾಗ ಇದ್ದಕ್ಕಿದ್ದಂತೆ ಕಾಗೇರಿ ರೇಗಾಡಿದ್ದರಿಂದ ಅಲ್ಲಿ ಕೆಲ ಸಮಯ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಪೊಲೀಸರು ಪರಿಸ್ಥಿತಿಯನ್ನು ಶಾಂತಗೊಳಿಸಿದರು.

ಶಿರಸಿಯ ಬಿಜೆಪಿ ಸಮಾವೇಶದ ವೇದಿಕೆ ಬಳಿ ತಪಾಸಣೆ ನಡೆಸಿ, ತಮ್ಮ ಕರ್ತವ್ಯ ನಡೆಸುತ್ತಿದ್ದ ಪೊಲೀಸರ ಮೇಲೆ ರೇಗಾಡಿದ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ಸಮಾವೇಶ ಸಕ್ಸಸ್‌ ಆಗಬಾರದೆಂದು ರಾಜ್ಯ ಸರ್ಕಾರ ನಿಮಗೆ ಹೇಳಿದೆಯಾ ಎಂದು ಎಂದು ಕೂಗಾಡಿದರು.

ತಾಳ್ಮೆ ಕಳೆದುಕೊಳ್ಳದ ಪೊಲೀಸರು ಕಾಗೇರಿಯವರನ್ನು ಸಮಾಧಾನಪಡಿಸಿ ಅಲ್ಲಿಂದ ಹೊರಗೆ ಕಳಿಸಿದರು. ಹಿರಿಯ ರಾಜಕಾರಣಿಯಾಗಿ ಕಾಗೇರಿ ನಡೆದುಕೊಂಡ ರೀತಿಗೆ ಬಿಜೆಪಿ ಕಾರ್ಯಕರ್ತರೇ ಬೇಸರ ವ್ಯಕ್ತಪಡಿಸಿದರು.

More articles

Latest article