Sunday, September 8, 2024

ಪೂಜೆ ಆಗಬೇಕಾಗಿರೋದು ವಿಗ್ರಹಕ್ಕಲ್ಲ, ರಾಮನ ಆದರ್ಶಗಳಿಗೆ : ವಿ ಎಸ್ ಉಗ್ರಪ್ಪ

Most read

ರಾಮನ ಪೂಜೆಗೆ ಆದ್ಯತೆ ನೀಡಿದ್ದು ಕಾಂಗ್ರೆಸ್.‌ ರಾಮ ದೇವತಾ ಸ್ವರೂಪಿ ಎಂದು ತೋರಿಸಿಕೊಂಡಿಲ್ಲ ಎಂದು ಮಾಜಿ ಸಂಸದ ಉಗ್ರಪ್ಪ ಹೇಳಿದ್ದಾರೆ.

ಇಂದು ಬಳ್ಳಾರಿಯಲ್ಲಿ ರಾಮ ಮಂದಿರ ಉದ್ಘಾಟನೆಯ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ʼರಾಮ ಮಹಿಳೆಯರ ರಕ್ಷಣೆಗೆ ಹೋರಾಟ ಮಾಡಿದ್ದಾನೆ. ಮೋದಿಯವರೇ ನೀವು ಯಾರ ರಕ್ಷಣೆ ಮಾಡಿದ್ದೀರಾ?ʼ ಎಂದು ಪ್ರಶ್ನೆ ಮಾಡಿದ್ದಾರೆ.

 ಮುಂದುವರಿದು ಮಾತನಾಡಿ, ಪೂಜೆ ಆಗಬೇಕಾಗಿರೋದು ಒಂದು ವಿಗ್ರಹಕ್ಕಲ್ಲ. ರಾಮ, ಸೀತೆ, ಲಕ್ಷ್ಮಣರ ಆದರ್ಶಗಳಿಗೆ ಪೂಜೆ ಆಗಲಿ. ರಾಮನ ಪೂಜೆಗೆ ಆದ್ಯತೆ ನೀಡಿದ್ದು ಕಾಂಗ್ರೆಸ್.‌ ರಾಜೀವ್‌ ಗಾಂಧಿ ಅವರ ಕಾಲದಲ್ಲಿ ರಾಮನ ಪೂಜೆಗೆ ಅವಕಾಶ ಇತ್ತು ಎಂದು ಉಗ್ರಪ್ಪ ಹೇಳಿಕೆ ನೀಡಿದ್ದಾರೆ.

More articles

Latest article