ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಎರಡನೇ ಪಟ್ಟಿ ಪ್ರಕಟಿಸಲು ಬಿಜೆಪಿ ಕಸರತ್ತು ನಡೆಸಿ ಕಡೆಕೂ ಟಿಕೆಟ್ ಹಂಚಿಕೆ ಮಾಡಿದೆ. ಲೋಕಸಭಾ ಚುನಾವಣೆಗೆ ಬಿಜೆಪಿಯು ಇಂದು ಎರಡನೇ ಪಟ್ಟಿ ಪ್ರಕಟಿಸಿದ್ದು, ಹಾಲಿ ಸಂಸದ ಪ್ರತಾಪ್ ಸಿಂಹ ಸೇರಿ 9 ಹಾಲಿ ಸಂಸದರಿಗೆ ಟಿಕೆಟ್ ಕೈ ತಪ್ಪಿದೆ.
ಎರಡನೇ ಪಟ್ಟಿಯಲ್ಲಿ 72 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆಯಾಗಲಿದೆ. ಇದರಲ್ಲಿ ಕರ್ನಾಟಕದ ೨೦ ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದೆ. ಮೊದಲ ಹಂತದಲ್ಲಿ ಬಿಜೆಪಿ 195 ಕ್ಷೇತ್ರಗಳಿಗೆ ಹೆಸರನ್ನು ಘೋಷಿಸಿತ್ತು.
ಯಾರಿಗೆ ಟಿಕೆಟ್ ನೀಡಲಾಗಿದೆ:-
- ಚಿಕ್ಕೋಡಿ – ಅಣ್ಣಸಾಹೇಬ್ ಜೊಲ್ಲೆ.
 - ಮೈಸೂರು – ಯದುವೀರ್ ಒಡೆಯರ್
 - ಕಲಬುರಗಿ – ಉಮೇಶ್ ಜಾಧವ್
 - ವಿಜಯಪುರ – ರಮೇಶ್ ಜಿಗಜಿಣಗಿ
 - ಬೀದರ್ – ಭಗವಂತ ಖೂಬಾ
 - ಉಡುಪಿ – ಕೋಟಾ ಶ್ರೀನಿವಾಸ ಪೂಜಾರಿ
 - ಧಾರವಾಡ – ಪ್ರಹ್ಲಾದ್ ಜೋಶಿ
 - ತುಮಕೂರು – ವಿ.ಸೋಮಣ್ಣ
 - ಕೊಪ್ಪಳ – ಬಸವರಾಜ್ ಕ್ಯಾವತೂರ್
 - ಬಳ್ಳಾರಿ – ಬಿ. ಶ್ರೀರಾಮುಲು
 - ಹಾವೇರಿ – ಬಸವರಾಜ ಬೊಮ್ಮಾಯಿ
 - ಬಾಗಲಕೋಟೆ – ಪಿ.ಸಿ.ಗದ್ದಿಗೌಡರ್
 - ದಾವಣಗೆರೆ – ಸಿದ್ದೇಶ್ವರ ಪತ್ನಿ ಗಾಯತ್ರಿ ಸಿದ್ದೇಶ್ವರ್
 - ಬೆಂಗಳೂರು ಉತ್ತರ – ಶೋಭಾ ಕರಂದ್ಲಾಜೆ
 - ಬೆಂಗಳೂರು ಕೇಂದ್ರ – ಪಿ.ಸಿ.ಮೋಹನ್
 - ಬೆಂಗಳೂರು ದಕ್ಷಿಣ – ತೇಜಸ್ವಿ ಸೂರ್ಯ
 - ಬೆಂಗಳೂರು ಗ್ರಾಮಾಂತರ – ಡಾ. ಸಿ.ಎನ್.ಮಂಜುನಾಥ್
 - ಚಾಮರಾಜನಗರ – ಎಸ್. ಬಾಲರಾಜ್.
 - ದಕ್ಷಿಣ ಕನ್ನಡ – ಬ್ರಿಜೇಶ್ ಚೌಟ
 - ಶಿವಮೊಗ್ಗ – ಬಿ.ವೈ.ರಾಘವೇಂದ್ರ
 
ಯಾರಿಗೆ ಶಾಕ್?
9 ಹಾಲಿ ಸಂಸದರಿಗೆ ಬಿಜೆಪಿ ಟಿಕೆಟ್ ಮಿಸ್ ಆಗಿದ್ದು, ಅದರಲ್ಲಿ ಮೈಸೂರಿನಲ್ಲಿ ಪ್ರತಾಪ್ ಸಿಂಹ, ದಕ್ಷಿಣ ಕನ್ನಡದಿಂದ ಕಟೀಲ್, ಬಳ್ಳಾರಿಯಿಂದ ದೇವೇಂದ್ರಪ್ಪ, ಕೊಪ್ಪಳದಿಂದ ಕರಡಿ ಸಂಗಣ್ಣಗೆ , ಬೆಂಗಳೂರು ಉತ್ತರದ ಸಂಸದ ಸದಾನಂದಗೌಡ, ಹಾವೇರಿಯಿಂದ ಶಿವಕುಮಾರ್ ಉದಾಸಿಗೆ . ದಾವಣಗೆರೆಯಿಂದ ಸಿದ್ದೇಶ್ವರ್ , ತುಮಕೂರಿನಿಂದ ಜಿ.ಎಸ್.ಬಸವರಾಜ್ , ಚಾಮರಾಜನಗರದಿಂದ ಶ್ರೀನಿವಾಸ್ ಪ್ರಸಾದ್ ಟಿಕೆಟ್ ನೀಡಿಲ್ಲ.

                                    