ಆರ್ ಸಿಬಿ ಕಾಲ್ತುಳಿತ ದುರಂತ: ತನಿಖೆ ಆರಂಭಿಸಿದ ಎಸ್ ಪಿ ಶುಭನ್ವಿತಾ ನೇತೃತ್ವದ ಸಿಐಡಿ ತಂಡ

Most read

ಬೆಂಗಳೂರು:ಐಪಿಎಲ್ ನಲ್ಲಿ ಗೆಲುವು ಸಾಧಿಸಿದ ಆರ್ ಸಿಬಿ ಆಟಗಾರರರಿಗೆ ನಡೆದ ವಿಜಯೋತ್ಸವ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಪ್ರವೇಶ ದ್ವಾರಗಳಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತ ಪ್ರಕರಣದ ಸಿಐಡಿ ತನಿಖೆ ಇಂದಿನಿಂದ ಆರಂಭವಾಗಿದೆ. ಸಿಐಡಿ ಎಸ್ ಪಿ ಶುಭನ್ವಿತಾ ತನಿಖೆಯ ನೇತೃತ್ವ ವಹಿಸಿಕೊಂಡಿದ್ದಾರೆ.

ಡಿವೈಎಸ್ ಪಿ ಗೌತಮ್ ಹಾಗೂ ಪುರುಷೋತ್ತಮ್ ಅವರನ್ನು ತನಿಖಾಧಿಕಾರಿಗಳಾಗಿ ನೇಮಕ ಮಾಡಲಾಗಿದೆ. ಈಗಾಗಲೇ ಪ್ರಕರಣದ ಕಡತಗಳನ್ನು ಕಬ್ಬನ್ ಪಾರ್ಕ್ ಪೊಲೀಸರು ಸಿಐಡಿ ತನಿಖಾ ತಂಡಕ್ಕೆ ವರ್ಗಾಯಿಸಿದ್ದಾರೆ. ದುರಂತ ನಡೆದ ಕ್ರೀಡಾಂಗಣಕ್ಕೆ ಇಂದು ಸಿಐಡಿ ತಂಡ ಭೇಟಿ ನೀಡಲಿದೆ. ನೂಕು ನುಗ್ಗಲು ಉಂಟಾಗಿದ್ದ ನಂಬರ್ 7, 19,18, 16, 21 ಗೇಟ್ ಗಳ ಬಳಿ ಸಿಐಡಿ ತಂಡ ಪರಿಶೀಲನೆ ನಡೆಸಲಿದೆ. ಘಟನಾ ಸ್ಥಳ ಪರಿಶೀಲನೆ ಬಳಿಕ ಸಿಐಡಿ ಪೊಲೀಸರು, ಆರೋಪಿಗಳನ್ನು ವಶಕ್ಕೆ ಪಡೆಯಲಿದ್ದಾರೆ. ಸೋಮವಾರ ಬಾಡಿ ವಾರೆಂಟ್ ಮೇಲೆ ಬಂಧಿತ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆಯುವ ಸಾಧ್ಯತೆಗಳಿವೆ.

More articles

Latest article