ಈ ದೇಶದಲ್ಲಿ ಗಾಂಧಿ ಕೊಂದ ಗೋಡ್ಸೆ ಹೀರೋ ಆಗಿದ್ದಾನೆ, ಸಾಮಾನ್ಯ ವ್ಯಕ್ತಿಯನ್ನು ಕೊಂದ ದರ್ಶನ್ ವಿಲನ್: ವೈರಲ್ ಪೋಸ್ಟ್ಸ್

Most read

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್‌ನ ಸ್ಟಾರ್ ನಟ ದರ್ಶನ್ ಸೇರಿದಂತೆ 14 ಜನ ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯ ಆರೋಪಿಗಳನ್ನು 6 ದಿನ ಕಸ್ಟಡಿಗೆ ನೀಡಿದೆ. ಈಗಾಗಲೇ, ಪೊಲೀಸರು ಕೂಡ ಸ್ಥಳ ಮಹಜರು ಸೇರಿ ಚುರುಕಿನ ವಿಚಾರಣೆ ನಡೆಸುತ್ತಿದ್ದಾರೆ. ಈ ನಡುವೆ, ಕೊಲೆಯನ್ನೂ ಸಮರ್ಥನೆ ಮಾಡಿಕೊಂಡು ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುತ್ತಿದ್ದಾರೆ.

ಅದರಲ್ಲಿ ಶ್ಯಾಮ್ ಗಜ ತೂಗುದೀಪ ಹೆಸರಿನ X ಅಕೌಂಟ್ ನಲ್ಲಿ, ಗಾಂಧಿಯನ್ನು ಕೊಂದ ನಾಥೂರಾಮ್ ಗೋಡ್ಸೆ ಹೀರೋ.. ಸಮಾನ್ಯ ವ್ಯಕ್ತಿಯನ್ನು ಕೊಂದ ದರ್ಶನ್ ವಿಲನ್.. ಭಾರತ ಬದಲಾಗಲ್ಲ.. ಜೈ ಡಿ ಬಾಸ್ ಎಂದು ಪೋಸ್ಟ್ ಮಾಡುವ ಮೂಲಕ ಸಮರ್ಥಿಸಿಕೊಂಡಿದ್ದಾನೆ.

ಇದೇ ಅಕೌಂಟ್ ನಿಂದ, ಬಡವರಿಗೆ ಸಹಾಯ, ಜೀವನ ಉದ್ದಕ್ಕೂ ಬರಿ ನೋವು, ದೊಡ್ಡವರಿಂದ (ಬ್ರಾಹ್ಮಣ, ಲಿಂಗಾಯತ ) ದಬ್ಬಾಳಿಕೆ, ರಾಜಕೀಯ ಕುತಂತ್ರ. ಡಿಬಾಸ್ ಅವ್ರು ನಮ್ಮ ದಕ್ಷಿಣ ಭಾರತದ ಅಂಬೇಡ್ಕರ್ 🙏🏻❤️ ಎಂದು ಅಸಂಬದ್ಧ ಹೊಂದಾಣಿಕೆ ಮಾಡಿ ಬರೆದುಕೊಂಡಿದ್ದಾನೆ.

ಇನ್ನು ಕೆಲವು ದರ್ಶನ್ ಅಭಿಮಾನಿಗಳೇ ದರ್ಶನ್ ಅವರಿಗೆ ಇಡೀ ಶಾಪ ಹಾಕುತ್ತಿದ್ದು, ನಾನು ನಿಮ್ಮ ಅಭಿಮಾನಿ ಆದರೆ ನಿಮಗೆ ಒಳ್ಳೆ ಸಾವು ಬರಲ್ಲ ಬಾಸ್ ಎಂದು ಬರೆದುಕೊಂಡಿದ್ದಾರೆ.

24 ಗಂಟೆ ಜೊತೆಲೇ ತಿಂದು ಜೊತೆಲೇ ಇದ್ದು, ಸುತ್ತಾಡುತ್ತಿದ್ದ ಇವರು ಇವತ್ತು ಜೊತೆಗಿಲ್ಲ ಎಂದು ಸ್ಮೈಲಿಂಗ್ ಅಸಾಸಿನ್ ಎಂಬ ಖಾತೆಯ ವ್ಯಕ್ತಿ ಬರೆದುಕೊಂಡಿದ್ದಾರೆ. ಅದರಲ್ಲಿ ನಟ ದನ್ವೀರ್, ವಿನೋದ್ ಪ್ರಭಾಕರ್, ಅಭಿಷೇಕ್ ಅಂಬರೀಶ್, ನಟ ಚಿಕ್ಕಣ್ಣ ಪೋಟೋ ಇರೋದು ಕಾಣಬಹುದು.

ಟಿವಿ ನ್ಯೂಸ್ ಸುದ್ದಿ ಪ್ರಸಾರದ ವಿರುದ್ಧ ದರ್ಶನ್ ಅಭಿಮಾನಿಗಳು ಕಿಡಿಕಾರಿದ್ದು, ಆರೋಪಿ ಅವರ ತಂದೆ ಸುದ್ದಿ ತಿಳಿದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ‌. ಈ ಸುದ್ದಿಯನ್ನು ಪೋಸ್ಟ್ ಮಾಡಿದ ಡಿ ಬಾಸ್ ಸಾಮ್ರಾಜ್ಯ ಹಾವೇರಿ ಅನ್ನು ಖಾತೆ, ಇವಾಗ ಉತ್ತರ ಕೊಡಪ್ಪ ಅಜಿತ್ ಯಾಕೆ ಅವರ ತಂದೆಯವರದು ಜೀವ ಅಲ್ಲವಾ ?? ಆ ಬಡವರ ಶಾಪ ನಿನ್ನ ಸುಮ್ಮನೆ ಬಿಡಲ್ಲ ಎಂದು ದರ್ಶನ್ ಅವರನ್ನು ಸಮರ್ಥನೆ ಮಾಡಿಕೊಂಡಿದ್ದಾರೆ

More articles

Latest article