ಸಿದ್ದರಾಮಯ್ಯನವರೇ ಮುಡಾ ನಿವೇಶನಗಳನ್ನು ವಾಪಸ್ ಕೊಡಿ, ನಿಮ್ಮ ಘನತೆ ಹೆಚ್ಚುತ್ತೆ: ಎಚ್‌ ವಿಶ್ವನಾಥ್‌

Most read

ಸಿದ್ದರಾಮಯ್ಯನವರೇ ನಿಮಗೆ ಬಂದಿರುವ 14 ನಿವೇಶನಗಳನ್ನು ವಾಪಸ್ ಕೊಡಿ, ಆಗ ನಿಮ್ಮ ಘನತೆ ಹೆಚ್ಚುತ್ತೆ, ನೀವೊಬ್ಬ ಸಮಾಜವಾದಿ ಅನ್ನುವುದಕ್ಕೆ ಅರ್ಥ ಬರುತ್ತದೆ, ಇರುವ ಒಬ್ಬ ಮಗನಿಗೆ ಇನ್ನಷ್ಟು ಬೇಕು‌? ಎಂದು ಎಂಎಲ್‌ಸಿ ಎಚ್‌ ವಿಶ್ವನಾಥ್‌ ಹೇಳಿದರು.

ಮೈಸೂರಲ್ಲಿ ಮಾತನಾಡಿದ ಅವರು, ಒಬ್ಬ ಮಗ ಸತ್ತುಹೋದ ಒಬ್ಬ ಇದ್ದಾನೆ ಸಾಕಲ್ವ?, ಬಂದಿರುವ ನಿವೇಶನ ವಾಪಸ್ ಮಾಡಿ ದೊಡ್ಡ ತನ ಮೆರಿಯಪ್ಪ, ನಿಮ್ಮ ಪಂಚೆ ಕಪ್ಪು ಮಸಿಯಾಗುವ ಮುಂಚೆ ನಿವೇಶನಗಳ ಒಪ್ಪಿಸಿ ದೊಡ್ಡತನ ತೋರಿಸಪ್ಪಾ, ಸಿದ್ದರಾಮಯ್ಯ ನೀವು ಸೈಟು ವಾಪಸ್ ಕೊಡಿ, ಮುಡಾವನ್ನು ಸಿಬಿಐಗೆ ತನಿಖೆಗೆ ಕೊಡಿ, ಎಲ್ಲರೂ ಸಿಕ್ಕಿಕೊಂಡು ಸಾಯಲಿ ಎಂದು ಹೇಳಿದರು.

ಏಕವಚನದ ರೂವಾರಿ ನಮ್ಮ ಸಿದ್ದರಾಮಯ್ಯ, ಹೇ ಹೇ ಎಂದು ಮಾತನಾಡುತ್ತ ನಾಂದಿ ಹಾಕೊಟ್ಟಿದ್ದಾರೆ. ಸಾರ್ವಜನಿಕರ ಹಿತಾಸಕ್ತಿಗಿಂತ ನಿಮ್ಮ‌ ಕೌಟುಂಬಿಕ ಹಿತಾಶಕ್ತಿ ಹೆಚ್ಚಾಗಿದೆ, ಕುಮಾರಸ್ವಾಮಿ ಅವರ ಮಕ್ಕಳು ತರಬೇಕು ಅಂತ, ಯಡಿಯೂರಪ್ಪ ಅವರ ಮಕ್ಕಳ ಮುಂದೆ ತರಬೇಕು ಅಂತ, ಸಿದ್ದರಾಮಯ್ಯ ಮಗನ ಮುಂದೆ ತರಬೇಕು ಅಂತ ಕೌಟುಂಬಿಕ ಹಿತಾಸಕ್ತಿಯೇ ಇವರಿಗೆ ಹೆಚ್ಚಾಗಿದೆ. ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಕೆಲಸ ಮಾಡದೆ, ಇವರ ಬೇಳೆ ಬೇಯಿಸಿಕೊಳ್ಳುವ ಕೆಲಸದಲ್ಲಿ ತೊಡಗಿದ್ದಾರೆ. ನೀನು ಕಳ್ಳ, ನಿಮ್ಮಪ್ಪ ಕಳ್ಳ ಅಂತ ಮೂರು ಪಕ್ಷದವರೂ ಹೊಡೆದಾಡುತ್ತಿದ್ದಾರೆ ಎಂದು ಹೇಳಿದರು.

More articles

Latest article