ನಮ್ಮ ಮಕ್ಕಳಿಗೆ ಬೆಳೆಯಲು ಒಳ್ಳೆ ಅವಕಾಶ ತಂದು ಕೊಟ್ಟವರೇ ಖರ್ಗೆಯವರು : ಡಿಕೆ ಶಿವಕುಮಾರ್

Most read

ಕಲಬುರ್ಗಿ: ಕಲ್ಯಾಣ ಕರ್ನಾಟಕಕ್ಕೆ ಇಂದು ಶುಭ ಗಳಿಗೆ ಆರಂಭವಾಗಿದೆ. ರಾಧಾಕೃಷ್ಣ ದೊಡ್ಡಮನಿ ಅವರು ಸರಳ ಸಜ್ಜನ ವ್ಯಕ್ತಿ. ಅವರನನ್ನು ಗೆಲ್ಲಿಸಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕರೆ ನೀಡಿದರು.

ಇಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಐದು ಗ್ಯಾರಂಟಿ ಜಾರಿಯಾಗಿವೆ. ಜನರಿಗೆ ಸರ್ಕಾರದ ಮೇಲೆ ನಂಬಿಕೆ ಇದೆ ಎಂದರು.

ಮಲ್ಲಿಕಾರ್ಜುನ ಖರ್ಗೆ ಅವರು 371 ಜೆ ಜಾರಿಗೆ ತರಲು ಸಾಕಷ್ಟು ಹೋರಾಟ ಮಾಡಿದ್ದಾರೆ. ನಮ್ಮ ಮಕ್ಕಳಿಗೆ ಬೆಳೆಯಲು ಒಳ್ಳೆ ಅವಕಾಶ ತಂದು ಕೊಟ್ಟವರೇ ಖರ್ಗೆಯವರು. ಅಂಥ ನಾಯಕರ ಕೈ ಬಲಪಡಿಸಬೇಕು. ನಿಮ್ಮ‌ ಮತ 371(J) ಗೆ ಹಾಕಿ‌ ಎಂದು ಅವರು ಮತದಾರರಲ್ಲಿ ಮನವಿ ಮಾಡಿದರು‌.

ನಮ್ಮ ತಾಯಂದಿರು ಬಸ್ ನಲ್ಲಿ‌ ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಉಚಿತ ವಿದ್ಯುತ್ ಸಿಗುತ್ತಿದೆ, ಅನ್ನಭಾಗ್ಯ ಸಿಗುತ್ತಿದೆ, ಮಹಿಳೆಯರಿಗೆ 2000 ಸಿಗುತ್ತಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತಿ‌ ಮಹಿಳೆಯರಿಗೆ 1 ಲಕ್ಷ ನೀಡುತ್ತೇವೆ ಎಂದು ಘೋಷಣೆ ಮಾಡಿದ್ದೇವೆ. ವರ್ಷಕ್ಕೆ ಒಂದು ಲಕ್ಷ ಉದ್ಯೋಗ ನೀಡುತ್ತೇವೆ ಎನ್ನುವ ಭರವಸೆ ನೀಡಿದ್ದೇವೆ ಎಂದರು.

More articles

Latest article